ಆಲಮೇಲ: ೧೨ನೇ ಶತಮಾನದ ಮಹಾನ್ ಶರಣ, ಜಗಜ್ಯೋತಿ ಅಣ್ಣ ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಕ ನಾಯಕರನ್ನಾಗಿ ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಬಸವಣ್ಣನವರ ಆಶಯದಂತೆ ಸಮಾನತೆ ಕಾಲವು ಆದಷ್ಟು ಬೇಗ ಬರಲಿ ಎಂದು ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಜಿ ಹೇಳಿದರು.
ಶುಕ್ರವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಕ ನಾಯಕನನ್ನಾಗಿ ಮಾಡಿರುವ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವಣ್ಣನವರು ೧೨ನೇ ಶತಮಾನದಲ್ಲಿ ಮಹಾನ್ ಶರಣರಾದಂತವರು. ಅವರು ಇಂದು ಜಗತ್ತಿಗೆ ವಿಶ್ವಗುರುವಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಂಸ್ಕೃತಿಕ ನಾಯಕನ್ನಾಗಿ ಮಾಡಿರುವುದು ರಾಜ್ಯದ ಜನತೆಗೆ, ಶರಣರಿಗೆ ಹೆಮ್ಮೆಯ ವಿಷಯವಾಗಿದೆ. ಬಸವಣ್ಣನವರ ಆಶಯಂತೆ ಮುಂಬರುವ ದಿನಗಳಲ್ಲಿ ಸಮಾನತೆಯ ಸಾರುವ ಕೆಲಸ ಆಗಬೇಕು. ಮುಂಬರುವ ದಿನಗಳಲ್ಲಿ ಕರ್ನಾಟಕದ ಜನರು ನಾವು ಲಿಂಗಾಯತ ಧರ್ಮದವರು ಎಂದು ನಮೂದಿಸಬೇಕು ಎಂದು ಕರೆ ನೀಡಿದರು.
ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಬಸವಣ್ಣವರ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದಾರೆ ಹಿಂದಿನ ಯಾವ ಪ್ರಧಾನಿಯೂ ಮಾಡದಂತ ಕೆಲಸ ಮಾಡುತ್ತಿದ್ದಾರೆ. ಬಸವಣ್ಣನವರ ಬಗ್ಗೆ ಎಷ್ಟೊಂದು ಅಭಿಮಾನ ಇಟ್ಟುಕೊಂಡಿದ್ದಾರೆ, ಬಸವಣ್ಣನವರ ಬಗ್ಗೆ ಅಧ್ಯಯನ ಮಾಡುತ್ತಿರುವ ಪ್ರಧಾನಿ ಮೋದಿ ಬಗ್ಗೆ ಎಷ್ಟು ಹೊಗಳಿದರೂ ಸಾಲದು ಎಂದು ಅವರ ಕಾರ್ಯಗಳ ಬಗ್ಗೆ ಹೊಗಳಿದರು.
ಬಸವ ಕೇಂದ್ರದ ಅಧ್ಯಕ್ಷ ನಾನಾಗೌಡ ಪಾಟೀಲ ಮಾತನಾಡಿದರು.
ಅರ್ಜುಣಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಪ.ಪಂ. ಸದಸ್ಯ ಅಶೋಕ ಕೊಳಾರಿ, ಸೋಮನಾಥ ಮೇಲಿನಮನಿ, ಪ್ರಶಾಂತ ನಾಶಿ, ಪಿ.ಟಿ. ಪಾಟೀಲ, ಮಲ್ಲಿಕಾರ್ಜುನ ಅಚಲೇರಿ, ಯಲ್ಲಪ್ಪ ಬುರಡ, ಶಶಿಧರ ಗಣಿಯಾರ, ಅಪ್ಪುಗೌಡ ಪಾಟೀಲ, ಅಶೋಕ ಸದ್ಲಾಪುರ, ಬಸವರಾಜ ತೆಲ್ಲೂರ, ಬಾಬು ಕೊತಂಬರಿ, ವಾಹಬ ಸುಂಬಡ, ದಯಾನಂದ ನಾರಯಣಕರ, ಗುರು ಹಡಪದ, ನಜೀರ ಅಲಗೂರ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

