ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಫೆ.15 ರಂದು ನಗರದ ಸಮನ್ವಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ( ಸಿದ್ದೇಶ್ವರ ಕಲಾ ಮಂದಿರದ ಕಟ್ಟಡ) ಬಿ ಎಲ್ ಡಿ ಇ ರೋಡ್ ಶ್ರೀ ಸಿದ್ದೇಶ್ವರ ದೇವಸ್ಥಾನ ಸಮೀಪ ವಿಜಯಪುರ. ಇಲ್ಲಿ ಮಧ್ಯಾಹ್ನ 1.30 ಗಂಟೆಗೆ ರಾಜ್ಯಮಟ್ಟದ ಚಿತ್ರಕಲಾ ಶಿಕ್ಷಣ ಶಿಕ್ಷಕರ ಸಭೆಯನ್ನು ಕರೆಯಲಾಗಿದೆ.
ಕಾರಣ ಆಸಕ್ತಿಯುಳ್ಳ ಚಿತ್ರಕಲಾ ಶಿಕ್ಷಣ ಶಿಕ್ಷಕರು ಸಭೆಗೆ ಬರುವಾಗ ಸನ್ 2004–05 ರ ಹಾಗೂ ಸನ್ 2007–08 ರ ನೇಮಕಾತಿ ಅಧಿಸೂಚನೆಗೆ ಅರ್ಜಿ ಸಲ್ಲಿಸಿದ ದಾಖಲೆಗಳು ಮತ್ತು ನೇಮಕಾತಿ ಆದೇಶದ ಪತ್ರ ದೊಂದಿಗೆ ಹಾಜರಿರಲು ಕರ್ನಾಟಕ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟದ ಅಧ್ಯಕ್ಷರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಜಿ ಎಸ್. ಪಾಟೀಲ್ ಅಧ್ಯಕ್ಷರು,ಮೊ:9663156228.ಸಂಜೀವ ಆರ್. ಪಂಚಾಲ್. ಪ್ರಧಾನ ಕಾರ್ಯದರ್ಶಿಗಳು, ಮೊ:9740613629.ಹಾಗೂ ಕೆ ಎ. ಮುಲ್ಲಾ ಸಹಕಾರ್ಯದರ್ಶಿ. ಮೊ: 9900836213.
