ವಿಜಯಪುರದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಬ್ರಹತ್ ಪ್ರತಿಭಟನಾ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಗುತ್ತಿಗೆದಾರರ ಸಂಘದಿಂದ ವಿವಿಧ ಸರಕಾರಿ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ವಿಳಂಬವಾಗುತ್ತಿರುವದನ್ನು ಖಂಡಿಸಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಹಾತ್ಮಾ ಗಾಂಧಿ ವೃತ್ತ, ಬಸವೇಶ್ವರ ವೃತ್ತ ಅಂಬೇಡ್ಕರ ಮಾರ್ಗವಾಗಿ ಪ್ರತಿಭಟನೆಯೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಘನವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘ ಪ್ರಧಾನ ಕಾರ್ಯದರ್ಶಿ ಆಯ್.ಎಂ. ಪಟ್ಟಣಶೆಟ್ಟಿ ಮಾತನಾಡಿ, ಕಳೆದ ೨-೩ ವರ್ಷಗಳಿಂದ ಗುತ್ತಿಗೆದಾರರು ವಿವಿಧ ಇಲಾಖೆಗಳಲ್ಲಿ ಲೋಕೋಪಯೋಗಿ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತ, ಚಿಕ್ಕ ನೀರಾವರಿ, ಮಹಾನಗರಪಾಲಿಕೆ, ಪಟ್ಟಣ ಪಂಚಾಯತಿ ಹೀಗೆ ವಿವಿಧ ರೀತಿಯ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಿರುವ ಕಾಮಗಾರಿಗಳ ಹಣ ಪಾವತಿ ವಿಳಂಬವಾಗುತ್ತಾ ಬಂದಿದೆ. ಆದರೆ ಬಾಕಿ ಬಿಲ್ಗಳು ಇನ್ನೂವರೆಗೂ ಪಾವತಿಯಾಗಿರುವದಿಲ್ಲ. ಇದರಿಂದ ಗುತ್ತಿಗೆದಾರರು ಆರ್ಥಿಕವಾಗಿ ತೀವ್ರ ತೊಂದರೆಗೊಳಪಟ್ಟಿರುತ್ತಾರೆ. ಸದರಿ ಕಾಮಗಾರಿಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಸಿಮೆಂಟ್, ಕಬ್ಬಿಣ, ಡಾಂಬರ ಹಾಗೂ ಇಟ್ಟಿಗೆ, ಬಣ್ಣ, ಮರಳು, ಜಲ್ಲಿ ಪೂರೈಸಿದ ವ್ಯಾಪಾರಸ್ಥರು ಬಾಕಿ ಹಣ ಪಾವತಿಸಲು ಒತ್ತಾಯಿಸುತ್ತಿದ್ದಾರೆ. ಅದರಂತೆ ಸಾಲ ನೀಡಿದ ಬ್ಯಾಂಕಗಳು, ಸ್ವಸಹಾಯಕ ಸಂಘಗಳು, ವೈಯಕ್ತಿವಾಗಿ ಕೈಗಡ ಪಡೆದ ಸಾಲ ಕೊಟ್ಟವರು ಎಲ್ಲರು ಬಾಕಿ ಹಣ ಪಾವತಿಸುವ ಸಲುವಾಗಿ ಒತ್ತಡ ಹೇರುತ್ತಿದ್ದಾರೆ. ಈ ರೀತಿಯಾಗಿ ಒತ್ತಡದಿಂದ ರಾಜ್ಯದಲ್ಲಿ ಈಗಾಗಲೇ ಸುಮಾರು ೪-೫ ಜನ ಗುತ್ತಿದಾರರು ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ತರಹದ ಉದಾರಹರಣೆಗಳು ನಮ್ಮ ಜಿಲ್ಲೆಯಲ್ಲಿ ಸಹ ಗುತ್ತಿದಾರರು ಆತ್ಮಹತ್ಯೆಯ ನಿರ್ದಾರಗಳನ್ನು ಕೈಗೊಳ್ಳಬಹುದು ಬಾಕಿ ಹಣ ಬಿಡುಗಡೆ ಕುರಿತು ಹಲವಾರು ಬಾರಿ ವಿಧಾನ ಸಭಾ ಕಲಾಪದಲ್ಲಿಯೂ ಪ್ರಸ್ತಾಪವಾಗಿರುತ್ತದೆ. ಅಲ್ಲದೆ ಗುತ್ತೆದಾರರು ಸಂಘದ ಮೂಲಕ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿಯೂ ಈಗಾಗಲೇ ಮನವಿ ಸಲ್ಲಿಸಲಾಗಿರುತ್ತದೆ. ಆದಾಗ್ಯೂ ಯವುದೇ ಕ್ರಮ ಜರುಗಿರುವುದಿಲ್ಲ. ೨೦೨೫ ಫೆಬ್ರುವರಿ ಅಂತ್ಯದೊಳಗೆ ಸರಕಾರವು ನಮ್ಮ ಬೇಡಿಕೆಯನ್ನು ಈಡೇರಿಸದೆ ಇದ್ದರೆ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಆತ್ಮಹತ್ಯೆಯಂತಹ ನಿರ್ಧಾರಗಳು ಕೈಗೊಂಡರೆ ಇದಕ್ಕೆ ಸರಕಾರವೇ ನೇರ ಹೊಣೆಯಾಗಿರುತ್ತದೆ. ಮಾನ್ಯರು ನಮ್ಮ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿ.ಆರ್. ರೂಢಗಿ ಅಧ್ಯಕ್ಷರು, ಅರುಣ ಎಸ್. ಮಠ ಗೌರವ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಎಸ್.ಆರ್. ಡೋಣೂರಮಠ, ಉಪಾಧ್ಯಕ್ಷರು ಎಚ್.ಆರ್. ಚಿಂಚಲಿ, ಕಾರ್ಯದರ್ಶಿ ಸುನೀಲ ಉಳ್ಳಾಗಡ್ಡಿ, ತಾಂತ್ರಿಕ ಸಲಹೆಗಾರರು ಎಲ್.ಡಿ ಮಡಗೊಂಡ, ಗುರು ಕವಲಗಿ, ರಮೇಶಗೌಡ ಪಾಟೀಲ, ಅರುಣಕುಮಾರ ಬಿ. ನರಸರಡ್ಡಿ, ಮುತ್ತು ಎಂ. ಮುಂಡೇವಾಡಿ, ಸುರೇಶಗೌಡ ಪಾಟೀಲ, ಎಂ.ಆರ್. ತಾಂಬೋಳೆ, ಸುಜಿತ ಎಸ್. ಬಿಜ್ಜಲಬಾವಿ, ಸಿದ್ದು ಬಿರಾದಾರ, ಶ್ಯಾಮ ಪಾತ್ರದ, ಜೆ.ಜಿ. ಕಲ್ಲೂರ, ಆರ್.ಎಂ. ಮಾವಿನಗಿಡದ, ಎ.ಎಸ್. ಬಿರಾದಾರ, ಆರ್.ಬಿ. ನಂದ್ಯಾಗೋಳ, ಎಸ್.ಸಿ. ಚಿಕ್ಕರಡ್ಡಿ, ಬಿ.ಎಸ್. ಬಿರಾದಾರ,ಎನ್.ವಿ. ಕುಲಕರ್ಣಿ, ಎಸ್.ಎಸ್. ಆಲೂರ, ಎಸ್.ಟಿ. ಬಿಜ್ಜಲಬಾವಿ, ಎ.ಎಸ್. ಪಾಟೀಲ, ಪ್ರವೀಣ ಹಿರೇಮಠ, ಸಿ.ಆರ್. ಗಂಗಾಧರ, ಉಮೆಶ ಮೆಟಗಾರ, ಸಂಜು ಜತ್ತಿ, ಡಿ.ಜಿ. ಬಿರಾದಾರ, ರವೀಂದ್ರ ಬಿಜ್ಜರಗಿ, ಎಸ್.ಎಸ್. ಸಿರಾಡೋಣ, ಶಿವು ಗದಿಗೆಪ್ಪಗೌಡ, ಸುಭಾಸ ಪಾಟೀಲ, ರಾಜು ಪದ್ಮಣ್ಣವರ ಮುಂತಾದವರು ಭಾಗವಹಿಸಿದ್ದರು.

