ಬಸವನಬಾಗೇವಾಡಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಗುರುವಾರ ಹಾಡುಹಗಲೇ ಒರ್ವ ವಿದ್ಯಾರ್ಥಿನಿ ಕೊಲೆ ನಡೆದಿರುವದು ಖಂಡನೀಯ. ಮಹಾತ್ಮ ಗಾಂಧೀಜಿಯವರು ಹೆಣ್ಣು ಮಕ್ಕಳು ಸ್ವತಂತ್ರವಾಗಿ ತಿರುಗಾಡಬೇಕು ಅನ್ನುವ ಕಂಡ ಕನಸು ಕಂಡಿದ್ದರು. ವಿದ್ಯಾರ್ಥಿ ನೇಹಾ ಹಿರೇಮಠ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆಯಾಗಬೇಕು. ಇಂತಹವರನ್ನು ಗುಂಡಿಕ್ಕಿ ಕೊಲ್ಲಬೇಕು. ಇಸ್ಲಾಂ ಧರ್ಮದ ಯುವಕ ಈ ರೀತಿ ಮಾಡಿದ್ದು ಸರಿಯಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗೀಜಿ ಅವರ ಆಡಳಿತ ಹೇಗಿದೆ ಹಾಗೇನೂ ಕರ್ನಾಟಕದಲ್ಲಿ ಒಮ್ಮೆ ಮಾಡಿ ನೋಡಿ ಎಲ್ಲರಿಗೆ ಭಯ ಹುಟ್ಟುತ್ತದೆ. ಈ ಹೆಣ್ಣು ಮಗಳಿಗೆ ಆಗಿರುವಂತೆ ಯಾವ ಹೆಣ್ಣು ಮಕ್ಕಳಿಗೆ ಈ ರೀತಿ ಆಗಬಾರದು ಎಂದು ತಾಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

