ಸಿಂದಗಿ ಬಿಜೆಪಿ ಮಂಡಲದಿಂದ ೨೦೨೪ರ ಸದಸ್ಯತ್ವ ಅಭಿಯಾನ, ಸಂಘಟನಾ ಪರ್ವ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಿಎಂ ಮೋದಿ ಅವರ ನೇತೃತ್ವದಲ್ಲಿರುವ ಬಿಜೆಪಿ ಪಕ್ಷ ಬಲವಾಗುವುದರ ಜೊತೆಗೆ ದೇಶದ ಅಭಿವೃದ್ಧಿ ಉನ್ನತ ಮಟ್ಟದಲ್ಲಿ ಬೆಳೆಯುತ್ತಿದೆ. ಭಾರತ ವಿಶ್ವಗುರುವನ್ನಾಗಿಸಲು ಎಲ್ಲರೂ ಪಣತೊಟ್ಟು ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಿಂದಗಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡ ೨೦೨೪ರ ಸದಸ್ಯತ್ವ ಅಭಿಯಾನ, ಸಂಘಟನಾ ಪರ್ವ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಹ ಬಿಜೆಪಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡು ಎಲ್ಲಾ ಕಾರ್ಯಕರ್ತರು ಸಕ್ರಿಯ ಸದಸ್ಯರಾಗಬೇಕು.ನಾನು ಸಂಸದನಾಗಿ, ಕೇಂದ್ರ ಸಚಿವನಾಗಿ ಹತ್ತು ಹಲವಾರು ಕಾರ್ಯಗಳನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ ಎಂದರು.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಪ್ರಸ್ತುತ ಸರ್ಕಾರ ಕೇವಲ ಮಾತಿಗಷ್ಟೇ ಸರ್ಕಾರವಾಗಿದ್ದು, ಕಾರ್ಯಗಳು ಮಾತ್ರ ಶೂನ್ಯ. ರೈತರ ಕಷ್ಟಗಳು ಕೇಳುವವರಿಲ್ಲ, ರೈತರು ಇಂದು ಜಮೀನಗಳನ್ನು ಕಳೆದುಕೊಂಡು ಬೀದಿ ಪಾಲಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ಎಲ್ಲಾ ಆಸ್ತಿಗಳ ಕಾಲಂ ೧೧ರಲ್ಲಿರುವ ವಕ್ಫ್ ಅನ್ನುವಂತದ್ದು ತೆಗೆದಹಾಕಿ ಎಲ್ಲ ರೈತರಿಗೂ ನ್ಯಾಯ ಕೊಡಿಸುವಂತಾಗಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದತೆ ನೋಡಿಕೊಳ್ಳುವ ಂ ನಮ್ಮದು. ಹಾಗೂ ರೈತರಿಗೆ ನ್ಯಾಯ ಸಿಗುವವರೆಗೂ ನಮ್ಮ ಈ ಹೋರಾಟ ನಿರಂತರವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವೇಕ ಡಬ್ಬಿ ಮಾತನಾಡಿ, ಬಿಜೆಪಿ ಪಕ್ಷ ಈಗಾಗಲೇ ಸುಮಾರು ೮ಕೋಟಿ ಸದಸ್ಯತ್ವ ನೋಂದಣಿಯನ್ನು ಮಾಡಲಾಗಿದೆ. ಇನ್ನೂ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಮಾಡಿ ೧೦ಕೋಟಿಯ ಗುರಿ ತಲುಪಬೇಕಾಗಿದೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಸದಸ್ಯರನ್ನಾಗಿ ಮಾಡೋಣ ಎಂದು ಹೇಳಿದರು.
ಸಭೆಯಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಳುಗೋಡ ಪಾಟೀಲ ಈರಣ್ಣ ರಾವೂರು, ಮಲ್ಲಿಕಾರ್ಜುನ ಜೋಗುರ, ಶಂಕರ ಬಗಲಿ, ಶ್ರೀಮಂತ ನಾಗೂರ, ಬಿ.ಆರ್.ಯಂಟಮಾನ, ಸಿದ್ದು ಬುಳ್ಳಾ, ನೀಲಮ್ಮ ಯಡ್ರಾಮಿ, ಅಶೋಕ ಅಲ್ಲಾಪುರ, ಪ್ರಧಾನ ಕಾರ್ಯದರ್ಶಿ ಗುರು ತಳವಾರ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

