ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿ ನಿಯೋಜಿತ ಭಕ್ತ ಕನಕದಾಸ ವೃತ್ತದಲ್ಲಿ ಹಾಲುಮತ ಸಮಾಜ ಬಾಂಧವರು ಭಕ್ತ ಕನಕದಾಸ ಜಯಂತಿಯಂಗವಾಗಿ ಸೋಮವಾರ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನಕದಾಸ ಜಯಂತಿಯನ್ನು ಆಚರಿಸುವ ಮೂಲಕ ಕನಕದಾಸರಿಗೆ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಈರಕಾರ ಮುತ್ಯಾ, ಮುತ್ತು ಒಡೆಯರ, ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ರಾಜಶೇಖರ ಆಸಂಗಿ, ಮುಖಂಡರಾದ ಸಂಗಮೇಶ ಓಲೇಕಾರ, ಸಂಗಪ್ಪ ವಾಡೇದ, ಮಲ್ಲಿಕಾರ್ಜುನ ಅಂಬಳನೂರ, ಮಲ್ಲಿಕಾರ್ಜುನ ಶೇಬಗೊಂಡ, ಮಹೇಶ ಹಿರೇಕುರಬರ, ಎಲ್.ಬಿ.ಕಂದಗಲ್ಲ, ಅಪ್ಪು ವಾಡೇದ, ಮಲ್ಲಪ್ಪ ಗುಂಡಳ್ಳಿ, ಸಿದ್ದಪ್ಪ ಹಿರೇಕುರಬರ, ಕರೆಯಪ್ಪ ಬಂಚೋಡಿ, ವೀರಭದ್ರ ತೋಟದ, ಮುದುಕಪ್ಪ ಕಲ್ಯಾಣಿ, ಬಸವಂತಯ್ಯ ಗುರುವಿನ, ಶಿವಣ್ಣ ಮಸ್ಕನಾಳ, ಸುಭಾಸ ಬೂದಿಗೋಳಿ, ಶಿವಾನಂದ ವಾಡೇದ, ರೇಣುಕಾ ಅಂಬಳನೂರ, ಬೌರಮ್ಮ ಬೂದಿಗೋಳಿ, ಗೀತಾ ವಾಡೇದ, ಯಲ್ಲಮ್ಮ ಕಲ್ಯಾಣಿ, ರತ್ನಾಬಾಯಿ ಕಲ್ಯಾಣಿ, ಸುನಂದಾ ವಾಡೇದ, ಕಾಶೀಬಾಯಿ ಹಿರೇಕುರಬರ, ಸವಿತಾ ಕಲ್ಯಾಣಿ, ದೊಡ್ಡಪ್ಪನವರ ಸೇರಿದಂತೆ ಇತರರು ಇದ್ದರು.

