ಚಿಮ್ಮಡ; ಗ್ರಾಮದ ರೈತರ ಆರಾದ್ಯ ದೇವತೆ ಸೀಮಿ ಲಕ್ಕವ್ವದೇವಿ ಜಾತ್ರಾ ಮಹೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ವಿಜ್ರಂಬಣೆಯಿAದ ಜರುಗಿತು.
ಗ್ರಾಮದಿಂದ ಜಗದಾಳ ರಸ್ತೆಗೆ ಹೊಂದಿಕೊAಡಿರುವ ದೇವಸ್ಥಾನದಲ್ಲಿ ಬೆಳಿಗ್ಗೆ ೬ ಘಂ,ಗೆ ನಡೆಯುವ ವಿಶೇಷ ಅಭಿಷೇಕದೊಂದಿಗೆ ಪ್ರಾರಂಭಗೊAಡ ಜಾತ್ರಾ ಮಹೋತ್ಸವದಲ್ಲಿ ಮದ್ಯಾಹ್ನ ದೇವಿಯ ಉಡಿ ತುಂಬುವ ಕಾರ್ಯಕ್ರಮ ನಡೆಯಿತು ನಂತರ ನಡೆದ ಮಹಾಪ್ರಸಾದ ವಿತರಣೆಯಲ್ಲಿ ಜಾತ್ರಾ ಸಮೀತಿಯ ಪ್ರಮುಖರು ಸೇರಿದಂತೆ ಸಾವಿರಾರು ಜನ ರೈತರು ಪಾಲ್ಗೊಂಡು ತಮ್ಮ ಆರಾದ್ಯ ದೇವತೆಗೆ ಹರಕೆ ಸಲ್ಲಿಸಿದರು. ಜಾತ್ರೆಯ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಹೊನ್ನುಟಿಗಿ ಗೌಡಪ್ಪಾ ಮಾಸ್ತರ ನೇತ್ರತ್ವದ ಶ್ರೀ ಬೀರದೇವರ ಗಾಯಣ ಸಂಘ ಹಾಗೂ ವಿಜಯಪೂರ ಜಿಲ್ಲೆಯ ಜಿಗಜಿನಗಿಯ ಮಧುಮಾರಯ ನವರ ನೇತ್ರತ್ವದ ಅಮೋಘಸಿದ್ದೇಶ್ವರ ಗಾಯಣ ಸಂಘದಿAದ ಪ್ರಸಿದ್ದ ಡೊಳ್ಳಿನ ಪದಗಳ ಸ್ಪರ್ಧಾ ಜುಗಲ್ಬಂದಿ ಕಾರ್ಯಕ್ರಮ ತಡ ರಾತ್ರಿಯ ವರೆಗೆ ನಡೆಯಿತು. ಇದರಲ್ಲಿ ವಿಜೇತ ತಂಡಕ್ಕೆ ವಿಶೇಷ ಬಹುಮಾನಗಳ£ರಿಸಿದ್ದೇಶ್ವgಕ್ನು ಸ್ಥಳೀಯ ಸೀಮಿ ಲಕ್ಕವ್ವದೇವಿ ಜಾತ್ರಾ ಸಮೀತಿ ಕೊಡಮಾಡಿದರು. ಇದೇ ವೇಳೆ ಜಾತ್ರಾ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದ ಹಲವಾರು ಪ್ರಮುಖರನ್ನು ಸತ್ಕರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment