Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಪರಿಸರ ಸಮತೋಲನಕ್ಕೆ ಸುಸ್ಥಿರ ಮೀನುಗಾರಿಕೆ
ವಿಶೇಷ ಲೇಖನ

ಪರಿಸರ ಸಮತೋಲನಕ್ಕೆ ಸುಸ್ಥಿರ ಮೀನುಗಾರಿಕೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದು (ನ.೨೧) ‘ವಿಶ್ವ ಮೀನುಗಾರಿಕಾ ದಿನ’ ನಿಮಿತ್ತ ಈ ವಿಶೇಷ ಲೇಖನ

ಲೇಖನ
ಡಾ.ಗೌತಮ್ ಆರ್. ಚೌಧರಿ
ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ

ಉದಯರಶ್ಮಿ ದಿನಪತ್ರಿಕೆ

ಸಮುದ್ರ ಬಹುರತ್ನಾ ವಸುಂಧರಾ. ಮುತ್ತು, ರತ್ನ, ವಜ್ರ, ವೈಡೂರ್ಯ ಇತ್ಯಾದಿ ಹಲವು ಅಮೂಲ್ಯ ಹರಳುಗಳಿಗೆ ಆಗರ ಈ ಸಾಗರ. ಜೊತೆಗೇ ಮೀನೂ ಸೇರಿದಂತೆ ದೊಡ್ಡ ಮಟ್ಟದ ಸಮುದ್ರಜೀವಿಗಳ ರಾಶಿಯೂ ಇಲ್ಲಿದೆ. ಇದು ಬಹುದೊಡ್ಡ ಮಾನವ ಸಮುದಾಯವನ್ನೂ ಪೊರೆಯುತ್ತಿದೆ. ಸಮುದ್ರದ ಒಡಲು ಇಷ್ಟು ಮೌಲ್ಯವಾದುದೇನೋ ನಿಜ. ಹಾಗಂತ, ಸಾಗರ ಎಲ್ಲ ಮಾಲಿನ್ಯಕಾರಕ ವಸ್ತುಗಳಿಗೂ ಆಕರ ಎಂದೇನಲ್ಲ. ಮನುಷ್ಯನ ಚಟುವಟಿಕೆಗಳ ಪರಿಣಾಮವಾಗಿ ಈ ರತ್ನಗರ್ಭೆ ಇಂದು ‘ಮಲಿನಗರ್ಭೆ’ಯಾಗುತ್ತಿದೆ. ಹೀಗಾಗದಂತೆ ಎಚ್ಚರಿಸಿ, ವಿವೇಕಯುತ ಮೀನುಗಾರಿಕೆಗೆ ಪ್ರೇರೇಪಿಸುವ ದಿನವೇ ನ.೨೧ ರ ‘ವಿಶ್ವ ಮೀನುಗಾರಿಕಾ ದಿನ’.
ಈ ದಿನವು ನಮಗೆ ಸಮುದ್ರದ ಸಂಪತ್ತನ್ನು ರಕ್ಷಿಸುವ ಮತ್ತು ಮೀನುಗಾರಿಕೆ ಉದ್ಯಮದ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಅಗತ್ಯತೆಯನ್ನು ನೆನಪಿಸುತ್ತದೆ. ನಾವು ಒಟ್ಟಾಗಿ ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಅನುಸರಿಸುವುದು, ಸಮುದ್ರ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿಭಾಯಿಸುವುದು ಮುಖ್ಯ.


ಸಮುದ್ರ ವಿರೋಯಾದ ಹಲವು ನಡೆಗಳು ಇಂದು ಮಾನವರಿಂದ ಕಂಡುಬರುತ್ತಿದೆ. ಕೈಗಾರಿಕೆಗಳ ತ್ಯಾಜ್ಯಗಳು ನೇರ ಸಾಗರವನ್ನೇ ಸೇರುತ್ತಿವೆ. ಸಮುದ್ರಗಳಲ್ಲಿ ಚಲಿಸುವ ಎಷ್ಟೋ ಹಡಗುಗಳಿಂದ ವಿಷಕಾರಿಯಾದ ತೈಲಗಳು ನೀಲಿನೀರರಾಶಿಗೆ ಸೇರಿ, ಸಮುದ್ರದಲ್ಲಿನ ಮೀನಿನಂತಹ ಜೀವಿಗಳ ಸಾವಿಗೂ ಕಾರಣವಾಗುತ್ತಿವೆ.
ಇದೀಗ ಈ ಸಂಬಂಧವಾಗಿ ಎದುರಾಗಿರುವ ಇನ್ನೊಂದು ಬಿಕ್ಕಟ್ಟಿನ ಬಗೆಗೂ ಹಲವರಿಗೆ ಅರಿವಿರಬೇಕು. ಕಾಸರಕೋಡ್ ಟೊಂಕಾ ಹೊನ್ನಾವರ ಬಂದರು ಯೋಜನೆಯನ್ನು ಸರಕಾರವು ಕೈಗೊಂಡಿದ್ದು, ಇದು ಸ್ಥಳೀಯವಾಗಿ ಬಹುದೊಡ್ಡ ಪರಿಣಾಮ ಬೀರುವಂತಿದೆ. ಇಲ್ಲಿ ಈ ಯೋಜನೆ ಬರುತ್ತಿರುವುದರಿಂದ ಜೀವಜಗತ್ತಿನ ಅಪರೂಪದ ಪ್ರಾಣಿಯಾದ ‘ರಿಡ್ಲೆ ಕಾಮನ್ ಆಮೆ’ಗಳ ಆವಾಸಕ್ಕೂ ಇದು ಕುತ್ತು ತರುತ್ತಿದೆ. ಹೊನ್ನಾವರ ಸಮುದ್ರ ತೀರದ ಈ ಭಾಗವೆಂದರೆ ರಿಡ್ಲೆ ಆಮೆಗಳು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮ ಸಂತಾನೋತ್ಪತ್ತಿ ಮಾಡುವ ಪ್ರದೇಶ. ಈ ರಿಡ್ಲೆ ಕಾಮನ್ ಆಮೆಗಳ ಪ್ರಭೇದ ಇಡೀ ದೇಶದಲ್ಲಿ ಇರುವುದು ಕೇವಲ ಐದು. ಇವುಗಳ ತೆಳ್ಳನೆಯ ತೋಳುಗಳು ಮತ್ತು ಹಸಿರು ಮೇಣುಗಳಿಂದ ಕೂಡದ ದೇಹವು ಅತ್ಯಂತ ವಿಶಿಷ್ಟ. ಇವು ಸಮುದ್ರ ಪರಿಸರ ವ್ಯವಸ್ಥೆಯ ಭಾಗವಾಗಿದ್ದು, ಸಮುದ್ರದಲ್ಲಿನ ಪ್ರಾಣಿಗಳ ಸಮತೋಲನವನ್ನು ಕಾಪಾಡುತ್ತವೆ. ಅಪರೂಪದ ಈ ಆಮೆತಳಿಗಳಿಗೆ ಇಲ್ಲಿನ ಬಂದರು ನಿರ್ಮಾಣ ಯೋಜನೆಯಿಂದ ತೊಂದರೆಯಾಗುತ್ತದೆ. ಇದು ಸಾಗರದ ಸಮೋಲನವನ್ನು ಏರುಪೇರುಗೊಳಿಸಬಹುದು. ಇದಲ್ಲದೆ, ಸ್ಥಳೀಯ ಜನಜೀವನದ ಮೇಲೂ ಇದು ಆಘಾತ ಉಂಟುಮಾಡುವ ಸಾಧ್ಯತೆ ಇದೆ. ನೈಸರ್ಗಿಕ ಸೌಂದರ್ಯ ಮತ್ತು ಜೀವವೈವಿಧ್ಯತೆಗೆ ಹೆಸರಾದ ಪರಿಸರಕ್ಕೆ ಇದು ಘಾತವಾಗಿ ಪರಿಣಮಿಸಬಹುದು, ಕಡಲತೀರದ ನಾಶಕ್ಕೂ ಕಾರಣವಾಗಿ ಸ್ಥಳೀಯ ಮೀನುಗಾರರ ಬದುಕಿಗೂ ಹಾನಿ ಮಾಡಬಲ್ಲುದು. ಹೀಗಾಗಿ, ಈ ಯೋಜನೆಯ ವಿರುದ್ಧ ಈಗಾಗಲೇ ದನಿ ಕೇಳಿಬರುತ್ತಿದೆ.
ಇಂದು ಮೀನುಗಾರರಿಗೆ ಹಲವಾರು ಸವಾಲುಗಳಿವೆ. ಅತಿ ಮೀನುಗಾರಿಕೆ, ಸಮುದ್ರದ ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಸಮುದ್ರದ ಅಪಾಯಕಾರಿ ಚಟುವಟಿಕೆಗಳು ಮೀನುಗಾರಿಕೆ ಉದ್ಯಮದ ಸ್ಥಿರತೆಯನ್ನು ಕುಗ್ಗಿಸುತ್ತಿವೆ. ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಅನುಸರಿಸಿ, ಈ ಉದ್ಯಮದ ಸ್ಥಿರತೆ ಕಾಪಾಡಿಕೊಳ್ಳಲು ನಾವು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಸಮುದ್ರದ ಸಂಪತ್ತನ್ನು ಸಂರಕ್ಷಿಸುವುದು, ಮೀನುಗಾರಿಕೆಯ ಕಾರ್ಯಾಚರಣೆಯನ್ನು ನಿಯಂತ್ರಿಸುವುದು, ಸಮುದ್ರ ಮಾಲಿನ್ಯವನ್ನು ತಡೆಗಟ್ಟುವುದು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿಭಾಯಿಸುವುದು ಮೊದಲಾದ ಎಚ್ಚರಿಕೆಯ ಹೆಜ್ಜೆಗಳನ್ನು ಅನುಸರಿಸಿದರೆ ಸಮುದ್ರದ ಸಮತೋಲನವನ್ನು ಕಾಪಾಡಬಹುದು. ಇದು ಮೀನುಗಾರರ ಬದುಕಿಗೂ ಪೂರಕ, ನೈಸರ್ಗಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿಯು ಮುಖ್ಯ. ಸುಸ್ಥಿರ ಮೀನುಗಾರಿಕೆಯ ಮೂಲಕ ಮೀನುಗಾರರ ಹಿತ ಕಾಪಾಡಲು ಮೀನುಗಾರರ ಸಂಘವು ಸದಾ ಬದ್ಧವಾಗಿದೆ. ಪರಿಸರದ ಸಮತೋಲನ ಸಾಧ್ಯವಿದ್ದರೆ ಮಾತ್ರ ಮನುಷ್ಯರ ಬದುಕೂ ಆರೋಗ್ಯಕರವಾಗಿರಬಲ್ಲುದು ಎಂಬುದನ್ನು ನಂಬಿ ಸುಸ್ಥಿರ, ನಿಯಂತ್ರಿತ ಮೀನುಗಾರಿಕೆಗೆ ನಾವು ಮನಮಾಡಬೇಕಿದೆ.

ಬಂದರು ಯೋಜನೆ: ಪರಿಸರ & ಜನಜೀವನದ ಮೇಲೆ ದೊಡ್ಡ ಆಘಾತ

ಕಾಸರಕೋಡ್ ಟೊಂಕಾ ಹೊನ್ನಾವರ ಬಂದರು ಯೋಜನೆಯು ಕರ್ನಾಟಕದ ಕೆರೆಯ ಕರಾವಳಿಯಲ್ಲಿ ಇರುವ ಹೊನ್ನಾವರ ಪಟ್ಟಣದ ಸಮೀಪದಲ್ಲಿ ಕಾಸರಕೋಡ್ ಟೊಂಕಾ ತೀರದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಈ ಯೋಜನೆಯು ಪರಿಸರ ಮತ್ತು ಜನಜೀವನದ ಮೇಲೆ ದೊಡ್ಡ ಆಘಾತವನ್ನು ಉಂಟುಮಾಡುವ ಸಾಧ್ಯತೆಯಿದೆ. ಕಾಸರಕೋಡ್ ಟೊಂಕಾ ತೀರವು ರಿಡ್ಲಿ ಕಾಮನಗಳ ಆವಾಸಸ್ಥಾನವಾಗಿದೆ. ಈ ಯೋಜನೆಯು ಈ ಪ್ರದೇಶದ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವ ಸಾಧ್ಯತೆಯಿದೆ. ಇದಲ್ಲದೆ, ಈ ಯೋಜನೆಯು ಸಮುದ್ರದ ಕಡಲತೀರದ ನಾಶಕ್ಕೂ ಕಾರಣವಾಗುತ್ತದೆ.
ಕಾಸರಕೋಡ್ ಟೊಂಕಾ ತೀರವು ಸ್ಥಳೀಯ ಮೀನುಗಾರರಿಗೆ ಜೀವನೋಪಾಯವಾಗಿದೆ ಎನ್ನುತ್ತಾರೆ ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಗೌತಮ್ ಆರ್. ಚೌಧರಿ ಅವರು‌.

“ಹೊನ್ನಾವರದ ಕಾಸರ್ಕೋಡ್ನಲ್ಲಿ ಉದ್ದೇಶಿತ ಬಂದರು ಯೋಜನೆಯನ್ನು ಸರಕಾರ ಕೈಬಿಟ್ಟು ವಿನಾಶದ ಅಂಚಿನಲ್ಲಿರುವ ರಿಡ್ಲೆ ಆಮೆಗಳ ಸಂರಕ್ಷಣೆ ಮತ್ತು ಅಲ್ಲಿ ಮೀನುಗಾರಿಕೆಯನ್ನೇ ನಂಬಿ ವಾಸಿಸುತ್ತಿರುವ ಮೀನುಗಾರರ ಕುಟುಂಬಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.”

ಡಾ.ಗೌತಮ್ ಆರ್. ಚೌಧರಿ
ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.