ದೇವರಹಿಪ್ಪರಗಿ: ಜೀವನದಲ್ಲಿ ಯಶಸ್ಸಿನ ಸಾಧನೆಗೆ ಮುಂದೆ ಗುರಿ, ಹಿಂದೆ ಗುರು ಇರಬೇಕು ಎಂದು ಕುಮಸಗಿ ಶ್ರೀಕಲ್ಲಾಲಿಂಗೇಶ್ವರ ಮಠದ ಶಿವಾನಂದ ಶ್ರೀಗಳು ಹೇಳಿದರು.
ತಾಲ್ಲೂಕಿನ ಗಂಗನಳ್ಳಿ ಗ್ರಾಮದಲ್ಲಿ ಮಂಗಳವಾರ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
೧೨ನೇ ಶತಮಾನದ ವಚನ ಚಳುವಳಿಯು ಧಾರ್ಮಿಕ ಚಳುವಳಿಯಂತೆ ಕಂಡು ಬಂದರು ಅದೊಂದು ಜಾತಿ ಕುಲಗಳ ಎಲ್ಲೆ ಮೀರಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹಾ ಕ್ರಾಂತಿಯಾಗಿ ಇತಿಹಾಸದಲ್ಲಿ ಗುರುತಿಸಲ್ಪಟ್ಟಿದೆ. ಹಾಗೆಯೇ ಈ ಚಾರಿತ್ರಿಕ ಮಹಾ ಆಂದೋಲನದ ರೂವಾರಿ ಅಣ್ಣ ಬಸವಣ್ಣನೊಂದಿಗೆ ನೂರಾರು ಶರಣರು ಹೆಗಲಿಗೆ ಹೆಗಲಾಗಿ ದುಡಿದರು ಅಂತಹ ಶರಣರ ಪೈಕಿ ಅಂಬಿಗರ ಚೌಡಯ್ಯನವರು ಪ್ರಮುಖರು ಎಂದರು.
ಕಾರ್ಯಕ್ರಮದಲ್ಲಿ ಸುರೇಶಗೌಡ ಪಾಟೀಲ(ಸಾಸನೂರ), ಮಲ್ಲಪ್ಪ ದುದ್ದಗಿ, ದಯಾನಂದ ದೊಡಮನಿ, ಮಲ್ಲಪ್ಪ ಬೇನೂರ, ರಾಮ ಸೊನ್ನಳ್ಳಿ, ಪರಶುರಾಮ ಟಕ್ಕಳಕಿ, ಸಿದ್ರಾಮಯ್ಯ ಮಠ, ಮಲ್ಲನಗೌಡ ಪಾಟೀಲ, ಸಂಘದ ಅಧ್ಯಕ್ಷ ಚಿದಾನಂದ ಕನ್ನೋಳ್ಳಿ, ಈರಣ್ಣ ಶಾಸ್ತ್ರಿ ( ಚಿಕ್ಕರೂಗಿ), ಸದಾಶಿವ ದೇಶಪಾಂಡೆ, ಬಸವರಾಜ ಈಶ್ವರಪ್ಪಗೋಳ, ರಾಜಶೇಖರ ನಾಯಕ ಈರಣ್ಣ ಶಾಸ್ತ್ರಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

