Author: editor.udayarashmi@gmail.com

ಸಿಂದಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರಾಗಿ ಸಿಂದಗಿಯ ಹಿರಿಯ ಸಾಹಿತಿ, ಕಥೆಗಾರ, ನಿವೃತ್ತ ಪ್ರಾಚಾರ್ಯ ಡಾ. ಚನ್ನಪ್ಪ ಕಟ್ಟಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.ಅಭಿನಂದನೆ: ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಯಂಕಂಚಿ ಅಭಿನವ ರುದ್ರಮುನಿ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಹಿರಿಯ ಜಾನಪದ ವಿದ್ವಾಂಸ ಡಾ. ಎಂ.ಎಂ.ಪಡಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪ್ರವೀಣ ಹಾಲಹಳ್ಳಿ, ಎಸ್. ಎಂ. ಪಾಟೀಲ ಗಣಿಹಾರ ಸೇರಿದಂತೆ ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ಮುದ್ದೇಬಿಹಾಳ: ಗ್ಯಾರಂಟಿ ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಹೇಳಿದರು.ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಗ್ಯಾರಂಟಿ ಯೋಜನೆಗಳ ಸಲಹಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಅನುಷ್ಠಾನ ಸಮಿತಿ ರಚಿಸಿ ಎಲ್ಲ ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತೆ ಕ್ರಮ ಕೈಗೊಂಡು ಕಾಂಗ್ರೇಸ್ ಪಕ್ಷ ಜನಸಾಮಾನ್ಯರ ಪಕ್ಷ ಎಂದು ಮತ್ತೊಮ್ಮೆ ಸಾಬೀತು ಮಾಡಿದೆ. ಇನ್ನು ಮುಂದೆ ಯೋಜನೆಗಳ ಫಲಾನುಭವಿಗಳಿಗೆ ಸಮಸ್ಯೆಯಾದಲ್ಲಿ ಕಚೇರಿಗೆ ತಿರುಗಾಡುವ ಅವಶ್ಯಕತೆ ಇಲ್ಲ. ಸಮಿತಿಯ ಪದಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಶಿವಶಂಕರಗೌಡ ಹಿರೇಗೌಡರ ಮಾತನಾಡಿದರು.ಈ ವೇಳೆ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ, ನಾಲತವಾಡ ಪಟ್ಟಣದ ಪಂಚಾಯತ ನ ಸದಸ್ಯ ಪೃಥ್ವಿರಾಜ ನಾಡಗೌಡ, ಪ.ಜಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ.ವಿಜಯಕರ, ಯುವ ಕಾಂಗ್ರೇಸ್ ಅಧ್ಯಕ್ಷ ರಫೀಕ ಶಿರೋಳ,…

Read More

ಸಿಂದಗಿಯ ವಾರ್ಡ ನಂ೧೩ರ ನಿವಾಸಿಗಳು | ಬಿಜೆಪಿ ಮಂಡಲದಿಂದ ತಹಶೀಲ್ದಾರಗೆ ಮನವಿ ಸಿಂದಗಿ: ವಾರ್ಡ ನಂ ೧೩ರಲ್ಲಿ ಸುಮಾರು ೪೦ವರ್ಷಗಳಿಂದ ಇಲ್ಲಿಯ ನಿವಾಸಿಗಳು ವಾಸಿಸುತ್ತಿದ್ದಾರೆ. ಆದರೆ ಈವರೆಗೂ ಅವರಿಗೆ ಯಾರು ಕೂಡ ಸೂರು ಒದಗಿಸುವ ಕಾರ್ಯ ಮಾಡಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.ಪಟ್ಟಣದ ಕಾಳಿಕಾ ನಗರದ ವಾರ್ಡ ನಂ೧೩ರ ಸ್ಲಂ ನಿವಾಸಿಗಳನ್ನು ತೆರವು ಗೊಳಿಸಬಾರದೆಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು, ಇಂದು ಈ ಜನರ ಜೀವನ ಚಿಂತಾಜನಕವಾಗಿದೆ. ಸರಕಾರ ಆದೇಶದಂತೆ ಸ್ಲಂ ನಿವಾಸಿಗಳನ್ನು ತೆರವುಗೊಳಿಸಬೇಕಾದರೆ ಅವರಿಗೆ ಮೊದಲು ಸೂರು ಕಲ್ಪಿಸಬೇಕು ಎಂಬುದಿದೆ. ಹಾಗೆ ಮಾಡದೆ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ಇದೆ ರೀತಿ ನಿಮ್ಮ ದಬ್ಬಾಳಿಕೆ ಮುಂದುವರೆದರೆ ಎಸಿ ಕಛೇರಿಯ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸ್ಲಂ ನಿವಾಸಿಗಳ ಮನೆ ತೆರವುಗೊಳಿಸಬೇಕಾದರೆ ಬಿಜೆಪಿ ಕಾರ್ಯಕರ್ತರ ಮೇಲೆ ಮೊದಲು ಜೆಸಿಬಿ ಹಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ವಾರ್ಡ ನಂ…

Read More

ಸಿಂದಗಿಯಲ್ಲಿ ಬಣಜಿಗ ಸಂಘದ ಸಮುದಾಯ ಭವನಕ್ಕೆ ರೂ.೭೫ಲಕ್ಷ ಅನುದಾನದ ಭರವಸೆ ಸಿಂದಗಿ: ಪ್ರತಿಯೊಂದು ಸಮಾಜ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಬೆಳೆಯಬೇಕು, ಅಂತಹ ಸಮಾಜಗಳಲ್ಲಿ ಬಣಜಿಗ ಸಮಾಜ ಸಿಂದಗಿ ತಾಲೂಕಿನಲ್ಲಿ ಐತಿಹಾಸಿಕವುಳ್ಳ ಸಮಾಜ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕಾಳಿಕಾ ನಗರದಲ್ಲಿ ಶುಕ್ರವಾರ ಸಾಯಂಕಾಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಜಯಪುರ, ಕೆಆರ್‌ಐಡಿಎಲ್ ಅನುಷ್ಠಾನದಲ್ಲಿ ೨೦೨೩-೨೪ನೆಯ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಹಮ್ಮಿಕೊಂಡ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಸರಕಾರದಿಂದ ಸಮುದಾಯ ಭವನಕ್ಕೆ ಸರಕಾರದಿಂದ ೨೫ಲಕ್ಷ ರೂ. ಅನುದಾನ ಮಂಜೂರು ಮಾಡಿಸಿರುವೆ. ಮುಂಬರುವ ದಿನಮಾನಗಳಲ್ಲಿ ಒಂದು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮತ್ತೆ ಸರಕಾರದಿಂದ ೫೦ಲಕ್ಷ ರೂ. ಅನುದಾನ ಮಂಜೂರು ಮಾಡಿಸಿಕೊಡುತ್ತೇನೆ. ಈ ಹಿಂದೆ ನಮ್ಮ ತಂದೆ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಬಣಜಿಗ ಸಮಾಜ ಕಾರ್ಯಕ್ರಮದಲ್ಲಿ ಭಾಗಿಯಾದಾಗ ೫ಲಕ್ಷ ರೂ. ಸಮಾಜದ ಏಳಿಗೆಗೆ ನೀಡುವೆ ಎಂದು ಹೇಳಿದ್ದರು.…

Read More

ಸಿಂದಗಿಯ ರೈತ ಭವನ ಆವರಣದಲ್ಲಿ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಸಿಂದಗಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಂದಗಿ ನಗರಕ್ಕೆ ನಗರ ಯೋಜನೆ ಪ್ರಾಧಿಕಾರ ಅವಶ್ಯಕತೆ ಇತ್ತು ಎಂದು ಅಶೋಕ್ ಮನಗೂಳಿ ಹೇಳಿದರು.ಪಟ್ಟಣದ ಎಪಿಎಂಸಿ ಯಾರ್ಡ್ ರೈತ ಭವನದಲ್ಲಿ ಹಮ್ಮಿಕೊಂಡ ನಗರ ಯೋಜನಾ ಪ್ರಾಧಿಕಾರ ನೂತನ ಕಚೇರಿಯನ್ನು ಶಾಸಕ ಅಶೋಕ ಮನಗೂಳಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಧಾರ್ಮಿಕ, ಸಮಾಜಿಕ ಮತ್ತು ಉದ್ಯೋಗ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಈ ಜಿಲ್ಲೆಯಲ್ಲಿ ಯಾವುದಾದರೂ ಇದ್ದರೆ ಅದು ಸಿಂದಗಿ. ಈ ಯೋಜನಾ ಪ್ರಾಧಿಕಾರದಿಂದ ನಮಗಿರುವ ಪ್ರಯೋಜನವೆಂದರೆ ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ಸರಕಾರಕ್ಕೆ ಒತ್ತಾಯ ಮಾಡಲು ಅನುಕೂಲವಾಗುತ್ತದೆ. ಗ್ರಾಹಕ ಮಿತ್ರರು ಎನ್‌ಎ ಅಥವಾ ಯಾವುದೇ ಕಾರ್ಯಕ್ಕಾಗಿ ವಿಜಯಪುರಕ್ಕೆ ಹೋಗಬೇಕಾಗುತ್ತಿತ್ತು. ಸುಗಮವಾಗಿ ಕಾರ್ಯವಾಗಲಿ, ಪುರಸಭೆಯ ಆದಾಯ ಇನ್ನೂ ಹೆಚ್ಚಾಗಲಿ ಎಂಬ ದೃಷ್ಠಿಕೋನ ಇಟ್ಟುಕೊಂಡು ಯೋಜನಾ ಪ್ರಾಧಿಕಾರವನ್ನು ಮಂಜೂರು ಮಾಡಿಸಲಾಗಿದೆ ಎಂದರು.ಈ ವೇಳೆ ವಿಜಯಪುರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ,…

Read More

ದೇವರಹಿಪ್ಪರಗಿ: ಪ್ರೌಢಶಾಲೆ ಕುಡಿಯುವ ನೀರು, ಶೌಚಾಲಯ, ಬಿಸಿಯೂಟ, ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ವಿದ್ಯಾರ್ಥಿಗಳು ಪಾಲಕರ ಜೊತೆಗೂಡಿ ಆಗ್ರಹಿಸಿದರು.ತಾಲ್ಲೂಕಿನ ಗಂಗನಳ್ಳಿ ಸರ್ಕಾರಿ ಪ್ರೌಢಶಾಲೆ ಹಲವು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಕೂಡಲೇ ಶಾಲೆಗೆ ಶೌಚಾಲಯ, ಕ್ರೀಡಾಮೈದಾನ, ವಾರದಲ್ಲಿ ವಿತರಿಸುವ ಶೇಂಗಾಚಿಕ್ಕಿ, ಮೊಟ್ಟೆ ಸೇರಿದಂತೆ ಬಿಸಿಯೂಟ ವ್ಯವಸ್ಥೆಗಳನ್ನು ಸುಧಾರಿಸುವದು ಹಾಗೂ ಮುಖ್ಯವಾಗಿ ಮುಖ್ಯಗುರು ಅಡುಗೆ ಸಿಬ್ಬಂದಿಗೆ ಸಹಕಾರ ನೀಡುವಂತೆ ವಿದ್ಯಾರ್ಥಿಗಳೊಂದಿಗೆ ಸೇರಿ ಪಾಲಕರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಚಿದಾನಂದ ಕನ್ನೋಳ್ಳಿ ಮಾತನಾಡಿ, ನಮ್ಮೂರಿನ ಪ್ರೌಢಶಾಲೆಗೆ ವಿದ್ಯುತ್ ವ್ಯವಸ್ಥೆ ಹಾಗೂ ಕಂಪ್ಯೂಟರ್ ಶಿಕ್ಷಕರು ಇಲ್ಲದ ಕಾರಣ ಹಲವು ದಿನಗಳಿಂದ ಕಂಪ್ಯೂಟರ್ ಇದ್ದು ಇಲ್ಲದಂತಾಗಿವೆ. ಇನ್ನೂ ಮಧ್ಯಾನ್ಹದ ಬಿಸಿಯೂಟಕ್ಕೆ ಅಡುಗೆ ಸಿಬ್ಬಂದಿಗೆ ಕೇವಲ ೨ ಟೊಮೇಟೊ ನೀಡುತ್ತಾರೆ ಇದರಲ್ಲಿ ಅವರು ಅಡಿಗೆ ಮಾಡುವುದಾದರೂ ಹೇಗೆ? ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಶಾಲೆಯ ಮುಖ್ಯಗುರು ಎಚ್.ಎಮ್. ಸಜ್ಜನ ಈ ಬಗ್ಗೆ ಮಾತನಾಡಿ, ನಮ್ಮ ಶಾಲೆಯಲ್ಲಿ ಮೊಟ್ಟೆ ಸೇರಿದಂತೆ ಎಲ್ಲವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಗ್ರಾಮದ ಕನ್ನೋಳ್ಳಿ ಅನ್ನುವವರು…

Read More

ಹೊನ್ನಳ್ಳಿಯಲ್ಲಿ ಜೆಜೆಎಂ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ ಗ್ರಾಪಂ ಅಧ್ಶಕ್ಷ ಸಂಗನಗೌಡ ಅಭಿಮತ ಬ್ರಹ್ಮದೇವನಮಡು: ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರು ಪೂರೈಸುವ ಮಹತ್ತರ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಶ ಸರಕಾರ ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆಯಬೇಕು ಎಂದು ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ (ಕರವಿನಾಳ) ಹೇಳಿದರು.ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ೧ ಕೋಟಿ ೪ ಲಕ್ಷ ರೂ.ವೆಚ್ಚದ ಜಲ ಜಿವನ ಮಿಷನ್ ಯೋಜನೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಅವರು ಮಾತನಾಡಿದರು.ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು. ೨೦೨೨-೨೩ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲ ಜಿವನ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನಳ ಸಂಪಕ೯ ಕಲ್ಪಿಸಿ ನೀರಿನ ಸಮಸ್ಶೆ ನಿವಾರಿಸಲಾಗುವುದು ಎಂದರು.ಈ ವೇಲೆ ನಾಯ್ಕೋಡಿ, ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ, ಬಸನಗೌಡ ಉಳ್ಳೆಸೂರ, ಡಾ.ಎನ್.ಪಿ.ನಾಯ್ಕೋಡಿ, ಹೊಬು ಚವ್ಹಾಣ, ಹಿರೆಮಾನ ಚವ್ಹಾಣ, ಸಲಿವ್ಹಾಣ. ಮೇಲಿನಮನಿ, ಪ್ರಭಾಕರ ಪತ್ತಾರ, ಕೆ.ಬಿ.ಮನಗೂಳಿ,…

Read More

ಇಂಡಿ‌: ಕನ್ನಡ ಭಾಷಾ ರಕ್ಷಣೆಗೆ ಕನ್ನಡ ಶಾಲೆಗಳು‌‌ ಅಭಿವೃದ್ದಿ ಪಡಿಸುವುದು ಅತೀ ಮುಖ್ಯ. ಮಕ್ಕಳ ಮನಸ್ಸು ಹೂವಿನ ಹಾಗೆ ಇದ್ದು, ಅದನ್ನು ಉತ್ತಮ ರೀತಿಯಲ್ಲಿ ಸಮಾಜಕೆ ನೀಡುವುದರಲ್ಲಿ ಕನ್ನಡ ಶಾಲೆಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ರಾಜಶೇಖರ ಪಾತಾಳಿ ಮಾತನಾಡಿದರು.ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಎಮ್ ಪಿ‌ ಎಸ್ ಶಾಲೆಯ ೭ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ “ದೀಪದಾನ” ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡತ್ತಿದ್ದರು.ಮುಖ್ಯ ಅತಿಥಿ ವೇ ದಯಾನಂದ ಹಿರೇಮಠ ಮಾತನಾಡಿದ ಅವರು, ಭವ್ಯ ಸಂಸ್ಕೃತಿಯ ಉಳಿವು ಕನ್ನಡ ಶಾಲೆಗಳಿಂದ ಮಾತ್ರ ಸಾಧ್ಯ.ಶಿಕ್ಷಕರು ಹಾಗೂ ಶಿಕ್ಷಣ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತಾರೆ. ನಾವು ಕಲಿತ ಶಿಕ್ಷಣ ಕೇವಲ ಹಣಗಳಿಕೆ ಮಾತ್ರವಲ್ಲದೆ, ಅದು ಉತ್ತಮ ಬದುಕು ಬದುಕಲಿಕ್ಕೆ ಸಹಕಾರಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ, ಮಾತಪಿತರನ್ನು, ಪಾಲಕರನ್ನು ಗೌರವದಿಂದ ಕಾಣುವುದರ ಮೂಲಕ ನಾವು ಅವರ ಸೇವೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸಮಾರಂಭದ ಮುಖ್ಯ ಅತಿಥಿ…

Read More

ವಿಜಯಪುರ: ಜಿಲ್ಲಾ ಅಧ್ಯಕ್ಷರ ಸೂಚನೆ ಮೇರೆಗೆ ಬಿಜೆಪಿ ನಗರ ಮಂಡಲದ ಯುವ ಮೋರ್ಚಾ, ಎಸ್.ಸಿ ಮೋರ್ಚಾ ಹಾಗೂ ಎಸ್.ಟಿ ಮೋರ್ಚಾ ಈ ಕೆಳಕಂಡ ಮುಖಂಡರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಆದೇಶ ಹೊರಡಿಸಿದ್ದಾರೆ.ಯುವ ಮೋರ್ಚಾ: ಉಪಾಧ್ಯಕ್ಷರು ದತ್ತಾ ಗೋಲಾಂಡೆ, ಗವಿಸಿದ್ದೇಶ ಅವಟಿ, ರಾಹುಲ್ ಗುಪ್ತಾ, ನೀತಿನಕುಮಾರ ಹಳ್ಳಿ, ವಿಜಯಕುಮಾರ್ ಆಜೂರ, ಕಾರ್ಯದರ್ಶಿಗಳು ಬಸವಕುಮಾರ ಕಾಂಬಳೆ, ವಿಠ್ಠಲ ಗಾಯಕವಾಡ, ಅವಿನಾಶ ಮಹಿಂದ್ರಕರ, ಪ್ರೇಮಕುಮಾರ ಕಲಕುಟಗಿ, ಸಚೀನ ಘಾಟಗೆ, ಕೋಶಾಧ್ಯಕ್ಷರು ಗಿರೀಶ ಬಿರಾದಾರ.ಎಸ್.ಸಿ ಮೋರ್ಚಾ: ಉಪಾಧ್ಯಕ್ಷರು ಮಡಿವಾಳ ಯಾಳವಾರ, ಮಾನಸಿಂಗ್ ರಾಠೋಡ, ಕೃಷ್ಣ (ಅಪ್ಪು) ಅಲಕುಂಟೆ, ಬಸವರಾಜ ಕಾಂಬಳೆ, ಸುಖದೇವ ಗಾಯಕವಾಡ, ಕಾರ್ಯದರ್ಶಿಗಳು ಶ್ರೀಕಾಂತ ಗಚ್ಚಿನಮನಿ, ಪರಶುರಾಮ ಕುಂಚಿಕೋರವರ, ಕಿಶೋರ ಚವ್ಹಾಣ, ಈರಪ್ಪ ಚಲವಾದಿ (ವಾಲಿಕಾರ), ಅನೀಲ ಬಂಡಿವಡ್ಡರ, ಸದಾನಂದ ಗುನ್ನಾಪೂರ, ಕೋಶಾಧ್ಯಕ್ಷರು ಶ್ರೀಮಂತ ಚವ್ಹಾಣ.ಎಸ್.ಟಿ ಮೋರ್ಚಾ: ಉಪಾಧ್ಯಕ್ಷರು ಉಮೇಶ ಗೊಳಸಂಗಿ, ಕೆ.ಎಚ್.ವೀರಣ್ಣ, ಕೃಷ್ಣಾ ರಾಠೋಡ, ಅಪ್ಪಾಸಿ ಕೋಲಕಾರ, ಹಣಮಂತ ಜಕ್ಕಣ್ಣವರ, ಕಾರ್ಯದರ್ಶಿಗಳು ವಿಶಾಲ ರೋಹಿತೆ, ಸಂತೋಷ ತಟಗಾರ,…

Read More

ವಿಜಯಪುರ: ೧೧೦ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದೇವರ ಹಿಪ್ಪರಗಿ- ಸಿಂದಗಿ ಕಂಡಕ್ಟರ್ ಮತ್ತು ಟವರ್ ಬದಲಾವಣೆ ಕಾಮಗಾರಿ ಕೈಗೊಂಡಿರುವುದರಿಂದ, ೧೧೦ ಕೆ.ವ್ಹಿ ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ೧೧ ಕೆವಿ ಸುಂಗಠಾಣ ಐಪಿ, ೧೧ ಕೆವಿ ಸಿಂದಗಿ ನಗರ ಫೀಡರ್ ನಂ-೧ ಹಾಗೂ ೧೧ ಕೆವಿ ಯಂಕಚಿ ಐಪಿ ಮಾರ್ಗಗಳಲ್ಲಿ ಮಾ.೧೭ರಂದು ಬೆಳಗ್ಗೆ ೧೦.೦೦ ರಿಂದ ಸಾಯಂಕಾಲ ೦೫.೦೦ ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರೀ ಮಾರ್ಗಗಳ ಮೇಲೆ ಬರುವಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು (ವಿ) ಹೆಸ್ಕಾಂ, ಇಂಡಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More