ಆಲಮಟ್ಟಿ: ಇಲ್ಲಿನ ಮಂಜಪ್ಪ ಹಡೇ೯ಕರ ಹಾಗೂ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಪ್ರೌಢಶಾಲೆಯ ಅವರಣದಿಂದ ಅತಿ ಸನಿಹದಲ್ಲೇ ಎದುರಿಗಿರುವ ನಿಡಗುಂದಿ-ಆಲಮಟ್ಟಿ ರಸ್ತೆವರೆಗೆ ಸಿ.ಸಿ.ರಸ್ತೆಯೊಂದನ್ನು ನಿಮಿ೯ಸಿ ಕೊಡಬೇಕೆಂದು ಕನಾ೯ಟಕ ಪ್ರದೇಶ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ ಸಂಯುಕ್ತಾ ಪಾಟೀಲ ಅವರಿಗೆ ಸಂಸ್ಥೆಯ ಮುಖ್ಯಸ್ಥರು ಮನವಿ ಪತ್ರ ಸಲ್ಲಿಸಿದರು.
ಇಲ್ಲಿ ಕಾಲೇಜು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂಯುಕ್ತಾ ಪಾಟೀಲ ಅವರಿಗೆ ಸಿಸಿ ರಸ್ತೆ ಬೇಡಿಕೆಯುಳ್ಳ ಮನವಿ ಪತ್ರವೊಂದನ್ನು ಎಸ್.ವ್ಹಿ. ವ್ಹಿ. ಸಂಸ್ಥೆಯ ಕಾರ್ಯದರ್ಶಿ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಸಲ್ಲಿಸಿದರು.
ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪ ಹಾಗೂ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಮಹಾನ ಶರಣರ ಹೆಸರಿನಿಂದ ನಡೆಯಲ್ಪಡುತ್ತಿರುವ ವಿದ್ಯಾಲಯದ ಮುಂದಿನ ರಸ್ತೆಯನ್ನು ಸಿ.ಸಿ.ರಸ್ತೆಯನ್ನಾಗಿ ಮಾಡಿಕೊಡಬೇಕೆಂದು ಸಂಯುಕ್ತಾ ಪಾಟೀಲ ಅವರಲ್ಲಿ ಬೇಡಿಕೆಯುಳ್ಳ ಮನವಿ ಪತ್ರ ಅಪಿ೯ಸಲಾಯಿತು.
ಮಹಾನುಭಾವರ ಹೆಸರಿನಿಂದ ಇವೆರಡು ವಿದ್ಯಾಲಯಗಳನ್ನು ಆಡಳಿತ ಮಂಡಳಿಯವರು ನಿಮಿ೯ಸಿರುವ ಒಂದೇ ಕಟ್ಟಡದ ಸೂರಿನಡಿ ನಡೆಯುತ್ತಿದೆ. ಈ ಎರಡು ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯ ರಸ್ತೆಯಿಂದ ಶಾಲಾ-ಕಾಲೇಜು ಕಟ್ಟಡದವರೆಗೆ ಅಂದಾಜು 200 ಮೀ.ಮಣ್ಞಿನ ರಸ್ತೆ ಇದ್ದು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ,ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಈ ಸಮಸ್ಯೆ ತಮ್ಮ ಗಮನಕ್ಕೂ ಈ ಮುಂಚೆಯೂ ತರಲಾಗಿದೆ. ತಾವು ಕೂಡಾ ಸಿಸಿ ರಸ್ತೆ ಮಾಡಿಕೊಡುವುದಾಗಿ ಭರವಸೆಯನ್ನು ನೀಡಿರುವಿರಿ. ಮಳೆಗಾಲದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಕಾರಣ ಶಿಕ್ಷಣ ಬಗ್ಗೆ ಕಾಳಜಿ ಹೊಂದಿರುವ ತಾವು ಮತ್ತು ಈ ಭಾಗದ ಜನಪ್ರಿಯ ಶಾಸಕರು,ಮಂತ್ರಿಗಳು ಅಗಿರುವ ತಮ್ಮ ತಂದೆಯವರಾದ ಶಿವಾನಂದ ಪಾಟೀಲರು ಈ ಶಾಲೆ,ಕಾಲೇಜಿಗೆ ಸಿ.ಸಿ.ರಸ್ತೆಯನ್ನು ಕಲ್ಪಿಸಕೊಡುತ್ತಾರೆಂದು ಸಾವಿರಾರು ಯುವ ವಿದ್ಯಾರ್ಥಿಗಳು,ಸಂಸ್ಥೆಯ ನೂರಾರು ಸಿಬ್ಬಂದಿಗಳು ನಂಬಿದ್ದಾರೆ. ಅಚ್ಚಳಿಯದಂತೆ ಉಳಿಯುವ ಈ ಸಿಸಿ ರಸ್ತೆ ಕಾರ್ಯವನ್ನು ತಾವು ನೆರವೇರಿಸಿ ಕೊಡುವಿರೆಂಬ ಆಚಲ ವಿಶ್ವಾಸ ಈ ಭಾಗದ ಜನತೆದ್ದಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಮುಖ್ಯಸ್ಥರ ಮನವಿಗೆ ಸ್ಪಂದಿಸಿ ಈಡೇರಿಸುವ ಭರವಸೆ ಸಂಯುಕ್ತಾ ಪಾಟೀಲ ನೀಡಿದರು. ಪ್ರೊ,ಎಸ್.ಎಸ್.ಪಟ್ಟಣಶೆಟ್ಟರ, ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ, ವಿಶ್ರಾಂತ ಪ್ರಾಚಾರ್ಯ, ಬಸವನ ಬಾಗೇವಾಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಪಾಟೀಲ, ವಿಶ್ರಾಂತ ಪ್ರಾಧ್ಯಾಪಕ ಬಿ.ಎಮ್.ಹಿರೇಮಠ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

