Author: editor.udayarashmi@gmail.com

ಕಲಕೇರಿ: ಈ ಜಗತ್ತಿನಲ್ಲಿ ಅನ್ನಕ್ಕೆ ಬಹುದೊಡ್ಡ ಬೆಲೆ ಇದೆ, ಈರುವೆ ೮೪ ಕೋಟಿ ಜೀವರಾಶಿಗೂ ಅನ್ನ ನೀಡುವ ಏಕೈಕ ಜೀವಿ ರೈತ, ಆದರೆ ಅನ್ನವನ್ನು ಬೆಳೆಯುವ ಅನ್ನದಾತನ ಪರಿಸ್ಥಿತಿ ಮಾತ್ರ ಒಂದು ಬಿಡಿಕಾಸಿಗೂ ಬೆಲೆ ಇಲ್ಲದಂತಾಗಿದೆ, ಇಂದಿನ ದಿನಮಾನಗಳಲ್ಲಿ ರೈತರಿಗೆ ಹೆಣ್ಣು ಸಿಗದಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ, ಆದರೆ ನಿಜವಾಗಿಯೂ ಯಾವುದೇ ಫಲಾಪೇಕ್ಷೇ ಇಲ್ಲದೇ, ಯಾವುದೇ ಸಂಬಳ, ಬಹುಮಾನಗಳಿಗೆ ತಲೆ ಕೆಡೆಸಿಕೊಳ್ಳದೇ ದಿನನಿತ್ಯ ಕಾಯಕ ಮಾಡುವ ಏಕೈಕ ಜೀವಿ ಅನ್ನದಾತ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದೇವರಹಿಪ್ಪರಗಿ ತಾಲುಕಾ ಉಪಾಧ್ಯಕ್ಷ ಚಂದ್ರಕಾಂತ ಪ್ಯಾಠಿ ಹೇಳಿದರು.ಸ್ಥಳೀಯ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದಲ್ಲಿ ನಡೆದ ತಿಂಗಳ ಪರ್ಯಂತ ನಡೆಯುತ್ತಿರುವ ಸಜ್ಜಲಗುಡ್ಡದ ಶರಣಮ್ಮನವರ ಪುರಾಣದ ನಿಮಿತ್ಯ ಪ್ರತಿ ರವಿವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಋಷಿ-ಕೃಷಿ ಎಂಭ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ದಿನ ಬೆಳಗಾದರೆ ಚಾಚು ತಪ್ಪದೇ ಬೆಳಂಬೆಳಿಗ್ಗೆ ಹೊಲಕ್ಕೆ ಹೋಗುವ ರೈತರನ್ನು ಕಂಡರೆ ತಕ್ಷಣದಲ್ಲಿ ಕೈಮುಗಿಯಿರಿ ಎಂದರು, ಯಾಕೆಂದರೆ ರೈತನ ಪರಿಶ್ರಮ ಇದ್ದಾಗ…

Read More

ಇಂಡಿ: ಪಟ್ಟಣದ ಪ್ರಾಣ ಸ್ನೇಹಿತರ ಗೆಳೆಯರ ಬಳಗ ಭಾನುವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಗಿಡಮರಗಳಲ್ಲಿ ನೀರಿನ ಅರವಟಿಗೆಗಳನ್ನು ಇಟ್ಟು ಪಕ್ಷಿ ಸಂಕುಲಕ್ಕೆ ನೆರವಾದರು. ತಾಲ್ಲೂಕಿನಲ್ಲಿ ಬೀಕರ ಬರಗಾಲವಿದ್ದು, ಹಳ್ಳ, ಕೊಳ್ಳ, ಕೆರೆ, ಕಟ್ಟೆ, ಕಾಲುವೆಗಳಲ್ಲಿ ಒಂದು ಹನಿ ಕೂಡಾ ನೀರಿಲ್ಲ. ಇದನ್ನು ಅರಿತುಕೊಂಡು ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿ ಎಂದು ಗಿಡಮರಗಳಲ್ಲಿ ನೀರಿನ ಅರವಟಿಗೆ ಇಡುವ ಕಾರ್ಯ ಕೈಕೊಂಡಿದ್ದಾರೆ.ಈ ಕಾರ್ಯದಲ್ಲಿ ಅವಿನಾಶ ಬಗಲಿ, ಶಿವಕುಮಾರ ಬಿಸನಾಳ, ಶಿವು ಬಡಿಗೇರ, ಸುಧೀರ ಕರಿಕಟ್ಟಿ, ಸಂಕೇತ ಜ್ಯೋಶಿ, ಪರಶುರಾಮ ಚೋಪಡೆ, ಕಿರಣ ಕ್ಷತ್ರಿ, ಮಹಾದೇವ ಹದಗಲ್ಲ, ರಮೇಶ ಗೋಳಸಾರ ಉಪಸ್ಥಿತರಿದ್ದರು.

Read More

ಇಂಡಿ: ಜೋಡೆತ್ತುಗಳನ್ನು ಹೊಂದಿರುವ ಕಂಬಿ ಮಲ್ಲಯ್ಯನು ಗ್ರಾಮಗಳ ಜೋಡೆತ್ತುಗಳ ಭಾವೈಕ್ಯದ ಸಂಕೇತವಾಗಿದ್ದಾನೆ. ಗ್ರಾಮಗಳಲ್ಲಿ ಸದಾ ಜೋಡೆತ್ತಿನ ಕೃಷಿ ಉಳಿಯಬೇಕು ಎಂಬ ಸಂದೇಶವನ್ನು ನೀಡುವ ಉದ್ದೇಶದಿಂದ ನಮ್ಮ ಹಿಂದಿನ ಆಧ್ಯಾತ್ಮಿಕ ಗುರುಗಳು ಕಂಬಿ ಮಲ್ಲಯ್ಯನ ಪೂಜೆಯ ಸಂಪ್ರದಾಯವನ್ನು ಜಾರಿಗೆ ತಂದಿದ್ದಾರೆ ಎಂದು ಅಭೀ ಪೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಅಭಿಪ್ರಾಯಪಟ್ಟರು.ಅವರು ಭಾನುವಾರ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಜೋಡೆತ್ತಿನ ಕೃಷಿ ಮತ್ತು ಮಣ್ಣು ಉಳಿಸಲು ಮುಂದಾದ ರೈತ ಮಿತ್ರ ಸ್ವಯಂ ಸೇವಕರ ತಂಡವು ವಿಜಯಪೂರ ಜಿಲ್ಲೆಯ ೪೦ ಗ್ರಾಮಗಳಲ್ಲಿರುವ ಕಂಬಿ ಮಲ್ಲಯ್ಯನ ದರ್ಶನ ಮಾಡಿ, ಆ ಎಲ್ಲಾ ಗ್ರಾಮಗಳಲ್ಲಿ ರೈತ ಜಾಗೃತಿ ಮಾಡಿ, ಪ್ರತೀ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಾಗಲು ಸಂಕಲ್ಪ ಮಾಡುವ ಉದ್ದೇಶದಿಂದ ಭಾನುವಾರ ಸಾಲೋಟಗಿ ಗ್ರಾಮಕ್ಕೆ ಆಗಮಿಸಿ, ಅಲ್ಲಿ ಕಂಬಿ ಮಲ್ಲಯ್ಯನ ದರ್ಶನ ಪಡೆದುಕೊಂಡು ಮಾತನಾಡಿದರು.ವರ್ಷಪೂರ್ತಿ ರೈತನಿಗೆ ಹೆಗಲು ನೀಡುವ ಜೋಡೆತ್ತುಗಳ ಭಾವೈಕ್ಯದ ಸಂಕೇತವಾದ ಎತ್ತುಗಳ ಮೂರ್ತಿಗಳನ್ನು ಹೊತ್ತಿರುವ ಕಂಬಿ ಮಲ್ಲಯ್ಯನಿಗೆ ರೈತ ಭಕ್ತರು…

Read More

ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ರವರು ನಿಡಗುಂದಿ ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೫೦ರ ಯಲಗೂರು ಕ್ರಾಸ್ ಬಳಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಲೋಕಸಭಾ ಚುನಾವಣೆ ೨೦೨೪ರ ಹಿನ್ನೆಲೆಯಲ್ಲಿ ನಿಡಗುಂದಿ ತಾಲೂಕು ವ್ಯಾಪ್ತಿಯ ಯಲಗೂರು ಕ್ರಾಸ್ ಬಳಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸಲು ಜಿಲ್ಲಾ ಗಡಿ ಭಾಗ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಕಂದಾಯ, ಪೋಲಿಸ್, ಕೆಬಿಜೆಎನ್‌ಎಲ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಈ ವೇಳೆ ಮಾತನಾಡಿದ ಜಿ.ಪಂ. ಸಿಇಓ ರಿಷಿ ಆನಂದ ರವರು ಲೋಕಸಭೆ ಚುನಾವಣಾ ನಿಮಿತ್ಯ ಮಾದರಿ ನೀತಿ ಸಂಹಿತೆ ಜಾರಿಗೆ ಯಾಗಿದ್ದು, ಜಿಲ್ಲೆಯಿಂದ ಹೊರಹೋಗುವ ಮತ್ತು ಆಗಮಿಸುವ ಎಲ್ಲ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡು ಬಂದರೆ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿ ವಾಹನ ತಪಾಸಣೆ ಮಾಡಿದ ವರದಿಯನ್ನು ವಹಿಯಲ್ಲಿ…

Read More

ವಿಜಯಪುರ: ನಗರದಲ್ಲಿ ಎಸ್.ಬಿ.ಗ್ರೂಫ್ ವತಿಯಿಂದ ಹೋಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಗ್ರುಫ್ ಸದಸ್ಯರು ಪೂರ್ವಯೋಜಿತವಾಗಿ ತಯಾರಿ ಮಾಡಿಕೊಂಡ ಬಣವನ್ನು ಗೆಳೆಯರ ಮನೆಗೆ ಹೋಗಿ ಬಣ್ಣ ಹಂಚುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.ಗ್ರುಫ್‌ನ ಅಧ್ಯಕ್ಷ ಶರಣು ಬಿ. ಬ್ಯಾಳಿ ಮಾತನಾಡಿ, ಧರ್ಮದ ಕಟ್ಟುಪಾಡುಗಳನ್ನು ಮೀರಿ ಎಲ್ಲರೂ ಹಿಗ್ಗಿನಿಂದ ಆಚರಿಸುವ ಹಬ್ಬ- ಹೋಳಿ, ಕೆಟ್ಟದ್ದೆಲ್ಲ ಸುಟ್ಟು ಒಳಿತಷ್ಟೇ ಉಳಿಯುವಂತಾಗಲಿ , ನಮ್ಮೊಳಗೂ ಇರುವಂಥ ವಿಕಾರಗಳನ್ನೆಲ್ಲ ಸುಟ್ಟು , ಬದುಕಿಗೆ ಹೊಸದಾಗಿ ರಂಗು ತುಂಬಿಸಿಕೊಳ್ಳಬೇಕು ಎನ್ನುವುದು ಈ ಹಬ್ಬದ ಸಂದೇಶ. ಹಬ್ಬ ಯಾವುದೇ ಇರಲಿ ಮೋಜು, ಮಸ್ತಿ , ಸಂಭ್ರಮಕ್ಕೆ ಕೊರತೆ ಇರಬಾರದು ಅನ್ನೋದು ಎಲ್ಲರ ಅಂಬೋಣ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಜಗತ್ತಿನ ಏಕೈಕ ದೇಶ ನಮ್ಮದು, ಹೋಳಿ ಹುಣ್ಣಿಮೆಯಿಂದ ರಂಗಪಂಚಮಿಯವರೆಗೆ ಐದು ದಿನಗಳ ಕಾಲ ಭರ್ಜರಿ ಸಂಭ್ರಮ , ಸಡಗರ, ಗೌಜಿ, ಗದ್ದಲ ತುಂಬಿದ ಭರಪೂರ ಆಚರಣೆ ನಡೆಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಐದು ದಿನವೂ ಅದ್ಧೂರಿ ತಯಾರಿ, ಆಡಂಬರ, ಸಂಭ್ರಮ ಮನೆ ಮಾಡಿರುತ್ತದೆ.…

Read More

ಚಿಮ್ಮಡ: ಹೋಳಿ ಹಬ್ಬದ ನಿಮಿತ್ಯ ನಡೆಯುವ ಕಾಮದಹಣದ ಸಂಭ್ರಮಕ್ಕಾಗಿ ಸಂಗ್ರಹಿಸಲಾಗುವ ಸೌದೆ, ಕಟ್ಟಿಗೆಯ ಜೊತೆಗೆ ಉಪಯುಕ್ತ ವಸ್ತುಗಳನ್ನು ಎತ್ತಿಕೊಂಡು ಬಂದು ಗುಡ್ಡೆಹಾಕಿ ದಹಿಸುವುದರಿಂದ ಲಕ್ಷಾಂತರ ರೂ. ಬೆಲೆಬಾಳುವ ಅಮೂಲ್ಯ ವಸ್ತುಗಳು ಸುಟ್ಟು ಕರಕಲಾಗುತ್ತಿರುವ ಪರಿಣಾಮ ಅವುಗಳನ್ನು ಕಳೆದುಕೊಂಡವರು ಪರಿತಪಿಸುವಂತಾಗಿದೆ.ಕಾಮನ ಹಬ್ಬದ ಪ್ರತೀತಿಯಂತೆ ರೈತರ ಮನೆಯಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ಕಟ್ಟಿಗೆಯ ವಸ್ತುಗಳು, ಗದ್ದೆಯಲ್ಲಿ ದೊರೆಯುವ ನಿರುಪಯೋಗಿ ಸೌದೆಗಳನ್ನು ಮನೆಯ ಮಾಲೀಕನಿಂದ ಪಡೆದು ಅವುಗಳನ್ನು ಸಂಗ್ರಹಿಸಿ ದಹಿಸಬೇಕು ಆದರೆ ಇಲ್ಲಿ ಸಾವಿರಾರು ರೂ ಬೆಲೆಬಾಳುವ ತೊಲೆಗಳು, ನಾಟುಗಳು, ಏಣಿ, ಮನೆಯ ಚೌಕಟ್ಟು, ಕುರ್ಚಿ, ಟೈರು ಸೇರಿದಂತೆ ಹಲವಾರು ಉಪಯುಕ್ತ ವಸ್ತುಗಳು ಮಾತ್ರವಲ್ಲದೇ ಮಗಳ ಬಾನಂತನಕ್ಕಾಗಿ ತಾಯಿ ಸಂಗ್ರಹಿಸಿಟ್ಟಿದ್ದ ಕುಳ್ಳು (ಸಗಣಿಯ ಬೆರಣಿ)ಗಳನ್ನು ಸಹ ರಾತ್ರಿ ವೇಳೆಯಲ್ಲಿ ಎತ್ತಿಕೊಂಡು ಬಂದು ದಹಿಸಲು ಗುಡ್ಡೆ ಹಾಕಲಾಗಿದ್ದು ಇದರಿಂದ ವಸ್ತುಗಳನ್ನು ಕಳೆದುಕೊಂಡವರು ಮಮ್ಮಲ ಮರಗುವಂತಾಗಿದೆ. ಸಂಬಂಧಿಸಿದವರು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.

Read More

– ಬಸವರಾಜ ನಂದಿಹಾಳ ಬಸವನಬಾಗೇವಾಡಿ: ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಕಾಮದಹನದ ಮರುದಿನ ಉತ್ತರ ಕರ್ನಾಟಕ ಭಾಗದ ಜನರು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಆರಂಭಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಕಂಬಿಗಳೊಂದಿಗೆ ತೆರಳುವದು ಕಂಡು ಬಂದಿತ್ತು.ಮಲ್ಲಯ್ಯನ ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ಪಯಣ ಬೆಳೆಸಿದರು. ಯುಗಾದಿ ಪಾಡ್ಯದಂದು ನಡೆಯುವ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.ಈಚೆಗೆ ಪ್ರತಿ ಗ್ರಾಮದಿಂದಲೂ ಶ್ರೀಶೈಲ ಪಾದಯಾತ್ರೆ ಕಮಿಟಿ ರಚನೆಯಾಗಿದ್ದು. ಈ ಕಮೀಟಿ ನೇತೃತ್ವದಲ್ಲಿ ಜನರು ತಮ್ಮ ಪಾದಯಾತ್ರೆ ಬೆಳೆಸುತ್ತಿದ್ದಾರೆ. ಯುವಕರು, ಹಿರಿಯರು, ಕಿರಿಯರು, ಮಹಿಳೆಯರು ಒಂದಾಗಿ ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ನಾಮಸ್ಮರಣೆ ಮಾಡುತ್ತಾ ಪಾದಯಾತ್ರೆ ಮಾಡುತ್ತಾರೆ. ೧೦ ದಿನಗಳ ಕಾಲ ಪಾದಯಾತ್ರೆ ಮೂಲಕ ನಡೆದು ಏ.3 ರಂದು ಶ್ರೀಶೈಲಕ್ಕೆ ತಲುಪುತ್ತಾರೆ. ಯಗಾದಿ ಅಮವಾಸ್ಯೆ, ಪಾಡ್ಯದಂದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ, ರಥೋತ್ಸವ, ಭ್ರಮರಾಂಬೆದೇವಿಯ ಪಡೆದು…

Read More

– ಇಲಾಹಿ ಇ ಜಮಖಂಡಿ ಚಿಮ್ಮಡ: ಬಣ್ಣ ಆಡುವುದೇ ಹೋಳಿ ಹಬ್ಬದಲ್ಲಿ ಪ್ರಧಾನ. ಅದಕ್ಕೆಂದೇ ಅದು ರಂಗಿನ ಹಬ್ಬವೆಂದು ದೇಶಾದ್ಯಂತ ಮನೆಮಾತಾಗಿದ್ದರೂ ಇಲ್ಲೊಂದು ಗ್ರಾಮದಲ್ಲಿ ಬಣ್ಣದಾಟವಿಲ್ಲದೆಯೇ ಪ್ರತೀವರ್ಷ ಹೋಳಿ ಆಚರಣೆ ನಡೆಯುತ್ತಿರುವುದು ಈ ಭಾಗದಲ್ಲಿ ವಿಶೇಷವೆನಿಸಿದೆ.ರಬಕವಿ-ಬನಹಟ್ಟಿ ತಾಲೂಕು ಚಿಮ್ಮಡ ಗ್ರಾಮದಲ್ಲಿ ಯಾವುದೇ ಬಣ್ಣ ಎರಚದೆ ಕಳೆದ ಮೂವತೈದು ವರ್ಷಗಳಿಂದ ವಿಶಿಷ್ಟ ರೀತಿಯ ಹೋಳಿ ಆಚರಣೆಗೆ ಮನೆಮಾತಾಗಿದೆ.ಹೋಳಿಹಬ್ಬ ಬಂತೆಂದರೆ ಹಳೆ ಬಟ್ಟೆ ಧರಿಸಿ ಎಲ್ಲರು ಬಣ್ಣದಾಟಕ್ಕೆ ಅಣಿಯಾಗುತ್ತಾರೆ. ಆದರೆ ಇಲ್ಲಿನ ದರ್ಜಿಗಳಿಗೆ ಹೋಳಿ ಹಬ್ಬದ ಸಮಯದಲ್ಲಿ ಹಗಲು ರಾತ್ರಿ ಕೆಲಸ. ಕಬ್ಬು ಕಡಿಯುವವರ ತಂಡಗಳು, ಆಲೆಮನೆ ತಂಡಗಳು, ಗೌಂಡಿ(ಮೇಸ್ತ್ರಿ)ಗಳ ತಂಡಗಳು, ಇಡೀ ತಂಡಕ್ಕೆ ಒಂದೇ ಬಣ್ಣದ ಬಟ್ಟೆ ಖರೀದಿಸಿ ಹೊಲಿಯಲು ಹಾಕುತ್ತಾರೆ ಹುಣ್ಣಿಮೆಯ ಮಾರನೆ ದಿನ (ಕರೀದಿನ) ಎಲ್ಲರು ಒಮ್ಮೆಗೆ ಹೊಸ ಬಟ್ಟೆ ಧರಿಸಿ ಹೋಳಿ ಹಾಡುಗಳನ್ನು ಹಾಡುತ್ತಾ ಊರು ಸುತ್ತುವುದನ್ನು ನೋಡಿದರೆ ಜನಪದ ಕಲೆ ಇನ್ನು ಜೀವಂತವಿದೆ ಅನ್ನಿಸದಿರದು.ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ದಿನ ಬಣ್ಣ ಎರಚಾಡದಂತೆ ಗ್ರಾಮ ಪಂಚಾಯತಿಯಿಂದ ಡಂಗುರ, ಧ್ವನಿವರ್ಧಕಗಳ…

Read More

ಗಬಸಾವಳಗಿ & ಬಿಸನಾಳ ಸಿಂದಗಿ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಸಿಂದಗಿ: ಬೇಡಿಕೆ ಈಡೇರುವವರೆಗೆ ಸತ್ಯಾಗ್ರಹ ಜಾಗೆ ಬಿಟ್ಟು ಕದಲುವುದಿಲ್ಲ, ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ, ಮನವಿಯನ್ನೂ ಸಲ್ಲಿಸಲಾಗಿದೆ, ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ ನಾಳೆಯಿಂದ ಉಪವಾಸ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡ ಬಂಗಾರೆಪ್ಪಗೌಡ ಬಿರಾದಾರ ಹೇಳಿದರು.ಆಲಮೇಲ ತಾಲೂಕಿಗೆ ಸೇರ್ಪಡೆಯಾದ ಗಬಸಾವಳಗಿ ಹಾಗೂ ಬಿಸಾನಾಳ ಗ್ತಾಮವನ್ನು ಮರಳಿ ಸಿಂದಗಿ ತಾಲೂಕಿಗೆ ಮುಂದು ವರೆಸುವಂತೆ ಪಟ್ಟಣದ ಖಾಸಗಿ ಹೋಟಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಲೋಕಸಭೆ ಚುನಾವಣೆಯಲ್ಲಿ ನಾವ್ಯಾರೂ ಹಕ್ಕು ಚಲಾಯಿಸುವುದಿಲ್ಲ, ಹೋರಾಟ ನಿಲ್ಲಿಸುವುದಿಲ್ಲ. ಆಲಮೇಲ ಪಟ್ಟಣ ತಾಲೂಕಾಗಿ ಪರಿವರ್ತನೆಯಾಗುತ್ತಿದ್ದಂತೆ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಮೀಪದ ಸಿಂದಗಿಯನ್ನು ಬಿಟ್ಟು ಆಲಮೇಲ ತಾಲೂಕಿಗೆ ಸೇರಿಸಿರುವುದೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಗಬಸಾವಳಗಿಯಲ್ಲಿ ಉಭಯ ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ನ್ಯಾಯಾಲಯ, ತಾಲೂಕು ಕಚೇರಿ ಕೆಲಸಗಳಿಗೆ ೪೦ ಕಿ.ಮೀ.ದೂರದ ಆಲಮೇಲ ಪಟ್ಟಣಕ್ಕೆ ತೆರಳಬೇಕಾಗಿದೆ. ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಯಾವುದೇ ಪ್ರಮಾಣ ಪತ್ರ…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಹೋಳಿ ಹುಣ್ಣಿಮೆ ಅಂಗವಾಗಿ ಬರದ ನಡುವೆಯೂ ಕಾಮ ದಹನ ಸಡಗರ ಸಂಭ್ರಮದಿಂದ ನಡೆಯಿತು.ಬೆಳಗ್ಗೆಯಿಂದಲೇ ಮಕ್ಕಳು, ಯುವಕರು ಹಲಗೆ ನಾದದೊಂದಿಗೆ ಅಲ್ಲಲ್ಲಿ ಸುತ್ತಾಡಿ ಕಟ್ಟಿಗೆ ಸಂಗ್ರಹಿಸುತ್ತಿರುವುದು ಕಂಡು ಬಂದಿತು. ಮನೆಗಳಲ್ಲಿ ಮಕ್ಕಳೊಂದಿಗೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಮನೆಯ ಮುಂದೆ ಕಾಮ ದಹನ ಮಾಡಿದರು. ಸಂಜೆ ಪಟ್ಟಣದ ವಿವಿಧ ಬಡಾವಣೆಗಳ ವಿಶಾಲ ಜಾಗೆಯಲ್ಲಿ ಕಟ್ಟಿಗೆ ಜೋಡಿಸಿ ಸುತ್ತಲೂ ರಂಗವಲ್ಲಿ ಚಿತ್ತಾರ ಬಿಡಿಸಿದರು. ಸೂರ್ಯಾಸ್ಥ ಸಮಯವಾಗುತ್ತಿದ್ದಂತೆ ಸಾಮೂಹಿಕ ಪೂಜೆ ಸಲ್ಲಿಸಿದ ನಂತರ ಕಾಮ ದಹನ ಮಾಡಲಾಯಿತು. ಕೆಲವರು ಹೋಳಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಪಟ್ಟಣದ ಸಾರಂಗಭಾವಿ ಹತ್ತಿರ ಹೋಳಿ ಹಬ್ಬದ ಹಾಡುಗಳನ್ನು ಹಾಡಿ ಸಂಭ್ರಮಿಸಲಾಯಿತು. ಹಲಗೆ ನಾದದೊಂದಿಗೆ ಕೆಲವರ ಮನೆಯ ಮುಂದೆಯೂ ಕಾಮದಹನ ಮಾಡುತ್ತಿರುವುದು ವಿವಿಧೆಡೆ ಕಂಡುಬಂದಿತು.ಪದಕಿ ಪೂಜೆ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಹೋಳಿ ಹುಣ್ಣಿಮೆ ದಿನದಂದು ಮಾಡುವ ಪದಕಿ ಪೂಜೆಯನ್ನು ಕುಟುಂಬ ಸದಸ್ಯರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮಾತಂಗಿಯರನ್ನು ಮನೆಗೆ ಆಹ್ವಾನಿಸಿ ಮನೆಯ ಪಡಸಾಲೆಯಲ್ಲಿ…

Read More