ಮದಭಾವಿ ಅರಣ್ಯ ಹುಲ್ಲುಗಾವಲಿನಲ್ಲಿ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆಗೆ ತಡೆಗೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕವಲಗಿ ಮದಭಾವಿ ಅರಣ್ಯ ಹುಲ್ಲುಗಾವಲಿನಲ್ಲಿ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆಯೂ ಕಳೆದ ಕೆಲವು ತಿಂಗಳಿನಿಂದ ಎಗ್ಗಿಲ್ಲದೇ ನಡೆಯುತ್ತಿದ್ದು, ತಲಾಟಿ ಹಾಗೂ ತಹಶಿಲ್ದಾರರ ಗಮನಕ್ಕೆ ಮೌಕೀಕವಾಗಿ ತಿಳಿಸಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ, ಇದರಿಂದಾಗಿ ಅರಣ್ಯ ಸಂಪತ್ತು ನಾಶವಾಗುವುದರಲ್ಲಿ ಸಂಶಯವಿಲ್ಲ, ಇದು ನಿರಂತರವಾದರೆ ಅರಣ್ಯದ ಜೊತೆ ರಸ್ತೆ ಕೂಡಾ ಹಾಳಾಗುತ್ತಿದೆ ಅಂತಹ ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ರೈತಸಂಘ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಜೆ.ಸಿ.ಪಿಗಳಲ್ಲಿ ದೊಡ್ಡ ದೊಡ್ಡ ಭಾರತಬೆಂಚ್ ವಾಹನಗಳ ಮೂಲಕ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆ ಮಾಡುತ್ತಿರುವುದರಿಂದ ಒಳ್ಳೆಯ ಡಾಂಬರ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ, ಇದರಿಂದ ಜನಸಾಮಾನ್ಯರಿಗೂ ಹಾಗೂ ಸರಕಾರಕ್ಕೆ ದೊಡ್ಡ ನಷ್ಟ ಉಂಟಾಗುತಿದೆ, ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ಮಾಡಿ ಅಕ್ರಮ ಮುರ್ಮ(ಗರಚು) ಸಾಗಾಣೆಯನ್ನು ತಡೆಯಬೇಕೆಂದರು.
ಈ ಕುರಿತು ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ಸಂಬಂಧಿಸಿದ ಕಂದಾಯ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಈ ರೀತಿಯ ಕಾನೂನು ಭಾಹಿರ ಚಟುವಟಿಕೆ ನಿಲ್ಲಿಸುವಂತೆ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಅರಣ್ಯ ಸಂಪೂರ್ಣ ನಾಶವಾಗಿ ಮನಕುಲವೇ ವಿನಾಶವಾಗುವದರಲ್ಲಿ ಸಂಶಯವಿಲ್ಲ ಎಂದರು.
ಈ ವೇಳೆ ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮನಗೌಡ ಪಾಟೀಲ, ತಾ ಅಧ್ಯಕ್ಷ ಮಹಾದೇವಪ್ಪ ತೇಲಿ, ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ಕವಲಗಿ ಗ್ರಾಮ ಘಟಕದ ಸದಸ್ಯರಾದ ಶಿವಾನಂದ ಪಟ್ಟಣ ಅವರು ಇದ್ದರು.

