ದೇವರಹಿಪ್ಪರಗಿ: ವಿದ್ಯಾರ್ಥಿಗಳು ಭವಿಷ್ಯದ ಕನಸನ್ನು ಸಾಕರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಆಗ ಕನಸು ನನಸಾಗಲು ಸಾಧ್ಯ ಎಂದು ವಿಶ್ರಾಂತ ದೈಹಿಕ ನಿರ್ದೇಶಕ ಅಶೋಕಕುಮಾರ ಜಾಧವ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿದ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಗೈಡ್ಸ್ ರೆಡ್ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಭವಿಷ್ಯದ ಕುರಿತು ಕನಸು ಹೊಂದಿ ತನ್ನ ಕನಸಿನ ಕುರಿತು ಹುಚ್ಚಾಗಬೇಕು ಆಗ ಮಾತ್ರ ಕನಸು ಸಾಕಾರಗೊಳ್ಳುವುದು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಡಿಯಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಅಂತರ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿ, ಅಂತರ ಮಹಾವಿದ್ಯಾಲಯಗಳ ೮ನೇ ಅಥ್ಲೇಟಿಕ್ ಕ್ರೀಡಾಕೂಟ, ಕ್ರಿಕೆಟ್ ಪಂದ್ಯಾವಳಿಗಳನ್ನು ಏರ್ಪಡಿಸುವುದರ ಮೂಲಕ ಮೂವರು ವಿದ್ಯಾರ್ಥಿಗಳು ಯೂನಿವರ್ಸಿಟಿ ಬ್ಲೂಗಳಾಗಿದ್ದು ಹಾಗೂ ೨೦ ಕಿ.ಮೀಗಳ ಮ್ಯಾರಥಾನ್ ಸ್ಪರ್ಧೆಯಲ್ಲಿ ಕಾಲೇಜಿನ ನೀಲಮ್ಮ ಪೂಜಾರಿ ಹಾಗೂ ಕುರೇಶಾಭಾನು ೩ ಮತ್ತು ೪ನೇ ಸ್ಥಾನ ಪಡೆದಿದ್ದು ನನ್ನ ಕ್ರೀಡಾಜೀವನದ ಅಮೂಲ್ಯ ಕ್ಷಣಗಳು. ಇದಕ್ಕೆ ಕಾರಣೀಭೂತರಾದ ಕಾಲೇಜಿನ ಪ್ರಾಂಶುಪಾಲ ಸಹಿತ ಸಿಬ್ಬಂದಿ ಹಾಗೂ ಪಟ್ಟಣದ ಕ್ರೀಡಾಪ್ರೇಮಿಗಳಿಗೆ ಅನಂತ ಧನ್ಯವಾದ ತಿಳಿಸುತ್ತಾ ಭಾವುಕರಾದರು.
ಕೊಂಡಗೂಳಿ ಕೇಶಿರಾಜ ಪ್ರೌಢಶಾಲೆಯ ವಿಶ್ರಾಂತ ಮುಖ್ಯಶಿಕ್ಷಕ ಎಸ್.ಎನ್.ಬಸವರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಯನಿಸುವ ಅಗತ್ಯತೆಯಿದೆ ಎಂದು ಹೇಳುತ್ತಾ, ರಾಜಕೀಯ, ಸಂಸ್ಕೃತಿ, ಕನ್ನಡ ಭಾಷಾಭಿಮಾನದ ಕುರಿತು ಸುದೀರ್ಘವಾಗಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಶ್ಮೀತಾ ಹಳ್ಳಿ ವಿದ್ಯಾರ್ಥಿನಿಯಿಂದ ನಂದ ನಂದ ನಾನೇನು ಶ್ರೀಕೃಷ್ಣ ಎಂಬ ಗೀತೆಗೆ ಭರತನಾಟ್ಯ ಜರುಗಿತು. ನಂತರ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕೊನೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಶುಭಕೋರುವ ಮೂಲಕ ಬಿಳ್ಕೋಡಲಾಯಿತು.
ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಪಿ.ಸಿ.ತಳಕೇರಿ, ಅಧೀಕ್ಷಕ ಜಗನ್ನಾಥ ಸಜ್ಜನ, ಉಪನ್ಯಾಸಕರುಗಳಾದ ಎಸ್.ಬಿ.ಜಾಲವಾದಿ, ಅಕ್ರಮಪಾಷಾ, ದ್ರಾಕ್ಷಾಯಣಮ್ಮ ಎನ್.ಪಿ, ಪ್ರೇಮಕುಮಾರಿ ಪಿ. ಜ್ಯೋತಿ ಹೂಗಾರ, ಎಮ್.ಎಸ್.ಶಿವಶರಣರ, ಬಿ.ಎಸ್.ಬಗಲಿ, ಎಸ್.ಎಸ್.ಗೌಡರ, ಶಿವಕುಮಾರ ಹಿರೇಮಠ, ಗೋಪಾಲ ಚಕ್ರಸಾಲಿ, ವಿಜಯಲಕ್ಷ ್ಮೀ, ಯಾಸ್ಮೀನ್ ನದಾಫ್, ಬಿ.ಎಚ್.ಹೊಸಮಟ್ಟಿ, ಭೀಮನಗೌಡ ಬಿರಾದಾರ, ಬಿ.ಎಚ್.ಹೊನಮಟ್ಟಿ, ಸವಿತಾ ಪಾಟೀಲ, ಎಚ್.ಎ.ಇನಾಮದಾರ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳು ಭವಿಷ್ಯದ ಕನಸನ್ನು ಸಾಕರಗೊಳಿಸಲು ಪ್ರಯತ್ನಿಸಿ :ಜಾಧವ
Related Posts
Add A Comment

