ಸಿಂದಗಿಯಲ್ಲಿ ಮಂದಾರ ಶಿಕ್ಷಣ ಸಂಸ್ಥೆಯ ಲಿಟಲ್ ವಿಂಗ್ಸ್ ಫೆಸ್ಟಿವಲ್ ಗೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಾಲಕರು ಚಿಕ್ಕಂದಿನಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸುವುದರ ಜೊತೆಗೆ ಸನಾತನ ಭಾರತೀಯ ಸಂಸ್ಕೃತಿಯನ್ನು ಬಿತ್ತಬೇಕು ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ನೇತೃ ತಜ್ಞ ಡಾ.ಪ್ರಭುಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಮಂದಾರ ಶಿಕ್ಷಣ ಸಂಸ್ಥೆಯ ಲಿಟಲ್ ವಿಂಗ್ಸ್ ಫೆಸ್ಟಿವಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಒಬ್ಬ ವ್ಯಕ್ತಿಯ ಉನ್ನತ ವ್ಯಕ್ತಿತ್ವದ ಹಿಂದೆ ತಂದೆ ತಾಯಿ ಸಂಸ್ಕಾರ ಜೊತೆಗೆ ಗುರುವಿನ ಮಾರ್ಗದರ್ಶನ ಅವಶ್ಯವಿರುತ್ತದೆ ಇಂತಹ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಅಡಗಿದ ಪ್ರತಿಭೆ ಹೊರ ಹೊರಹಮ್ಮಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ ಎನ್ ಬಿ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾತನಾಡಿ ಅವರು, ಮಕ್ಕಳಿಗೆ ಬಾಲ್ಯದಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದಾಗ ಮಗು ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದಿರುತ್ತದೆ. ಮಗುವಿನ ಚಿಂತನಾ ಕ್ರಮ, ಕ್ರಿಯಾಶೀಲತೆ, ವಾಕ್ ಚಾತುರ್ಯ, ಅರಿವು ಉತ್ತಮಗೊಳ್ಳುತ್ತದೆ. ಭಾವನಾತ್ಮಕ ಗುಣಗಳು ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಸಹಾಯವಾಗುತ್ತದೆ. ತಂದೆ ತಾಯಿಗಳು ತಮ್ಮ ಮಗುವಿನ ಶಿಕ್ಷಣಾ ಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಎಸ್ ಎಂ ಪಾಟೀಲ, ಸಾನಿಧ್ಯ ವಹಿಸಿದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾಜೀ ಕಾರ್ಯಕ್ರಮ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಅಶೋಕ ವಾರದ, ಮಾಂತೇಶ ಮನಗೂಳಿ ಮಾತನಾಡಿದರು.
ಸಂಜೀವಿನಿ ಆಸ್ಪತ್ರೆ ವೈದ್ಯ ಹಬೀಬ ನಾಗರಳ್ಳಿ, ರಾಕೇಶ ಕಂಠಿಗೊಂಡ, ಸಿದ್ಧಲಿಂಗ ಕಿಣಗಿ, ಶಿವಶಂಕರಗೌಡ ಪಾಟೀಲ, ಅಪ್ಪು ಕಮತಗಿ, ಶರಣಗೌಡ ಬಿರಾದಾರ, ಭಾರತಿ ಚೌಧರಿ, ಕಾವೇರಿ ಮಲ್ಲೇವಾಡಿ, ಟಿ ಕೆ. ಮಲಗೊಂಡ ಸಂಗನಗೌಡ ಹೆಚಡದ, ಶಿಲ್ಪಾ ಕುದುರಗೊಂಡ ವೇದಿಕೆ ಮೇಲಿದ್ದರು.
ಶಿಕ್ಷಕ ಸಿದ್ದಲಿಂಗ ಚೌದರಿ ಪ್ರಸ್ತಾವಿಕರಿಸಿದರು, ದೇವರಾಜ ಗದ್ದಿ ಸ್ವಾಗತಿಸಿದರು.ಅಭಿಷೇಕ ಚೌದರಿ ವಂದಿಸಿದರು.
ಇದೇ ಸಂದರ್ಭದಲ್ಲಿ ಮತ್ತು ಪಟ್ಟಣಶೆಟ್ಟಿ ದುಂಡು ಕೋತಂಬರಿ ಪೈಗಂಬರ ನಾಗರಹಳ್ಳಿ ಸೇರಿದಂತೆ ರೈತರು ಸೇರಿದಂತೆ 25 ಕ್ಕೂ ಹೆಚ್ಚು ಸಾಧಕರನ್ನು ಅಚಿವರ್ಸ್ ಆಫ್ ಸಿಂದಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಪೂಜಾ, ನಗ್ಮಾ, ಭಾಗ್ಯಾ, ಮಹೇಶ್ವರಿ,ಸುರಭಿ, ಸುಮಾ, ಭಾರತಿ, ಪೂರ್ಣಿಮಾ, ಶ್ವೇತಾ, ಸುಷ್ಮಾ,ಸರಸ್ವತಿ ಮತ್ತು ಪ್ರದೀಪ ಹಿರೇಮಠ ಸೇರಿದಂತೆ ಮತ್ತಿತರಿದ್ದರು.
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು
ನೋಡುಗರನ್ನು ರಂಜಿಸಿತು.

