ಬಸವನಬಾಗೇವಾಡಿ: ತಾಲೂಕಿನ ಆರೂಢನಂದಿಹಾಳ ಗ್ರಾಮದ ಶ್ರೀಗುರು ಆರೂಢರ 116ನೇ ಜಯಂತ್ಯೋತ್ಸವ ಹಾಗೂ ಆರೂಢನಂದಿಹಾಳ ಗ್ರಾಮದ ಮರುನಾಮಕರಣ ಕಾರ್ಯಕ್ರಮ ಜೂ.22 ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಕಡಕೋಳದ ರಾಜಗುರು ಮಹಾಲಿಂಗ ಸ್ವಾಮಿ ವಹಿಸುವರು. ತಹಸೀಲ್ದಾರ ವೈ.ಎಸ್ ಸೋಮನಕಟ್ಟಿ ಉದ್ಘಾಟಿಸುವರು. ಪ್ರವಚನಕಾರ ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ, ಹುಣಶ್ಯಾಳ ಪಿಬಿಯ ಶಂಕರ ಆಲೂರ, ಗ್ರಾಪಂ ಸದಸ್ಯ ರಾಮಚಂದ್ರ ಸಾಸನೂರ ಹಾಗೂ ಪಾರ್ವತಿ ಶಂ ಹಳ್ಳಿ ಅತಿಥಿಗಳಾಗಿ ಆಗಮಿಸುತ್ತಾರೆ. ಅಧ್ಯಕ್ಷತೆಯನ್ನು ಕಮೀಟಿ ಅಧ್ಯಕ್ಷ ಶ್ರೀಶೈಲಾರೂಢರು ವಹಿಸುವರು ಎಂದು ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
