Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ
ವಿಶೇಷ ಲೇಖನ

ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ಶರಣ ಮಾಸದ ಆರನೆಯ ದಿನದ ಅನುಭಾವ ಮಾಲಿಕೆಯಲ್ಲಿ ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಕರ್ನಾಟಕದ ಗಾಂಧಿ ಎಂದೇ ಹೆಸರಾದ ಹರ್ಡೇಕರ ಮಂಜಪ್ಪ ಅವರ ಬಗೆಗೆ ಅತ್ಯಂತ ಸವಿಸ್ತಾರವಾಗಿ ತಮ್ಮ ಅನುಭಾವವನ್ನು ನೀಡಿದರು.
ಹರ್ಡೇಕರ ಮಂಜಪ್ಪನವರು ಶಿಕ್ಷಕರು, ನಿರಂಜನ ಶರಣರು, ಜನಸೇವಕರು, ಧೀಮಂತ ಪತ್ರಕರ್ತ, ರಾಷ್ಟ್ರಪ್ರೇಮದ ಮಂದಾರ ಎಂದು ಮನದುಂಬಿ ಹೇಳುತ್ತಾ, ಬನವಾಸಿ ಮೂಲದವರಾದ ಅವರ ತಂದೆ ಸಖಾರಾಮ ಅಭ್ಯoಕರ ಮತ್ತು ತಾಯಿ ಮಂಜಮ್ಮ ಹರ್ಡೇಕರ ಅವರ ಬಗೆಗೆ ಹೊಸ ಬೆಳಕನ್ನು ಚೆಲ್ಲಿದರು. ಅವರ ಬಾಲ್ಯದ ಶಿಕ್ಷಣ ಮತ್ತು ಅವರಲ್ಲಿ ಸ್ವಾತಂತ್ರದ ಅಭಿರುಚಿ ಹುಟ್ಟಿ, ಅದು ಅವರ ಜೀವನದಲ್ಲಿ ಹೇಗೆ ಒಂದು ಅಗಾಧವಾದ ತಿರುವು ಪಡೆಯಿತು ಎನ್ನುವುದನ್ನು ಅಭಿಮಾನದಿಂದ ತಿಳಿಸಿದರು


ಭಾರತ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದಾಗ,ಜನರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಹುರಿದುಂಬಿಸುವ ಕೆಲಸವನ್ನು ಮಂಜಪ್ಪನವರು ಸ್ವಾತಂತ್ರ ಚಳುವಳಿಯಲ್ಲಿ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುವದರ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡ ರಾಷ್ಟ್ರಪ್ರೇಮಿ ಮತ್ತು ಸಮಾಜಪ್ರೇಮಿ,
ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆಯಲ್ಲಿ ಬರುವ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುತ್ತಿದ್ದರು.ನಂತರ ದಾವಣಗೆರೆಗೆ ಬಂದು ಮಾಗಾನಹಳ್ಳಿ ದೊಡ್ಡಬಸಪ್ಪನವರ ಸಹಾಯ ಪಡೆದು ಧನುರ್ವಾರಿ ಪತ್ರಿಕೆ ಪ್ರಾರಂಭ ಮಾಡಿದ್ದು,ಒಂದು ಸಲ ಮುಂಬೈಗೆ ಹೋದಾಗ ಆರ್ಯ ಸಮಾಜದ ಚಟುವಟಿಕೆಗಳನ್ನು ನೋಡಿ ಪ್ರಭಾವಿತರಾಗಿ, ನಮ್ಮಲ್ಲಿಯೂ ಇಂಥ ಕೆಲಸವಾಗಬೇಕು ಎಂದು ಪ್ರೇರೆಪಿತರಾದರು.
ಗಾಂಧೀಜಿಯ ಜೊತೆಗಿನ ಅವರ ಒಡನಾಟ, ಸಾಬರಮತಿಯ ಭೆಟ್ಟಿ,ಹರಿಹರದ ಹತ್ತಿರ ಆಶ್ರಮ ಸ್ಥಾಪಿಸಿ ಸತ್ಯಾಗ್ರಹ ಸಿದ್ಧಾಂತ ಪ್ರಸಾರ ಮಾಡಿದ್ದು, ಅಥಣಿ ಮಠದಲ್ಲಿ ಮತ್ತು ಬಂಥನಾಳ ಶಿವ ಯೋಗಿಗಳಿಂದ ಲಿಂಗದೀಕ್ಷೆಪಡೆದದ್ದು, ಕಂಚಿಕೆರೆ ಮಹಾಲಿಂಗಪ್ಪನವರಿಂದ ಬಸವಣ್ಣನವರ ಕುರಿತು ಅಭಿಮಾನ ಬೆಳೆದದ್ದು, ದಾವಣಗೆರೆಯ ಮೃತ್ಯುಂಜಯ ಸ್ವಾಮಿಗಳ ಮಠದಲ್ಲಿ ಭಜನಾ ಮಂಡಳಿ ಸ್ಥಾಪಿಸಿ,ಶರಣ ಮಾಸ ಮಾಲಿಕೆ ಪ್ರಾರಂಭ ಮಾಡಿದ್ದು, ಕರಿಬಸವೇಂದ್ರ ಶಾಸ್ತ್ರಿಗಳಿಗೆ ಪತ್ರ ಬರೆದು ಬಸವಜಯಂತಿ ಯಾವಾಗ ಆಚರಣೆಮಾಡಬೇಕು ಎಂದು ತಿಳಿದುಕೊಂಡು 1913 ರಲ್ಲಿ ಮೊಟ್ಟಮೊದಲ ಬಾರಿಗೆ ಬಸವಜಯಂತಿ ಮಾಡಿದ್ದು ಐತಿಹಾಸಿಕ ದಾಖಲೆ ಎಂದು ತಿಳಿಸಿದರು.
ಹರ್ಡೇಕರ ಮಂಜಪ್ಪನವರು ಹಲವಾರು ಸಂಘ -ಸಂಸ್ಥೆಗಳನ್ನು ಕಟ್ಟಿದ್ದು ಹಲವಾರು ಪುಸ್ತಕಗಳನ್ನು ರಚಿಸಿದ್ದು ಹಂಚಿಕೊಂಡರು. ಕಡೆಯಲ್ಲಿ ಅವರು ಹೇಳಿದ ಜೀವನ ಸಂದೇಶದ ಜೊತೆಗೆ ತಮ್ಮ ಮಾತುಗಳನ್ನು ಮುಕ್ತಾಯ ಮಾಡಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಹರ್ಡೇಕರ ಮಂಜಪ್ಪನವರ ಸಮಗ್ರ ಜೀವನದ ಹೊಳಹುಗಳನ್ನು ಇನ್ನೊಮ್ಮೆ ಮೆಲುಕು ಹಾಕಿದರು.
ಡಾ. ತಾರಾ. ಬಿ. ಎನ್ ಅವರ ಪ್ರಾರ್ಥನೆ, ಶರಣ ಅರ್. ಎಸ್. ಬಿರಾದಾರ ಅವರ ಸ್ವಾಗತ,ಡಾ. ಬಸಮ್ಮ ಗಂಗನಳ್ಳಿ ಅವರ ಶರಣು ಸಮರ್ಪಣೆ, ಶರಣೆ ಸುಮಂಗಲಾ ಅಣ್ಣಿಗೇರಿ ಅವರ ವಚನ ಮಂಗಳ, ಶರಣೆ ಜಯಶ್ರೀ ಆಲೂರ ಅವರ ಕಾರ್ಯಕ್ರಮ ನಿರ್ವಹಣೆ ಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು

ಶಾರದಾ ಪಾಟೀಲ್ (ಮೇಟಿ) ವಿಶೇಷ ದತ್ತಿ ಉಪನ್ಯಾಸ

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ್ ಮೇಟಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 306

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ
    In (ರಾಜ್ಯ ) ಜಿಲ್ಲೆ
  • ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ
    In (ರಾಜ್ಯ ) ಜಿಲ್ಲೆ
  • ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ
    In (ರಾಜ್ಯ ) ಜಿಲ್ಲೆ
  • ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಪಕ್ಷದ ಬಲವರ್ಧನೆಗೆ ಮಹಿಳಾ ಕಾರ್ಯಕರ್ತೆಯರು ಶ್ರಮಿಸಬೇಕು
    In (ರಾಜ್ಯ ) ಜಿಲ್ಲೆ
  • ಆದೇಶ ಹಿಂಪಡೆಯದಿದ್ದರೆ ಬಬಲೇಶ್ವರದಿಂದಲೇ ಹೋರಾಟ
    In (ರಾಜ್ಯ ) ಜಿಲ್ಲೆ
  • ಬರಡೋಲ: ೧೨ ಜನರಿಗೆ ಪಿಂಚಣಿ ಪ್ರಮಾಣ ಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಪೊಲೀಸರ ಗುಂಡಿಗೆ ರೌಡಿ ಶೀಟರ್ ಬಲಿ
    In (ರಾಜ್ಯ ) ಜಿಲ್ಲೆ
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.