Author: editor.udayarashmi@gmail.com

ಚಿಮ್ಮಡ: ರಬಕವಿ-ಬನಹಟ್ಟಿ ತಾಲೂಕು ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಗೆ ಗ್ರಾಮದ ಇಬ್ಬರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ, ಗ್ರಹಲಕ್ಷ್ಮಿ, ಗ್ರಹಜ್ಯೋತಿ, ಅನ್ನಭಾಗ್ಯ, ಯುವಶಕ್ತಿ ಈ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಜಿಲ್ಲೆ, ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮೀತಿ ರಚಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಧುರೀಣ ಸಿದ್ದು ಕೊಣ್ಣೂರ ಸಿಫಾರಸ್ಸಿನ ಮೇರೆಗೆ ಸ್ಥಳೀಯ ಕಾಂಗ್ರೆಸ್ ಧುರೀಣರಾದ ಪ್ರವೀಣ ಪೂಜಾರಿ, ಹಾಗೂ ರವಿ ದೊಡವಾಡ ಅವರನ್ನು ರಬಕವಿ-ಬನಹಟ್ಟಿ ತಾಲೂಕು ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಗೆ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ನೀಡಿದೆ.

Read More

ಇಂಡಿ: ರೈತರು ಸಬಲರಾದರೆ ಗ್ರಾಮಗಳು ಸಬಲರಾಗುತ್ತವೆ ಎಂದು ಕೃಷಿ,ತೋಟಗಾರಿಕೆ, ಪಶುಸಂಗೋಪನೆಯಲ್ಲಿ ನೆರವಾಗಲು ಸರಕಾರ ಕೃಷಿ ಸಖಿಯರನ್ನು ನೇಮಿಸಿದ್ದು ಕೃಷಿ ಸಖಿಯರಿಂದ ಸರಿಯಾದ ಮಾಹಿತಿ ಪಡೆದು ರೈತರು ಕೃಷಿಯಲ್ಲಿ ಸಬಲರಾಗಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಿ.ಪ್ರಕಾಶ ಹೇಳಿದರು.ಅವರು ತಾಲೂಕಿನ ತಾಂಬಾ ಗ್ರಾಮದ ರಾಷ್ಟ್ರ ಪ್ರಶಸ್ತಿ ವಿಜೇತ ರೈತ ಭೀರಪ್ಪ ಇವರ ತೋಟದಲ್ಲಿ ಇಂಡಿ ಮತ್ತು ಚಡಚಣ ತಾಲೂಕಿನ ೪೦ ಜನ ಕೃಷಿ ಸಖಿಯರಿಗೆ ವಿವಿಧ ರೀತಿಯ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಿರುವ ಐದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ರೈತ ಭೀರಪ್ಪ ವಗ್ಗಿ ಮಾತನಾಡಿ, ಕೃಷಿ ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ ಕೃಷಿ ಸಖಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದರು.ಕಾರ್ಯಕ್ರಮದಲ್ಲಿ ದುಂಡಪ್ಪ ಮುಂಜಿ, ಬಸಪ್ಪ ವಗ್ಗಿ, ಪದಮಣ್ಣ ವಗ್ಗಿ, ಹಣಮಂತ ಮಾಳಗೊಂಡ ಮತ್ತಿತರಿದ್ದರು.೪೦ ಜನ ಕೃಷಿ ಸಖಿಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

Read More

ಇಂಡಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಚುನಾವಣೆಯಲ್ಲಿ ವಿವಿಧ ಅನುಮತಿಗಳನ್ನು ನೀಡಲು ಏಕ ಗವಾಕ್ಷಿ ತಂಡವನ್ನು ರಚಿಸಲಾಗಿದೆ ಎಂದು ಸಹಾಯಕ ಚುನಾವಣಾ ಆದಿಕಾರಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನಡೆಸುವ ಪ್ರಚಾರದ ಸಂಬಂಧವಾಗಿ ಅನುಮತಿಗಾಗಿ ಕೋರುತ್ತಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಏಕ ಗವಾಕ್ಷಿ ಕಾರ್ಯ ಮಾಡುವದು.ಕಂದಾಯ ಇಲಾಖೆಯ ಎಸ್.ಆರ್.ಮುಜಗೊಂಡ, ಪೋಲಿಸ ಇಲಾಖೆಯ ಪಿ.ಎ.ಅರವತ್ತು, ಪುರಸಭೆಯ ಎಲ್.ಎಸ್.ಸೋಮನಾಯಕ, ತಾ.ಪಂ ವಾಯ್.ಡಿ.ಮಾದರ, ಅಗ್ನಿಶಾಮಕ ಇಲಾಖೆಯ ಮುಬಾರಕ ಇಂಡಿಕರ, ಲೋಕೋಪಯೋಗಿ ಇಲಾಖೆಯ ಷಣ್ಮುಖ ಚಂದನಸೇವೆ, ಹೆಸ್ಕಾಂ ಇಲಾಖೆಯ ಶರಣಪ್ಪ ಕಟ್ಟಿಮನಿ, ಸಾರಿಗೆ ಇಲಾಖೆಯ ಸಂಗನಗೌಡ ಬಿರಾದಾರ, ಆರ್.ಟಿ.ಓ ಇಲಾಖೆಯ ಕೆ.ಸುರೇಶಕುಮಾರ ತಂಡದಲ್ಲಿದ್ದಾರೆ.

Read More

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಇಲ್ಲಿನ ಆರಾದ್ಯದೇವ ಶ್ರೀ ಮಲ್ಲಯ್ಯ ದೇವಸ್ಥಾನ ಕಟ್ಟಡ ಮರು ನಿರ್ಮಾಣ ಕಾರ್ಯದ ಪ್ರಾರಂಭೋತ್ಸವ ಏ.೯ ರಂದು ಜರುಗಲಿದೆ. ಈ ನಿಮಿತ್ಯ ಏ.೧ ರಿಂದ ೯ರ ವರೆಗೆ ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜರುಗಲಿರುವ ಪ್ರವಚನ ಕಾರ್ಯಕ್ರಮವನ್ನು ಯಶಶ್ವಿಗೊಳಿಸಲು ಗ್ರಾಮಸ್ಥರು ನಿರ್ಧರಿಸಿದರು.ಗ್ರಾಮದ ಶ್ರೀ ಮಲ್ಲಯ್ಯ ಮಂದಿರದ ಆವರಣದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆಲ ಗಣ್ಯರು ಮಾತನಾಡಿ, ನಿರಂತರ ೯ ದಿನಗಳ ಪ್ರವಚನ ಕಾರ್ಯಕ್ರಮವನ್ನು ಚಡಚಣ ತಾಲೂಕಿನ ತದ್ದೇವಾಡಿಯ ಶ್ರೀ ಮಹಾಂತಯ್ಯ ಶಾಸ್ತಿçಗಳು ನಿತ್ಯ ಸಂಜೆ ೭.೩೦ ರಿಂದ ೮.೩೦ರ ವರೆಗೆ ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.ಬೇಸಿಗೆಯ ಈ ದಿನಗಳಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಇತ್ತ ರೈತರು ಸುಗ್ಗಿ ಕಾಲದ ಕೃಷಿ ಕೆಲಸಗಳನ್ನು ಮುಗಿಸಿಕೊಂಡು ಕೊಂಚ ಬಿಡುವಿನ ವೇಳೆಯಲ್ಲಿ ಇದ್ದಾರೆ. ಮತ್ತೊಂದೆಡೆ ಗ್ರಾಮದ ಶಿಕ್ಷಕರು ಈಗ ವಿಶ್ರಾಂತಿಯ ಗಳಿಗೆಯಲ್ಲಿದ್ದಾರೆ. ಸಮಯೋಚಿತ ಈ ಕಾರ್ಯಕ್ರಮದಿಂದ ಸರ್ವರಿಗೂ ಪ್ರಯೋಜನವಾಗಲಿದೆ. ಶಾಲಾ…

Read More

ಇಂಡಿ: ಪಟ್ಟಣದ ಬೀರಪ್ಪ ನಗರದ ನಿವಾಸಿ ಶ್ರೀಶೈಲ ಎಸ್. ಬಿರಾದಾರ ಅವರನ್ನು ಇಂಡಿ ತಾಲೂಕು ಯುವ ಜನತಾದಳ (ಜಾತ್ಯಾತೀತ) ವಿಭಾಗಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪಕ್ಷದ ಮುಖಂಡರಾದ ಬಿ.ಡಿ. ಪಾಟೀಲ್ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿ ರಾಜ್ಯ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇಮಕಾತಿ ಆದೇಶ ನೀಡಿದ್ದಾರೆ.ಪಕ್ಷದ ತತ್ವ ಹಾಗೂ ಸಿಧ್ಧಾಂತಗಳಿಗೆ ಬಧ್ಧರಾಗಿ ಇಂಡಿ ತಾಲೂಕಿನಲ್ಲಿ ಯುವ ಜನತಾದಳ ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

Read More

ಬ್ರಹ್ಮದೇವನಮಡು: ವಿಜಯಪುರ ಜಿಲ್ಲಾ ಬಿಜೆಪಿ ಎಸ್.ಸಿ.ಮೋಚಾ೯ದ ಉಪಾಧ್ಶಕ್ಷರಾಗಿ ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಬಿಜೆಪಿ ಯುವ ಮುಖಂಡ ಭೀಮರಾಯ ಮೇಲಿನಮನಿ ಅವರನ್ನು ನೇಮಕ ಮಾಡಿ ಪಕ್ಷದ ಎಸ್.ಸಿ.ಮೋಚಾ೯ದ ಜಿಲ್ಲಾಧ್ಶಕ್ಷ ಮಂಜುನಾಥ ಮೀಸಿ ಆದೇಶ ಹೊರಡಿಸಿದ್ದಾರೆ.ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷ ಸಂಘಟನೆಗೆ ಸನ್ನದ್ದರಾಗುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

Read More

ನರೇಗಾ ಯೋಜನೆಯಡಿ ದಿನಗೂಲಿ ಹಣ ರೂ.೩೧೬ ರಿಂದ ರೂ.೩೪೯ ಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ವಿಜಯಪುರ: ಗ್ರಾಮೀಣ ಪ್ರದೇಶದಲ್ಲಿನ ಜನರು ವಲಸೆ ಹೋಗುವುದನ್ನು ತಪ್ಪಿಸಲು ಹಮ್ಮಿಕೊಂಡ ಮಹತ್ವಾಕಾಂಕ್ಷಿ ಯೋಜನೆ ನರೇಗಾ. ಈಗ ನರೇಗಾ ಯೋಜನೆಯಡಿ ಕೆಲಸ ಮಾಡುವು ಕಾರ್ಮಿಕರಿಗೆ ದಿನಗೂಲಿಯ ಮೊತ್ತ ೩೪೯ರೂ ಮಾಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಿಶಿ ಆನಂದ ಕರೆ ನೀಡಿದ್ದಾರೆ.ಶನಿವಾರ ಪತ್ರಿಕಾ ಪ್ರಕಟಣೆಯ ಮೂಲಕ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸಿ ವಲಸೆ ತಡೆಯುವ ಉದ್ದೇಶದಿಂದ “ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ” ಅಭಿಯಾನವನ್ನು ಮಾರ್ಚ್ ೧೫ ರಿಂದ ಮೇ ೩೧ ೨೦೨೪ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.೨೦೨೩-೨೪ನೇ ಸಾಲಿನಲ್ಲಿ ಮಳೆ ಕೊರತೆಯಿಂದ ವಿಜಯಪುರ ಜಿಲ್ಲೆಯ ೧೩ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳೆಂದು…

Read More

ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವ | ಮೂರ್ತಿ ಪ್ರತಿಷ್ಠಾಪನೆ | ಗೋಪುರ ಕಳಸಾರೋಹಣ | ಧರ್ಮಸಭೆ *- ರೇಖಾ ಪಿ.ಗದ್ಯಾಳ*ತಿಕೋಟಾ: ಹೊಗಳಿಕೆ ಮತ್ತು ತೆಗಳಿಕೆಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಲೋಕದಲ್ಲಿ ಹುಟ್ಟಿದ ಮೇಲೆ ಸ್ತುತಿ ಹಾಗೂ ನಿಂದನೆಗಳು ಬಂದೇ ಬರುತ್ತವೆ. ಆಗ ಸಮಾಧಾನ ಚಿತ್ತದಿಂದ ಸ್ವೀಕರಿಸುವ ಗುಣ ಇರಬೇಕು. ಆ ಗುಣಗಳು ಮಹಾತ್ಮರಲ್ಲಿ ಇರುತ್ತವೆ ಎಂದು ಶ್ರೀಶೈಲ್ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವ, ಮೂರ್ತಿ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ನಿಮಿತ್ಯ ಶನಿವಾರ ನಡೆದ ಧರ್ಮ ಚಿಂತನೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.ಶಿವಯೋಗಿಗಳಿಗೆ ಸ್ತುತಿ, ಗುಣಗಾನ ಹಾಗೂ ಸೇವೆ ಮಾಡಿದರೆ ಪುಣ್ಯ ಬರುವದು. ನಿಂದನೆ, ಹಿಂಸೆ ಹಾಗೂ ದುಃಖ ಮಾಡಿದರೆ ಪಾಪದ ಫಲ ದೊರೆಯುವದು. ಶಿವಯೋಗಿಗಳು ನಿರ್ಲಿಪ್ತ ಮನೋಭಾವದಿಂದ ಇರುತ್ತಾರೆ. ಯಾರೇ ನಿಂದನೆ ಮಾಡಿದರೂ ನಾವು ಸ್ವೀಕರಿಸದೇ ಬಿಟ್ಟು ಬಿಡಬೇಕು. ಈ ಗುಣ ಮಹಾತ್ಮರಲ್ಲಿ ಇರುತ್ತದೆ. ಅಂತಹ ಎತ್ತರದ ಸ್ಥಾನದಲ್ಲಿ ಮುರುಘೇಂದ್ರ…

Read More

ವಿಜಯಪುರ: ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೧೦ ಎಂ.ವಿ ಬದಲು ೨೦ ಎಂ.ವಿ ಶಕ್ತಿ ಪರಿವರ್ತಕ ಅಳವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ಏಪ್ರಿಲ್ ೧ ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳಲ್ಲಿ ಬರುಗ ವಿದ್ಯುತ್ ಗ್ರಾಹಕರು, ಸಾರ್ವಜನಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ದೊಡ್ಡ ಕೆರೆಯಾದ ಬೇಗಂ ತಲಾಬ್‌ನಲ್ಲಿ ಹೂಳು ಹೆಚ್ಚಾಗಿದ್ದು, ನೀರು ಸಂಗ್ರಹಣೆ ಸಾಮಥ್ಯ ಕಡಿಮೆ ಆಗಿರುತ್ತದೆ. ಕೆರೆಯ ಸಾಮರ್ಥ್ಯವನ್ನು ಹೆಚ್ಚಿಸಲು ಬೇಸಿಗೆ ಕಾಲದಲ್ಲಿ ಹೂಳನ್ನು ತಗೆಯುವುದು ಅವಶ್ಯಕವಾಗಿದೆ. ಈ ಕಾರಣದಿಂದ ಕೆರೆಯಲ್ಲಿನ ಹೂಳನ್ನು ಆಸಕ್ತ ರೈತರು ತಮ್ಮ ಜಮೀನುಗಳಿಗೆ ತೆಗೆದುಕೊಂಡ ಹೋಗಲು ನಿಯಮಾನುಸಾರವಾಗಿ ಅನುಮತಿ ಪಡೆಯಲು ಆಸಕ್ತ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More