ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ
ವಿಜಯಪುರ: ಕಳೆದ ಏಳು ವರ್ಷಗಳಿಂದ ಜಿಲ್ಲೆಯ ನೊಂದಣಾಧಿಕಾರಿಗಳು ವಿಜಯಪುರ ನಗರದಲ್ಲಿ ಕಾರ್ಯನಿರ್ವಹಿಸಿದ್ದು ಇಂಥ ಪ್ರಕರಣಗಳಿಗೆ ಕುಮಕ್ಕು ನೀಡುತ್ತಿದ್ದಾರೆ. ಇವರ ಜೊತೆ ಹಲವಾರು ಜನ ಕೈಜೋಡಿಸಿ ಅಮಾಯಕ ಬಡ ಜನರ ನಕಲಿ ದಾಖಲೆ ಸೃಷ್ಟಿಸಿ ಕೊಳ್ಳೆ ಹೊಡೆಯುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸಬೇಕು. ಇದಕ್ಕೆ ತಾಲೂಕು ಮತ್ತು ಜಿಲ್ಲೆಯಲ್ಲಿ ವಿಶೇಷ ತಂಡವನ್ನು ರಚನೆ ಮಾಡಿ ತಕ್ಷಣದಿಂದ ಕಾರ್ಯ ಪ್ರವೃತ್ತರಾಗಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಶನಿವಾರ ನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮತ್ತು ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ವಂಚಿಸುತ್ತಿರುವ ದೊಡ್ಡ ಪ್ರಮಾಣದಲ್ಲಿ ಬೀಡುಬಿಟ್ಟಿದ್ದು ಇದನ್ನು ಜಿಲ್ಲಾಡಳಿತ ತಕ್ಷಣವೇ ಮಟ್ಟಹಾಕಬೇಕು. ಇದರಲ್ಲಿ ನೂರಾರು ಜನ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇವತ್ತಿನ ದಿನಮಾನದಲ್ಲಿ ಇದರ ಮೊತ್ತ ನೂರಾರು ಕೋಟಿ ರೂ ಆಗಿದ್ದು ಇದೊಂದು ಗಂಭೀರ ಪ್ರಕರಣವಾಗಿದ್ದು, ಇದನ್ನು ತಕ್ಷಣವೇ ಬಿಡಿಸಬೇಕು, ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಜಿಲ್ಲೆಯ ಜನರ ಪರವಾಗಿ ನ್ಯಾಯ ಕೇಳಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಂದು ಮನವಿ ಮಾಡುತ್ತೇನೆ, ಒಂದು ವೇಳೆ ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ನಾಗರಾಜ್ ಲಂಬು, ಪ್ರಕಾಶ್ ಮಿರ್ಜಿ, ಗೋಪಾಲ್ ಘಟಕಾಂಬಳೆ, ಅಡಿವೆಪ್ಪ ಸಾಲಗಲ್ಲ, ಭೀಮಾಶಂಕರ ಹದನೂರು, ಈರಣ್ಣ ಪಟ್ಟಣಶೆಟ್ಟಿ, ರಮೇಶ್ ರೇಷ್ಮೆ, ರಾಜು ಹಿರೇಮಠ, ಪರಶುರಾಮ್ ಹೊಸಮನಿ, ಮಹೇಶ್ ಬಿದನೂರು, ಬಾಬು ಏಳಗಂಟಿ, ಸೈಯದ್ ನಿಲೋನಿ, ಬಸವರಾಜ್ ಹಳ್ಳಿ, ವೈದ್ಯನಾಥ್ ಬೂಬ್ಶೆಟ್ಟಿ, ಪ್ರವೀಣ್ ವಾರದ, ಸಾಗರ ಅಡಿಕೆ, ಶ್ರೀಧರ್ ಪವಾರ, ಸಂತೋಷ್ ಜಾದವ, ಬಾಬು ಜಗದಾಳೆ, ಬಸವರಾಜ್ ತನುಷಾಳ, ಸಿದ್ದು ಮಲ್ಲಿಕಾರ್ಜುನ ಮಠ, ವಿಜಯಕುಮಾರ್ ಹೂವಳ್ಳಿ, ಗುರು ಗೋಲಗೇರಿ, ಶಿವಾನಂದ್ ಪಾಟೀಲ್, ಶಿಪು ಕಾಳಗಿ, ಕಲ್ಲೂ ರೂಗಿ, ಶ್ರೀಕಾಂತ್ ಶಿಂದೆ, ವಿನಾಯಕ್ ದಹಿಂಡಿ, ಕಲ್ಲುಗೌಡ ಹರ್ನಾಲ್, ಸದಾಶಿವ ಚಲವಾದಿ, ಮಹೇಶ್ ಕುಂಬಾರ್, ಪ್ರಫುಲ್ ಪವರ್, ರಾಘವೇಂದ್ರ ಕಾಫ್ಫೆ, ಶಾಂತು ಕಂಬಾರ್, ಅನಿಲ್ ಉಪ್ಪಾರ್, ಆನಂದ್ ಮುಚ್ಚಂಡಿ, ಗಣೇಶ್ ಅಜರಿ, ಸುರಪುರ ಸರ್, ನಿಖಿಲ್, ರುದ್ರಗೌಡ ಪಾಟೀಲ್, ರಮೇಶ್ ಕೊಡಗನೂರು, ರವಿ ಬಾಗಲಕೋಟೆ, ಸತೀಶ್ ಪಾಟೀಲ್, ಜಗದೀಶ್ ಮುಚ್ಚಂಡಿ ಇದ್ದರು.

