ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಪಿ.ಕೆ ನಗರದ ಅಂಗನವಾಡಿ ನಂ-೧ ರ ಕಾರ್ಯಕರ್ತೆ ಶಾಂತಾ ಮಾಮನಿ ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಇಲ್ಲಿನ ತಹಶೀಲ್ದಾರ ಕಚೇರಿಯ ಆವರಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮೂರು ದಿನಗಳನ್ನು ಪೂರೈಸಿ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
ಧರಣಿ ಸ್ಥಳದಲ್ಲಿ ಹೋರಾಟಗಾರ್ತಿ ಮಾಮನಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಇಲಾಖೆಯಿಂದಲೇ ಅನ್ಯಾಯವಾಗಿದ್ದು ಹೋರಾಟ ನಡೆದು ಮೂರು ದಿನಗಳು ಕಳೆದರೂ ಸೌಜನ್ಯಕ್ಕೂ ಯಾರೊಬ್ಬ ಅಧಿಕಾರಿಯೂ ಬಂದು ಭೇಟಿ ನೀಡಿಲ್ಲ. ನನಗೆ ಸೂಕ್ತ ನ್ಯಾಯ ಸಿಗುವವರೆಗೂ ನಾನು ಧರಣಿ ಕೈಬಿಡೊಲ್ಲ ಎಂದು ಕಣ್ಣೀರಿಡುತ್ತ ಹೇಳಿದರು.
ಈ ವೇಳೆ ರಾಜಶ್ರೀ ಮಮದಾಪೂರ, ವಿದ್ಯಾ ಮುರಾಳ, ಎಸ್.ಎ.ಹುನಶ್ಯಾಳ, ಸಾಹೆಬ್ಬೀ ಕೆಸರಟ್ಟಿ, ನಿಂಬಕ್ಕ ಕಾಳಾಪೂರ, ಶ್ವೇತಾ ಚಟ್ಟರಕಿ, ಜುಲೇಖಾ ದಾಂಡಿಯಾ, ಗಂಗಮ್ಮ ಬಿರಾದಾರ, ನಿಂಗಮ್ಮ ವಡಗೇರಿ, ಎಸ್.ಎಚ್.ಇನಾಮದಾರ ಸೇರಿದಂತೆ ಮತ್ತೀತರರು ಇದ್ದರು.

