ಮುದ್ದೇಬಿಹಾಳ: ಗಾಂಧೀಜಿಯವರೊಬ್ಬರು ವ್ಯಕ್ತಿಯಾಗಿರಲಿಲ್ಲ ದೊಡ್ಡ ಶಕ್ತಿಯಾಗಿದ್ದರು. ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರ ಊಹಿಸಲೂ ಸಾಧ್ಯವಿಲ್ಲ ಎಂದು ಎಂಜಿವಿಸಿ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ಎಚ್.ಸಜ್ಜನ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಶಾ ಎಸರ್.ಪಿ.ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಳೇಜಿನಲ್ಲಿ ನಡೆದ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ನೈತಿಕ ಮೌಲ್ಯಗಳು ಕುರಿತಾದ ರಾಜ್ಯ ಮಟ್ಟದ ವಿಶೇಷ ಉಪನ್ಯಾಸ, ರಸಪ್ರಶ್ನೆ, ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಗಿನ ಕಾಲದಲ್ಲಿ ಭಾರತೀಯರು ಗುಲಾಮರಾಗಿದ್ದರು. ಬ್ರಿಟೀಷರು ಭಾರತೀಯರನ್ನ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದ ಗಾಂಧೀಜಿಯವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಆಗಿನ ಗಾಂಧಿಯುಗ ಮತ್ತೆ ಮರುಕಳಿಸಬೇಕಿದೆ. ಗಾಂಧಿಯವರ ಬಗ್ಗೆ ಮಕ್ಕಳಲ್ಲಿ ಇಲ್ಲ ಸಲ್ಲದ್ದನ್ನು ಹೇಳಿ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. ಅದನ್ನು ಹೋಗಲಾಡಿಸಬೇಕು ಎಂದರು.
ಕಾನಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿ, ಗಾಂಧೀಜಿಯವರಲ್ಲಿ ನಾಯಕತ್ವದ ಗುಣಗಳಿದ್ದವು. ಸತ್ಯ, ಅಹಿಂಸೆ ಬಲವಾಗಿ ಪ್ರತಿಪಾದಿಸಿದ್ದರು. ಇಂದಿನ ವಿದ್ಯಾರ್ಥಿಗಳು ಗಾಂಧೀಜಿ ಅವರನ್ನು ಸಂಪೂರ್ಣ ಅರಿತುಕೊಂಡು ಅವರಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಬೇನಾಳ ಆರ್ಎಸ್ನ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ನ ಸಂಸ್ಥಾಪಕ ನೇತಾಜಿ ಗಾಂಧಿ ಮಾತನಾಡಿ, ಜಗತ್ತಿನ ಸರ್ವಶ್ರೇಷ್ಠ ನಾಯಕ ಗಾಂಧೀಜಿ. ೧೮೪ ರಾಷ್ರಗಳಲ್ಲಿ ಗಾಂಧೀಜಿ ಪ್ರತಿಮೆ ಇವೆ. ಅವರು ಪತ್ರಕರ್ತರೂ ಅಗಿದ್ದರು. ಅವರ ಬಗ್ಗೆ ಮಾತನಾಡುವ ಪರಿಪೂರ್ಣತೆ ಯಾರಿಗೂ ಇಲ್ಲ ಎಂದರು.
ಪ್ರಾಂಶುಪಾಲ ಪ್ರೊ.ಸಿಕಂದರ್ ಧನ್ನೂರ, ಭೂದಾನಿ ಗುಲಾಬಚಂದ ಓಸ್ವಾಲ್, ವಿಜ್ಞಾನ ಶಿಕ್ಷಕ ಎಲ್.ಪಿ.ಕುಲಕರ್ಣಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಉಪ ವಿಭಾಗದ ಎಇಇ ಆರ್.ಎಸ್.ಹಿರೇಗೌಡರ, ಕಾಲೇಜಿನ ಉಪನ್ಯಾಸಕರು, ಪದವಿ ವಿದ್ಯಾರ್ಥಿಗಳು, ಎನ್ಎಸ್ಎಸ್ ಸ್ವಯಂ ಸೇವಕರು ಸೇರಿದಂತೆ ಮತ್ತೀತರರು ಇದ್ದರು. ಡಾ.ಎಚ್.ಎ.ಕಟಗೂರ, ಪ್ರೊ.ಸನಾವುಲ್ಲಾ ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

