ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮ್ನ ಬೈರಸನ್ ವ್ಯಾಲಿಯಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ಧಾಳಿಯು ಅತ್ಯಂತ ಹೇಯ, ಅಮಾನವೀಯ ಕ್ರತ್ಯವಾಗಿದ್ದು ಇದನ್ನು ಕಠೀಣ ಶಬ್ದಗಳ ಮೂಲಕ ಖಂಡಿಸುವುದಾಗಿ ಶಾಸಕ ಸಿದ್ದು ಸವದಿ ಹೇಳಿದ್ದಾರೆ.
ಹೆಸರು, ಧರ್ಮವನ್ನು ಖಚಿತಪಡಿಸಿಕೊಂಡು ಹಿಂದುಗಳನ್ನೇ ಗುರಿಯಾಗಿಸಿ ನಡೆಸಿರುವುದು ಅತ್ಯಂತ ಕ್ರೂರವಾಗಿದ್ದು ಇದಕ್ಕೆ ತಕ್ಕ ಶಿಕ್ಷೆಯನ್ನು ಉಗ್ರರು ಅನುಭವಿಸಲೇ ಬೇಕಾಗುತ್ತದೆ. ಶಾಂತವಾಗಿ ಅಭಿವೃದ್ದಿ ಪಥದತ್ತ ಹೊರಟಿದ್ದ ಕಾಶ್ಮೀರ ಪ್ರವಾಸಿಗರ ಹೆಚ್ಚಳದಿಂದ ಅಲ್ಲಿನ ಜನಜೀವನ ಸುಧಾರಣೆಯತ್ತ ದಾಪುಗಾಲಿಟ್ಟಿತ್ತು, ಇದನ್ನು ಸಹಿಸದ ಉಗ್ರರು ಮತ್ತೊಮ್ಮೆ ನೀಚ ಕೃತ್ಯ ಎಸಗಿದ್ದು ಇದನ್ನು ಪ್ರತಿಯೊಬ್ಬರು ಪಕ್ಷ, ಜಾತಿ, ಧರ್ಮ ಬದಿಗಿಟ್ಟು ಖಂಡಿಸಬೇಕು, ಉಗ್ರರಿಗೆ ಅತ್ಯಂತ ಕಠೀಣ ಶಿಕ್ಷಯಾಗಬೇಕು. ಅವರನ್ನು ಹುಡುಕಿ, ಹುಡುಕಿ ಹೊಡೆಯುವ ಕಾರ್ಯ ಕೇಂದ್ರದ ನರೇಂದ್ರ ಮೋದಿ ಸರಕಾರ ಮಾಡುತ್ತದೆ ಎಂಬ ಭರವಸೆ ಇದೆ ಎಂದರು.