ರಚನೆ
– ಮಮತಾ ಶೃಂಗೇರಿ
ಉದಯರಶ್ಮಿ ದಿನಪತ್ರಿಕೆ
ದೂರ ದಿಗಂತದಲಲ್ಲಿ,
ನೇಸರನು ಉದಯಿಸಿರಲು
ಭುವಿಯೆಲ್ಲಾ ಬೆಳಕಾಗಿ,
ಎಲ್ಲೆಡೆ ಸೊಬಗು ಸುರಿದಿರಲು.
ಹಕ್ಕಿಗಳ ಚಿಲಿಪಿಲಿ ಉಲಿಗೆ,
ಮನದಿ ಉಲ್ಲಾಸ ಮೂಡಿರಲು,
ಬಿದ್ದ ಇಬ್ಬನಿಯ ಹನಿಯೊಳು,
ಸಪ್ತವರ್ಣಗಳು ಪ್ರತಿಫಲಿಸಿರಲು.
ಎಳೆ ಬಿಸಿಲ ಹೊಂಗಿರಣ,
ಸುಳಿಯೆಲೆಯ ಮೇಲೆ ಬಿದ್ದಿರಲು,
ಚಳಿಗೆ ಮುದುಡಿದ ಮೊಗ್ಗು,
ಅರೆಬಿರಿದು ಅರಳಿ ನಗುತಿರಲು.
ಸುಂದರವು ಈ ಧರೆಯು
ಪದಗಳಲಿ ವರ್ಣಿಸಲು ಅಸದಳವು
ಬರೆಯ ಹೊರಟರೆ ಇಲ್ಲಿ
ವರ್ಣಮಾಲೆಯೇ ಸೋಲುವುವು.
