ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಗೋಷ್ಠಿಗಳಿಂದ ಸಮಾಜದ ಮೌಲ್ಯ ಹೆಚ್ಚಿಸುತ್ತವೆ.
ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಸಾಹಿತ್ಯ ಪರಿಷತ್ತು ನಿರಂತರ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಸಹಕಾರಿ ಧುರೀಣ ರಮೇಶ ಬಿದನೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಜಿಲ್ಲಾ , ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಸಭಾಂಗಣದಲ್ಲಿ ಜರುಗಿದ ದಿ ಶಂಕರಾನಂದ ಕಾಳಪ್ಪ ಉತ್ಲಾಸರ ದತ್ತಿ ದಾನಿಗಳು ಶ್ರೀದೇವಿ ಉತ್ಲಾಸರ. ವಿಷಯ ನಾಣ್ಯ, ಸಂಗೀತ, ಮತ್ತು ಸಾಹಿತ್ಯ ಕುರಿತು .ಮತ್ತು ಶ್ರೀಮತಿ ನಿಂಗಮ್ಮ ಗುರಪ್ಪ ಯಾದವಾಡ (ಬೋಳಶೆಟ್ಟಿ)
ದತ್ತು ದಾನಿಗಳು ಮಲ್ಲಪ್ಪ ಗುರಪ್ಪ ಯಾದವಾಡ (ಬೋಳಶೆಟ್ಟಿ )
ವಿಷಯ: ಶ್ರೀ ರಾಘವೇಂದ್ರ ಶ್ರೀಗಳು ಹಾಗು ಅಲ್ಲಮಪ್ರಭು ದೇವರ ಕುರಿತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಥ೯ಪೂಣ೯ವಾದ ಕಾರ್ಯಕ್ರಮಗಳ ಮೂಲಕ ಪರಿಷತ್ತು ಉಪಯುಕ್ತವಾದ ಚಟುವಟಿಕೆಗಳನ್ನು ಆಯೋಜಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ಸಾಹಿತಿ ಡಾ: ಮಾಧವರಾವ ಗುಡಿ ಅವರು ಶ್ರೀ ರಾಘವೇಂದ್ರ ಶ್ರೀಗಳು ಹಾಗು ಅಲ್ಲಮಪ್ರಭು ದೇವರ ಕುರಿತು ಉಪನ್ಯಾಸ ನೀಡಿದರು.
ಶರಣ ಚಿಂತಕ ಮೋಹನ ಕಟ್ಟಿಮನಿ ಅವರು, ನಾಟ್ಯ, ಸಂಗೀತ, ಮತ್ತು ಸಾಹಿತ್ಯಕ್ಕೆ ವಿಜಯಪುರದ ಕೊಡುಗೆ ವಿಷಯದ ಕುರಿತು ಉಪನ್ಯಾಸ ನೀಡಿದರು.
ದತ್ತಿ ದಾನಿ ಶ್ರೀದೇವಿ ಉತ್ಲಾಸರ ಮಾತನಾಡಿದರು.
ರಾಜಕೀಯ ಮುಖಂಡ ಜಿ ಎನ್ ದಿನ್ನಿ ಕಾರ್ಯಕ್ರಮ ಉದ್ಘಾಟಿಸಿದರು.
ವಿಜಯಲಕ್ಷ್ಮಿ ಹಳಕಟ್ಟಿ, ಗೀತಾ ಕುಲಕರ್ಣಿ, ರಾಜೇಸಾಬ ಶಿವನಗುತ್ತಿ, ಕಸ್ತೂರಿ ಮಠಪತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಹಾಸಿಂಪೀರ ವಾಲಿಕಾರ, ಶಿವಾನಂದ ಡೊಣೂರ, ಜಿ ಎಸ್ ಬಳ್ಳೂರ, ವಿದ್ಯಾವತಿ ಅಂಕಲಗಿ, ಆಶಾ ಬಿರಾದಾರ, ಅಜು೯ನ ಶಿರೂರ, ಲತಾ ಗುಂಡಿ, ಮಹಾದೇವಿ ತೆಲಗಿ, ಗಂಗಮ್ಮ ರಡ್ಡಿ, ನೀಲಮ್ಮ ಪೂಜಾರಿ, ಮಲ್ಲಮ್ಮ ತಳವಾರ, ಸಾವಿತ್ರಿ ಉಗ್ರಾಣ, ರುಕ್ಮಿಣಿ ಬೆಳ್ಳುಬ್ಬಿ, ಬೊರಮ್ಮ ಮಠಪತಿ, ಅಲ್ತಾಪ ಮದಬಾವಿ, ಎ ಎಲ್ ಹಳ್ಳೂರ ಇದ್ದರು.
ಸುಖದೇವಿ ಅಲಬಾಳಮಠ ಪ್ರಾಥಿ೯ಸಿದರು. ಪ್ರಕಾಶ ಗೊಂದಳಿ ಸ್ವಾಗತಿಸಿದರು. ಸುರೇಶ ಜತ್ತಿ ನಿರೂಪಿಸಿದರು. ಸಾಯಬಣ್ಣ ಮಾದರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

