ಮುದ್ದೇಬಿಹಾಳ: ನಿಗಧಿತ ಬಾಡಿಗೆಗಿಂತ ಹೆಚ್ಚಿನ ಹಣ ಪಡೆದುಕೊಳ್ಳುವದು, ಅತೀ ವೇಗದ ಚಲಾವಣೆ, ಮಧ್ಯದ ಅಮಲಿನಲ್ಲಿ ಅಟೋ ರಿಕ್ಷಾ ಚಲಾಯಿಸಿದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ಪಿಎಸ್ಐ ಸಂಜೀವ ತಿಪರೆಡ್ಡಿ ಎಚ್ಚರಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಟೋರಿಕ್ಷಾ ಚಾಲಕರು ಮತ್ತು ಮಾಲೀಕರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಡ್ಡಾಯವಾಗಿ ಪ್ರತಿಯೊಬ್ಬ ಆಟೊರಿಕ್ಷಾ ಚಾಲಕರು ಚಾಲನಾ ಪರವಾನಿಗೆ, ವಾಹನ ವಿಮೆ, ಆರ್ಸಿ ಪುಸ್ತಕ ಹೊಂದಿರಬೇಕು. ಪ್ರಯಾಣಿಕರು ಕೇಳಿದ ಸ್ಥಳಗಳಿಗೆ ಕರೆದುಕೊಂಡು ಹೋಗಲು ನಿರಾಕರಿಸುವಂತಿಲ್ಲ, ಯಾವೊಬ್ಬ ಚಾಲಕರು ಸಮವಸ್ತ್ರ ಧರಿಸದೇ ಆಟೋ ಚಲಾವಣೆ ಮಾಡುವಂತಿಲ್ಲ, ಆಟೋರಿಕ್ಷಾದಲ್ಲಿ ಮೀಟರ ಅಳವಡಿಸಿಕೊಳ್ಳಬೇಕು, ಮಹಿಳಾ ಪ್ರಯಾಣಿಕರ ಜೊತೆ ದುರ್ನಡತೆ ತೋರಬಾರದು, ಪಟ್ಟಣದಲ್ಲಿ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ಪಾರ್ಕಿಂಗ್ ಮಾಡಬೇಕು, ಚಾಲರು ತಮ್ಮ ಆಟೋರಿಕ್ಷಾದಲ್ಲಿ ಮೀತಿಗಿಂತ ಹೆಚ್ಚಿನ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳನ್ನು ಹಾಕುವುದು, ಅತೀಯಾದ ವೇಗ, ಹಿಂದೆ ಬರುವ ವಾಹನಗಳಿಗೆ ರಸ್ತೆ ನೀಡದಿರುವದು, ಗುಟಕಾ ತಿನ್ನುತ್ತ ಚಲಾವಣೆ ಮಾಡುವದು, ಉಗಿಯಲು ಹೊರಕ್ಕೆ ಕುತ್ತಿಗೆ ಹಾಕುವದು, ರಿಕ್ಷಾ ಸ್ಟ್ಯಾಂಡ್ ನಲ್ಲಿ ಅನುಚಿತ ವರ್ತನೆ ಕಂಡು ಬಂದಲ್ಲಿ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳೂವದಾಗಿ ಎಚ್ಚರಿಸಿದರು.
ಈ ವೇಳೆ ಕ್ರೈಂ ಪಿ.ಎಸ್.ಆಯ್ ಆರ್.ಎಲ್.ಮುನ್ನಾಬಾಯಿ ಮಾತನಾಡಿ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಲ್ಲದೆ ರಸ್ತೆ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕು. ಬಾಡಿಗೆಗೆ ಹೋದಾಗ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.
ಈ ವೇಳೆ ಪೊಲೀಸ್ ಸಿಬ್ಬಂದಿಗಳು, ೧೦೦ಕ್ಕೂ ಹೆಚ್ಚು ರಿಕ್ಷಾ ಚಾಲಕರು ಮತ್ತು ಮಾಲೀಕರು ಭಾಗಿಯಾಗಿದ್ದರು
Subscribe to Updates
Get the latest creative news from FooBar about art, design and business.
ಆಟೋ ಚಾಲಕರು ಅನುಚಿತ ವರ್ತನೆ ತೋರಿದರೆ ಸೂಕ್ತ ಕ್ರಮ :ತಿಪರೆಡ್ಡಿ
Related Posts
Add A Comment

