Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ

ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ

ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅವಳಿ ಜಿಲ್ಲೆ ರೈತರಿಗೆ ಒಂದೇ ಹಂತದಲ್ಲಿ ಪರಿಹಾರ ಧನ ವಿತರಿಸಿ
(ರಾಜ್ಯ ) ಜಿಲ್ಲೆ

ಅವಳಿ ಜಿಲ್ಲೆ ರೈತರಿಗೆ ಒಂದೇ ಹಂತದಲ್ಲಿ ಪರಿಹಾರ ಧನ ವಿತರಿಸಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸರಕಾರಕ್ಕೆ ಗಡುವು ನೀಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಗ್ರಹ

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಪರಿಹಾರವನ್ನು ೩ ಆರ್ಥಿಕ ವರ್ಷದ ಹಂತದಲ್ಲಿ ಕೊಡುವ ನಿರ್ಣಯ ಕೈಗೊಂಡಿರುವದನ್ನು ಸರಕಾರವು ಕೈಬಿಟ್ಟು ಇದೇ ೨೦೨೬ರ ಮಾರ್ಚ ತಿಂಗಳಿನ ಬಜೆಟ್‌ನ ಒಳಗಾಗಿ ಅವಳಿ ಜಿಲ್ಲೆಯ ರೈತರಿಗೆ ಒಂದೇ ಹಂತದಲ್ಲಿ ವಿತರಣೆ ಮಾಡಬೇಕು ಇಲ್ಲದಿದ್ದರೆ ಮುಂದೊಂದು ದಿನ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸರಕಾರಕ್ಕೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಗಡುವು ನೀಡಿದರು.
ಪಟ್ಟಣದ ಯುಕೆಪಿ ವೃತ್ತದಲ್ಲಿ ಪ್ರವಾಸಿ ಮಂದಿರದ ಎದುರುಗಡೆ ಆಲಮಟ್ಟಿ ಆಣೆಕಟ್ಟನ್ನು ೫೨೪ ಮೀ ಎತ್ತರ ಏರಿಸುವದರಿಂದ ಮುಳಗಡೆಯಾಗುವ ರೈತರ ಜಮೀನುಗಳಿಗೆ ನೀರಾವರಿ ಒಂದು ಎಕರೆಗೆ ೫೫ ಲಕ್ಷ ರೂ, ಒಣ ಬೇಸಾಯಕ್ಕೆ ೪೫ ಲಕ್ಷ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಿ ನಡೆದ ಸರದಿ ಉಪವಾಸ ಸತ್ಯಾಗ್ರಹವನ್ನು ಅವಳಿ ಜಿಲ್ಲೆಯ ರೈತರ ಹಾಗೂ ಗಣ್ಯ ಮಾನ್ಯರ ಜನಪ್ರತಿನಿಧಿಗಳ ಸೂಚಣೆ ಮೇರೆಗೆ ತಾತ್ಕಾಲಿಕವಾಗಿ ಹಿಂತೆಗೆದುಕೊಂಡ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಅವಳಿ ಜಿಲ್ಲೆಯಲ್ಲಿ ಬಾಗಲಕೋಟ, ಬೀಳಗಿ, ಜಮಖಂಡಿ, ಮುಧೋಳ, ಮತ್ತು ಬೆಳಗಾಂವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಬರುವ ರೈತರ ಶೇಕಡಾ ೮೦% ಭೂಮಿ ಮುಳಗಡೆಯಾಗುವದರಿಂದ ಆ ಭಾಗದ ರೈತರು ಸರಕಾರ ಕೊಡಮಾಡುವ ಪರಿಹಾರ ಧನಕ್ಕೆ ಒಪ್ಪಿಗೆ ಸೂಚಿಸಿರುವದನ್ನು ನಾನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಮನಸ್ಸಾಗುತ್ತಿಲ್ಲ ಕಾರಣ ಮೂರು ಹಂತದ ಆರ್ಥಿಕ ವರ್ಷ ಪರಿಹಾರ ವಿತರಣೆ ಮಾಡುವಾಗ ಮೊದಲ ಹಂತದಲ್ಲಿ ಪಡೆಯುವ ರೈತನಿಗೆ ಸ್ವಲ್ಪ ಮಟ್ಟಿಗೆ ಲಾಭವಾದರೆ ಎರಡು ಮತ್ತು ಮೂರನೇ ಹಂತದಲ್ಲಿ ಪಡೆಯುವ ರೈತನಿಗೆ ಈ ಪರಿಹಾರ ಹಣದ ಜೊತೆಗೆ ಹೆಚ್ಚುವರಿಯಾಗಿ ಹಣ ಕೊಡುತ್ತೇವೆ ಎನ್ನುವ ಸ್ಪಷ್ಟೀಕರಣವಿಲ್ಲ ಆದ್ದರಿಂದ ಮುಖ್ಯಮಂತ್ರಿಗಳು ಸ್ವತಃ ಹಣಕಾಸು ಸಚಿವರಾಗಿರುವದರಿಂದ ಈ ಭಾಗದ ರೈತರಿಗೆ ನ್ಯಾಯ ದೊರಕಿಸಲು ತಾವು ತೆಗೆದುಕೊಂಡ ನಿರ್ಣಯದಂತೆ ನೀರಾವರಿ ಕ್ಷೇತ್ರಕ್ಕೆ ೪೦ ಲಕ್ಷ ರೂ, ಒಣ ಬೇಸಾಯಕ್ಕೆ ೩೦ ಲಕ್ಷ ರೂ ಪರಿಹಾರ ಹಣವನ್ನು ಏಕಕಾಲಕ್ಕೆ ವಿತರಣೆ ಮಾಡಬೇಕೇಂದು ಆಗ್ರಹಿಸಿದರು.
ಒಟ್ಟು ಈ ಯೋಜನೆಯಲ್ಲಿ ಹಿನ್ನೀರಿನಿಂದ ೭೫ ಸಾವಿರ ಎಕರೆ ಭೂಮಿ ಮುಳಗಡೆಯಾದರೆ ಕಾಲುವೆ ಕಾಮಗಾರಿಗಾಗಿ ಒಟ್ಟು ೫೫ ಸಾವಿರ ಎಕರೆ ಭೂಮಿಯನ್ನು ಸರಕಾರವು ವಶಪಡಿಸಿಕೊಳ್ಳುತ್ತಿದ್ದು ಮುಳಗಡೆ ಜಮೀನಿಗೆ ಒಂದು ನ್ಯಾಯ ಕಾಲುವೆಗಾಗಿ ಪಡೆಯುವ ಜಮೀನಿಗೆ ಇನ್ನೊಂದು ರೀತಿ ನ್ಯಾಯ ಮಾಡಿರುವದು ಅಂದರೆ ಒಣ ಬೇಸಾಯಕ್ಕೆ ೨೦ ಲಕ್ಷ , ನೀರಾವರಿಗೆ ೩೦ ಲಕ್ಷ ರೂ. ಪರಿಹಾರ ಕೊಡುವ ವ್ಯತ್ಯಾಸ ಮಾಡಿರುವದು ರೈತರಲ್ಲಿಯೇ ಭೇಧ ಭಾವ ತಂದಂತಾಗುವದಿಲ್ಲವೇ ಎಂದು ಪ್ರಶ್ನೆ ಮಾಡಿದ ಅವರು ಕಾಲುವೆ ಕಾಮಗಾರಿಗಾಗಿ ಜಮೀನು ಕೊಟ್ಟ ರೈತರಿಗೂ ಕೂಡ ಮುಳಗಡೆ ಪರಿಹಾರ ಧನದಂತೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಈಗಾಗಲೇ ನ್ಯಾಯಲಯದಲ್ಲಿ ದಾವೆ ಹೂಡಿರುವ ರೈತರು ತಮ್ಮ ದಾವೆಯನ್ನು ಹಿಂದಕ್ಕೆ ಪಡೆದಾಗ ಮಾತ್ರ ಸಚಿವ ಸಂಪುಟ ನಿರ್ಣಯದಂತೆ ಪರಿಹಾರ ಹಣ ಕೊಡಲಾಗುವದು ಎಂದು ಹೇಳಿರುವ ಸರಕಾರದ ಆದೇಶವನ್ನು ಸಭೆಯಲ್ಲಿ ಸೇರಿದ ರೈತರು ಖಂಡಿಸಿದರು ಅಲ್ಲದೆ ಹಲವಾರು ರೈತರು ನ್ಯಾಯಲಯಗಳಿಂದ ಈಗಾಗಲೇ ತಮ್ಮ ತಮ್ಮ ಜಮೀನುಗಳ ಪರಿಹಾರ ಧನ ಕೊಡಲು ಸರಕಾರಕ್ಕೆ ಸೂಚಿಸಿರುವ ಆದೇಶ ಪಡೆದವರು ಹೇಗೆ ಒಪ್ಪಲು ಸಾದ್ಯ ರೈತರಿಗೆ ಪರಿಹಾರ ಧನ ಕೊಡಲು ಒಪ್ಪಿದ್ದೇವೆ ಎನ್ನುವದು ಒಂದು ಕಡೆ ಇನ್ನೊಂದು ರೈತರಿಗೆ ಅಷ್ಟು ಸುಲಬವಾಗಿ ಪರಿಹಾರ ಹಣ ದೊರಕಬಾರದು ಎನ್ನುವ ದ್ವಂದ್ವ ನಿಲವು ತಾಳಿದ ಸರಕಾರಕ್ಕೆ ದಿಕ್ಕಾರ ಕೂಗಿದರು.
ಇದೇ ಸಂಧರ್ಭದಲ್ಲಿ ವಿಶ್ವಕರ್ಮ ಜಯಂತಿಯನ್ನು ಹಾಗೂ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಹುಟ್ಟು ಹಬ್ಬವನ್ನು ರೈತರು ರಾಜಕೀಯ ಮುಖಂಡರು ಸೇರಿ ಸ್ವಚ್ಚತಾ ಆಭಿಯಾನ ಮಾಡುವದರ ಮೂಲಕ ಹಾಗೂ ೭೫ ಜನ ರಕ್ತದಾನ ಮಾಡುವ ಮೂಲಕ ಆಚರಣೆ ಮಾಡಿದರು.
ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಪ್ರಭುಸ್ವಾಮಿ ಹಿರೇಮಠ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಿದ್ದಣ್ಣ ದೇಸಾಯಿ, ಹಣಮಂತ ಚೋಳಪ್ಪಗೋಳ, ಸಂಗಣಗೌಡ ಚಿಕ್ಕೊಂಡ, ಶಿವಾನಂದ ಅವಟಿ, ಶಿವನಗೌಡ ಪಾಟೀಲ, ಎಸ್.ಎಸ್. ಗೌರಿ, ನಾಗಣ್ಣ ದೇಸಾಯಿ, ಚಂದ್ರಶೇಖರಯ್ಯ ಗಣಕುಮಾರ, ಬಸವರಾಜ ಹೂಗಾರ, ಚಿನ್ನಪ್ಪ ಗಿಡ್ಡಪ್ಪಗೋಳ, ಕಲ್ಲಪ್ಪ ಸೊನ್ನದ, ಮಲ್ಲಪ್ಪ ಗಣಿ, ಸೇರಿದಂತೆ ಅನೇಕ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ

ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ

ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್

ಡಿ.೬ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ
    In (ರಾಜ್ಯ ) ಜಿಲ್ಲೆ
  • ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ
    In (ರಾಜ್ಯ ) ಜಿಲ್ಲೆ
  • ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್
    In (ರಾಜ್ಯ ) ಜಿಲ್ಲೆ
  • ಡಿ.೬ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ರಾಣಿ ಚೆನ್ನಮ್ಮ ವಿವಿ: ಎಂಸಿಎ ಕೋರ್ಸಿಗೆ ಪ್ರವೇಶಾತಿ
    In (ರಾಜ್ಯ ) ಜಿಲ್ಲೆ
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಶಿಷ್ಯವೇತನ ಕ್ಕಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಡಿ.೭ ರಂದು ಸಾರ್ವಜನಿಕ ರಸ್ತೆ ಸಂಚಾರ ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಭೈರವಾಡಗಿ ಪಿಕೆಪಿಎಸ್ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ: ರೈತರಲ್ಲಿ ಆತಂಕ ತಂದ ಅಕಾಲಿಕ ಮಳೆ
    In (ರಾಜ್ಯ ) ಜಿಲ್ಲೆ
  • ಗೋವಿನ ಜೋಳ & ತೊಗರಿ ಖರೀದಿ ಕೇಂದ್ರ ತೆರೆಯಲು ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.