ವಿಜಯಪುರ: ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ೨೫ನೇ ದಿನ ಹಾಗೂ ೩ನೇ ದಿನ ಸರದಿ ಉಪವಾಸ ಸತ್ಯಾಗ್ರಹ ಪೂರೈಸಿದೆ. ಇಂದು ಹೋರಾಟಗಾರರಾದ ರೋಹಿತ ಮಲಕಣ್ಣನವರ ಹಾಗೂ ಮಂಜುನಾಥ ಶಿವಶರಣ ಅವರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ಮಹೇಶ ಚಲವಾದಿ ಮಾತನಾಡಿ, ಕಳೆದ ೨೫ ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಕಳೆದ ೩ ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ, ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷö್ಯ ತೋರುವ ಮೂಲಕ ದಲಿತ ಜನಾಂಗಕ್ಕೆ ಘೋರ ಅನ್ಯಾಯವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ರಾಜ್ಯ ಸರ್ಕಾರದ ಯಾವೊಬ್ಬ ಪ್ರತಿನಿಧಿಯು ಕೂಡ ನಮ್ಮ ಸಮಸ್ಯೆಯನ್ನು ಆಲಿಸಲು ಬಾರದೆ ಇರುವುದು ಇವರ ದಲಿತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜು ಕಾಖಂಡಕಿ, ಶಿವರಾಜ ಸಾಣಕರ, ಬಸವಕುಮಾರ ಕಾಂಬಳೆ, ಸತೀಶ ಕುಬಕಡ್ಡಿ, ರವಿ ಕಾಖಂಡಕಿ, ಶಂಕರ ಚಲವಾದಿ, ಪ್ರತಾಪ ಚಿಕ್ಕಲಕಿ, ಕೀರ್ತಿ ಕಾಖಂಡಕಿ, ಬಸವರಾಜ ಕುಬಕಡ್ಡಿ, ಶಂಕರ ಕಾಖಂಡಕಿ, ಸಚೀನ ಕಾಖಂಡಕಿ, ಆಕಾಶ ಕಾಂಬಳೆ, ಆಕಾಶ ಕಾಖಂಡಕಿ, ಶೇಖು ಕೂಡಗಿ, ಕೃಷ್ಣಾ ಚಲವಾದಿ, ಸುಧಾ ಚಲವಾದಿ, ರಾಧಿಕಾ ಕುಬಕಡ್ಡಿ, ಆಶಾ ಮಾನೆ, ಗೀತಾ ವಾಲೀಕಾರ, ಪವಿತ್ರಾ ಚಲವಾದಿ, ರುಕ್ಮಿಣಿ ಕಾಖಂಡಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

