ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ದುಡಿದದ್ದೆಲ್ಲವನ್ನು ದುಶ್ಚಟಗಳಿಗೆ ಖರ್ಚುಮಾಡುವ ಬದಲು ಜೀವನ ನಿರ್ವಹಣೆಯ ಜೊತೆಗೆ ದೇವಸ್ಥಾನಗಳಿಗೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸ್ವಲ್ಪ ಹಣ ವಿನಿಯೋಗಿಸುವ ಮೂಲಕ ಸಾರ್ಥಕತೆ ಮೆರೆಯಬೇಕೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಬನಶಂಕರಿದೇವಿ ಕಲ್ಯಾಣಮಂಟಪದಲ್ಲಿ ಶನಿವಾರ ಶ್ರೀ ಬನಶಂಕರಿದೇವಿ ಸೇವಾ ಸಮೀತಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಣಿಕೆ ಡಬ್ಬಿ ವಿತರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಕಷ್ಟಕಾಲದಲ್ಲಿ ಕೈ ಹಿಡಿಯುವುದು ನಾವು ಮಾಡಿದ ಪುಣ್ಯ ಕಾರ್ಯಗಳಾದ ದಾನ, ಧರ್ಮಗಳು. ಇಂದು ಸಾರಾಯಿ, ಗುಟಖಾ, ಮುಂತಾದ ದುಶ್ಚಟಗಳಿಗಳಿಗೆ ದಾಸರಾಗಿ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ, ಅದರ ಬದಲಾಗಿ ಆ ಹಣವನ್ನು ದೇವಸ್ಥಾನ, ಇಲ್ಲವೇ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟು ಆರೋಗ್ಯಕರ ಜೀವನ ನಡೆಸಬೇಕು. ಸಮೀತಿಯವರು ಮನೆ, ಮನೆಗೆ ಕಾಣಿಕೆ ಡಬ್ಬಿ ವಿತರಿಸುವ ಮೂಲಕ ಪುಣ್ಯಕಾರ್ಯಕ್ಕೆ ಸುಲಭ ವಿಧಾನ ನೀಡಿದ್ದು ಪ್ರತಿಯೊಬ್ಬರು ಸತ್ಕಾರ್ಯದಲ್ಲಿ ಭಾಗಿಯಾಗಬೇಕೆಂದರು.
ಹಟಗಾರ ಸಮಾಜದ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ರಾಜು ಭದ್ರಣ್ಣವರ ಮಾತನಾಡಿ ಈ ಭಾಗದಲ್ಲಿ ಹಲವಾರು ಸಾಮಾಜಿಕ, ಸಾಂಸ್ಕçತಿಕ ಕಾರ್ಯಗಳು ಹಟಗಾರ ಸಮಾಜದಿಂದ ನಡೆಯುತಿದ್ದು ಯಾವುದೇ ಸಮಾಜದ ಕಾರ್ಯಗಳಿಗೆ ಯಾವುದೇ ಸೇವೆಯ ಅಗತ್ಯವಿದ್ದರೂ ಸ್ಪಂದಿಸಲು ಸಿದ್ದವೆಂದರು.
ಸಂಸ್ಥೆಯ ಪ್ರಮುಖರಾದ ಅಶೋಕ ಧಡೂತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಹಟಗಾರ ಸಮಾಜದ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಾಲಾ ಬಾವಲತ್ತಿ, ಪ್ರವೀಣ ಮೈತ್ರಿ, ಗುರಲಿಂಗಪ್ಪಾ ಪೂಜಾರಿ, ಸೇರಿದಂತೆ ಹಲವು ಪ್ರಮುಖರು ಮಾತನಾಡಿದರು.
ಸಮಾರಂಭದ ಸಾನಿಧ್ಯವನ್ನಿ ಶ್ರೀ ಜನಾರ್ಧನ ಮಹಾರಾಜರು ವಹಿಸಿದ್ದರು.
ಅಧ್ಯಕ್ಷತೆಯನ್ನು ಸೇವಾ ಸಮೀತಿಯ ಅಧ್ಯಕ್ಷ ಚಂದ್ರಕಾಂತ ಜಾಡಗೌಡರ ವಹಿಸಿದ್ದರು.
ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪದ್ಮಾವತಿ ಪ್ರಭು ಭಜಂತ್ರಿ,
ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ನಿಂಗಣ್ಣ ಪೂಜಾರಿ, ರ.ಬ. ತಾಲೂಕು ನೇಕಾರರ ಒಕ್ಕೂಟದ ಅಧ್ಯಕ್ಷೆ ಹೇಮಾ ಪಟ್ಟಣ, ಸೇರಿದಂತೆ ಹಲವು ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು, ಹಾಗೂ ಸಾಂಕೇತಿಕವಾಗಿ ಹಲವರಿಗೆ ಕಾಣಿಕೆ ಡಬ್ಬಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ನಿವೃತ ಮುಖ್ಯೋಪಾದ್ಯಾಯ ಶಿಕ್ಷಕ ಮಂಜು ಧಡೂತಿ ಸ್ವಾಗತಿಸಿದರು, ಕೆ.ಎಂ. ಬಿಜಾಪೂರ ನಿರೂಪಿಸಿದರು. ಶ್ರೀಮತಿ ಶಾಖಾಂಬರಿ ಕರಡಿ ವಂದಿಸಿದರು.

