ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರ ಸಾರ್ವಜನಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು ಸಹ ಈ ಲಾಯಿನ್ ಸಂಸ್ಥೆಯು ಆರೋಗ್ಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಜಾಗತಿಕ ಶಾಂತಿಗಾಗಿ ಪ್ರಯತ್ನಿಸುವ ಕಾರ್ಯ ಶ್ಲಾಘನೀಯ ಎಂದು ಲಾಯಿನ್ಸ್ ಕ್ಲಬ್ ಇಂಟರ್ನ್ಯಾಷನಲ್ ೩೧೭ಬಿಯ ಜಿಲ್ಲಾ ಗವರ್ನರ್ ಲಾಯಿನ್ ಮನೋಜ ಮಾಣಿಕ ಹೇಳಿದರು.
ಸಿಂದಗಿ ಪಟ್ಟಣದ ಆಲಮೇಲ ರಸ್ತೆಯಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಿಂದಗಿ ಲಾಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಪದಗ್ರಹಣ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ನೂತನ ಸದಸ್ಯರಿಗೆ ಲಾಯನ್ಸ್ ಕ್ಲಬ್ನ ಕಿಟ ವಿತರಿಸಿ ಮಾತನಾಡಿದ ಅವರು, ಲಾಯಿನ್ಸ್ ಸದಸ್ಯರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಭೂಕಂಪ, ನೆರೆಹಾವಳಿ ಮತ್ತು ಜನಸಾಮಾನ್ಯರ ಆರೋಗ್ಯ ಕಾಪಾಡುವಲ್ಲಿ ಅಂತರಾಷ್ಟ್ರೀಯ ಲಾಯಿನ್ಸ್ ಕ್ಲಬ್ ಕಳೆದ ೧೦೭ ವರ್ಷಗಳಿಂದ ನಿರಂತರವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ ಎಂದರು.
ಈ ವೇಳೆ ಸಮಾರಂಭದ ಅಧ್ಯಕ್ಷತೆಯನ್ನು ಸಿಂದಗಿ ಲಾಯಿನ್ಸ್ ಸಂಸ್ಥೆಯ ಅಧ್ಯಕ್ಷ ಮಹಾದೇವ ಲೋಣಿ ವಹಿಸಿದ್ದರು.
ಲಾಯನ್ ಕೆ.ಎಚ್.ಸೋಮಾಪೂರ ಖಜಾಂಚಿ ಬಿ.ಪಿ.ಕರ್ಜಗಿ, ಲಾಯಿನ್ ಸದಸ್ಯರಾದ ಎಸ್.ಬಿ.ಚಾಗಶೆಟ್ಟಿ ಆಯ್.ಬಿ.ಬಿರಾದಾರ, ಪಿ.ಎಂ. ಮಡಿವಾಳ ಸೇರಿದಂತೆ ಅನೇಕರು ಇದ್ದರು. ಪ್ರತಿಜ್ಞಾವಿದಿಯನ್ನು ಬಿ.ಎಂ.ಸಿಂಗನಳ್ಳಿ, ಡಾ.ಅಂಬರೀಷ ಬಿರಾದಾರ, ಪಿ.ಎಂ.ಮಡಿವಾಳರ, ಶಾಂತು ದುರ್ಗಿ, ಶರಣಬಸವ ಆರ್.ಬೂದಿಹಾಳ ಹಾಗೂ ಎಸ್.ಎಚ್.ಜಾಧವ ಅವರಿಗೆ ಬೋಧಿಸಲಾಯಿತು.

