ದೇವರಹಿಪ್ಪರಗಿಯಲ್ಲಿ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು ಕೇವಲ ತಮ್ಮ ಲಾಭಕ್ಕಾಗಿ ಕಾರ್ಯನಿರ್ವಹಿಸದೇ ರೈತರು ಹಾಗೂ ಜನತೆಯ ಏಳಿಗೆಗಾಗಿ ಶ್ರಮ ವಹಿಸುತ್ತಿವೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ಪಟ್ಟಣದ ಸದಯ್ಯನಮಠದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ವಿ.ಪ್ರಾ.ಗ್ರಾ.ಕೃ.ಸ.ಸಂಘಗಳು ಚಟ್ಟರಕಿ, ಮುಳಸಾವಳಗಿ, ಕೋರವಾರ, ಬಮ್ಮನಜೋಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂದು ಸಹಕಾರ ಸಂಘಗಳು ಆರಂಭದಲ್ಲಿ ಕೆಲವೇ ಬಂಡವಾಳದೊಂದಿಗೆ ಆರಂಭಗೊಂಡು ಇಂದು ಬೃಹತ್ ಬ್ಯಾಂಕ್ಗಳಾಗಿ ಬೆಳೆದಿವೆ. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಬೆಳೆಯಬೇಕು ಅದರಲ್ಲಿ ರಾಜಕಾರಣ ಬೇಡ ಎಂದರು.
ಕರ್ನಾಟಕ ರಾಜ್ಯ ಸಹಕಾರ ವಿಮಾ ಮಹಾಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಸಂಗನಬಸಪ್ಪ ತಳೇವಾಡ, ಸಹಾಯಕ ನಿಬಂಧಕ ಕೆ.ಎಚ್.ವಡ್ಡರ, ಡಾ. ಆರ್.ಆರ್.ನಾಯಿಕ್, ಸಂಗಮೇಶ ಛಾಯಾಗೋಳ, ಸಂಗನಗೌಡ ಬಿರಾದಾರ, ಎಂ.ಎಸ್.ಪಾಟೀಲ(ಕೋರಳ್ಳಿ), ಸಿದ್ದು ಆನಂದಿ ಮಾತನಾಡಿದರು.
ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎ.ಎಸ್.ಚಂದಾವಾಲೆ ಸಹಕಾರ ನೀತಿ, ಶೂನ್ಯ ಬಡ್ಡಿದರ, ಸಂಘಗಳ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ೨ನೇ ಸಹಕಾರಿ ಸಂಘ ಪ್ರಶಸ್ತಿ ಪಡೆದ ಮಾಡಬಾಳ ವಿ.ಪ್ರಾ.ಗ್ರಾ ಕೃಷಿ ಸಹಕಾರಿ ಸಂಘದ ಸಿಬ್ಬಂದಿ ಹಾಗೂ ಇತರ ಸಂಘಗಳ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಸ್ಥಳೀಯ ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಂತರ ಚಿಕ್ಕರೂಗಿ ವಿ.ಪ್ರಾ.ಗ್ರಾ.ಕೃ.ಸ.ಸಂಘದಿಂದ ೫೨ ಸಾವಿರ ರೂಗಳು. ಹಾಗೂ ಮಣೂರ ಸಹಕಾರಿ ಸಂಘದಿಂದ ೧೨ ಸಾವಿರ ರೂ.ಗಳನ್ನು ಸಹಕಾರ ಶಿಕ್ಷಣ ನಿಧಿ ಚೆಕ್ ವಿತರಿಸಲಾಯಿತು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಈರಣ್ಣ ಪಟ್ಟಣಶೆಟ್ಟಿ, ವೀರನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷರುಗಳಾದ ರಾಮನಗೌಡ ಪಾಟೀಲ, ಭೀಮಾಶಂಕರ ಪಟ್ಟಣಶೆಟ್ಟಿ , ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಶರಣಗೌಡ ಅಂಗಡಿ, ಈರಣ್ಣ ವಸ್ತ್ರದ, ಜೆ.ಬಿ.ಜನಗೊಂಡ, ಹುಸೇನಿ ಬಿಜಾಪೂರ ಸಹಿತ ತಾಲ್ಲೂಕಿನ ವಿ.ಪ್ರಾ.ಗ್ರಾ.ಕೃ.ಸ.ಸಂಘಗಳ ಆಡಳಿತ ಮಂಡಳಿ, ಸಿಬ್ಬಂದಿ ಇದ್ದರು.

