ಆಲಮೇಲ: ಪಟ್ಟಣದ ಬಣಜಿಗ ಸಮಾಜದ ಹಿರಿಯರು, ಹಿರಿಯ ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ ಅವರ ಸಹೋದರರಾದ ಬಸವರಾಜ್ ಉಪ್ಪಿನ(70) ಅವರು ಬುಧವಾರ ನಿಧನರಾದರು.
ಮೃತರು ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಪತ್ರಕರ್ತ ಸುನೀಲ ಉಪ್ಪಿನ ಅವರ ತಂದೆ. ಹಿರಿಯ ಪತ್ರಕರ್ತ ಶಿವಕುಮಾರ ಉಪ್ಪಿನ, ಚಿತ್ರನಟ ಸಂತೋಷ ಉಪ್ಪಿನ ಅವರ ಚಿಕ್ಕಪ್ಪನವರು.
ಸಂತಾಪ: ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಶಾಸಕ ಅಶೋಕ ಶಾಬಾದಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹಾಗೂ ಆಲಮೇಲ ಪತ್ರಿಕಾ ಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

