ಮುದ್ದೇಬಿಹಾಳ: ಕಳೆದ ಕೆಲ ದಿನಗಳ ಹಿಂದೆ ಪಟ್ಟಣದ ನ್ಯಾಯಾಲಯದ ಎದುರು ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಶಂಕ್ರಪ್ಪ ಕರಳ್ಳಿಯನ್ನು ಪೊಲೀಸರು ಬಂಧಿಸಿ ವಿಜಯಪುರದ ಕೇಂದ್ರ ಕಾರಾಗ್ರಹಕ್ಕೆ ಅಟ್ಟಿದ್ದಾರೆ.
ಬಾಗೇವಾಡಿ ತಾಲೂಕಿನ ಜಯವಾಡಗಿ ಗ್ರಾಮದ ಕರಳ್ಳಿ ಕುಟುಂಬಸ್ತರು ತಮ್ಮ ಮನೆಯ ಹೆಣ್ಣುಮಗಳಿಗೆ ಮಾತನಾಡಿಸಿದ್ದಕ್ಕೆ ಸಿಟ್ಟಾಗಿ ಅದೇ ಗ್ರಾಮದ ನಿವಾಸಿ ಸಂತೋಷ ಕಾಡಮೆಗೇರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಪಟ್ಟಣದ ನ್ಯಾಯಾಲಯದ ಎದುರು ನ್ಯಾಯವಾದಿಗಳ ಮತ್ತು ಸಾರ್ವಜನಿಕರ ಮಧ್ಯೆ ಸಂಭವಿಸಿದ್ದರಿಂದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಕೂಗು ಕೇಳಿ ಬಂದಿತ್ತು.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ಕಾಲ್ಕಿತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಲು ಇಲ್ಲಿನ ಪಿಎಸ್ಆಯ್ ಸಂಜೀವ ತಿಪರೆಡ್ಡಿ ತೀವ್ರ ಶೋಧ ನಡೆಸಿದ್ದರು. ಘಟನೆಯ ಹಿನ್ನೆಲೆ ೮ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಸೋಮುವಾರ ಬೆಳ್ಳಂಬೆಳಿಗ್ಗೆ ಎ೪ ಆರೋಪಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿರುವದಾಗಿ ಪೊಲೀಸ ಮೂಲಗಳು ತಿಳಿಸಿವೆ.
Subscribe to Updates
Get the latest creative news from FooBar about art, design and business.
Related Posts
Add A Comment
