Author: editor.udayarashmi@gmail.com

ಸಿಂದಗಿ: ತಾಲೂಕಿನ ಗುಬ್ಬೆವಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೋರಗಿ, ಪುರದಾಳ, ಗುಬ್ಬೆವಾಡ, ಹಡಗಿನಾಳ ಹಾಗೂ ಕಣ್ಣಗುಡ್ಡಿಹಾಳ ಗ್ರಾಮದ ಪ್ರಸಕ್ತ ಸಾಲಿನ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಹಾಗೂ ಕಲಾ ವಿಭಾಗದಲ್ಲಿ ಶೇಕಡಾ ೯೦ರಷ್ಟು ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿ/ನೀಯರಿಗೆ ಗುಬ್ಬೇವಾಡ ಗ್ರಾಮ ಪಂಚಾಯತ್ ವತಿಯಿಂದ ಪ್ರತಿಭಾ ಪುರಸ್ಕಾರ (ಗೌರವ ಸನ್ಮಾನ) ಮಾಡಲು ನಿರ್ಧರಿಸಲಾಗಿದ್ದು, ಆಸಕ್ತ ವಿಧ್ಯಾರ್ಥಿ/ನೀಯರು ಎ.೧೫ರ ಒಳಗಾಗಿ ತಮ್ಮ ಭಾವಚಿತ್ರದ ಜೊತೆಗೆ ಶೇ.೯೦ರಷ್ಟು ಅಂಕ ಪಡೆದ ಪ್ರತಿಯನ್ನು ೯೭೪೨೮೪೯೬೬೩ ಈ ದೂರವಾಣಿ ಸಂಖ್ಯೆಯ ವ್ಯಾಟ್ಸ್ಪ್‌ಗೆ ಕಳುಹಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೯೦೦೩೯೬೪೧೦ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಚಡಚಣ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಮುಸ್ಲಿಂ ಬಾಂಧವರು ಈದ್ಉಲ್ ಫಿತ್ರ ಹಬ್ಬವನ್ನು (ರಂಜಾನ್) ಸಡಗರ-ಸಂಭ್ರಮದಿಂದ ಆಚರಿಸಿದರು.ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಬೆಳಗ್ಗೆ ಪಟ್ಟಣದ ಉಮದಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

Read More

ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ರಾಜ್ಯಕ್ಕೆ 7 ಮತ್ತು 10 ನೇ ಸ್ಥಾನದ ಸಾಧನೆ ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮಹಾವಿದ್ಯಾಲಯದ ಒಟ್ಟು ಫಲಿತಾಂಶ 99% ರಷ್ಟು ಆಗಿದೆ. ವಿಜ್ಞಾನ ವಿಭಾಗದ ಫಲಿತಾಂಶ 100% ಆಗಿದ್ದು, ಕಲಾ ಹಾಗೂ ವಾಣಿಜ್ಯ ವಿಭಾಗದ ಫಲಿತಾಂಶ 99% ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 394 ವಿದ್ಯಾರ್ಥಿಗಳಲ್ಲಿ 110 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 210 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 20 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಕಾಂಚನಾ ಡೋಣಗಾಂವ 590(98.33%) ಅಂಕಗಳನ್ನು ಪಡೆದು ರಾಜ್ಯಕ್ಕೆ 7 ರ‍್ಯಾಂಕ, ಜಿಲ್ಲೆಗೆ 5 ರ‍್ಯಾಂಕ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಆನಂದ ಅಡಕೆ 589(98.17%) ಅಂಕಗಳನ್ನು ಪಡೆದು ರಾಜ್ಯಕ್ಕೆ 10 ರ‍್ಯಾಂಕ, ಜಿಲ್ಲೆಗೆ 6 ರ‍್ಯಾಂಕ ಮತ್ತು…

Read More

ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಮುಸ್ಲಿಂ ಜನತೆ ತಮ್ಮ ಕುಟುಂಬ ಸಮೇತ ಭೇಟಿ ನೀಡುವುದು ವಾಡಿಕೆ ಸಂಪದಾ ಹಿರೇಮಠಆಲಮಟ್ಟಿ: ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಶುಕ್ರವಾರ, ಆಲಮಟ್ಟಿಗೆ ಸಹಸ್ರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದರು.ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಮುಸ್ಲಿಂ ಜನತೆ ತಮ್ಮ ತಮ್ಮ ಕುಟುಂಬ ಸಮೇತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ವಾಡಿಕೆ. ಕಳೆದ ಒಂದು ದಶಕಗಳಿಂದಲೂ ಆಲಮಟ್ಟಿಗೆ ಹಬ್ಬದ ಮರುದಿನ ಸಹಸ್ರಾರು ಸಂಖ್ಯೆಯ ಜನ ಬರುವುದು ಸಾಮಾನ್ಯವಾಗಿದೆ.ಹೀಗಾಗಿ ಈ ವರ್ಷವೂ ಆಲಮಟ್ಟಿಯ ಎಲ್ಲಾ ಉದ್ಯಾನಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಪುತ್ಥಳಿಯಿಂದ ಹಿಡಿದು ಆಲಮಟ್ಟಿ ಜಲಾಶಯದವರೆಗೆ ಎರಡು ರಸ್ತೆಯುದ್ದಕ್ಕೂ ಜನವೋ ಜನ ಹಾಗೂ ವಾಹನಗಳ ಭರಾಟೆ ಜೋರಾಗಿತ್ತು. ಅವಳಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಲಮಟ್ಟಿಗೆ ಆಗಮಿಸಿದ್ದರು.ರೈಲು, ಬಸ್, ಖಾಸಗಿ ವಾಹನಗಳ ಮೂಲಕ ಆಲಮಟ್ಟಿಗೆ ಜನ ಸಂಜೆಯವರೆಗೂ ಬರುತ್ತಿದ್ದವು. ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಪುತ್ಥಳಿಯಿಂದ…

Read More

-ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ, ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಒಂದು ಹಳ್ಳಿಯ ಜಮೀನ್ದಾರನ ಜಮೀನಿನಲ್ಲಿ ಒಬ್ಬ ಬಡ ಕೆಲಸದಾಳು ಹೊಲದ ಕೆಲಸವನ್ನು ಮಾಡುತ್ತಿದ್ದನು. ಮಧ್ಯಾಹ್ನದ ವೇಳೆ ಅದು, ಆಗ ಅಲ್ಲೆಲ್ಲೋ ಪಕ್ಕದ ಜಮೀನಿನಲ್ಲಿ ಯಾರೋ ಒಬ್ಬರು ಅಯ್ಯೋ ನನ್ನನ್ನು ಯಾರಾದರೂ ಕಾಪಾಡಿ… ಕಾಪಾಡಿ ಎಂದು ಜೋರಾಗಿ ಕೂಗುತ್ತಿದ್ದುದು ಆ ಕೆಲಸದ ಆಳಿಗೆ ಕೇಳಿಸಿತು. ಕೂಡಲೇ ಕೂಗು ಕೇಳಿ ಬರುತ್ತಿದ್ದ ಕಡೆಗೆ ಹೋಗಿ ನೋಡಿದಾಗ ತರುಣನೊಬ್ಬ ಪಾಳು ಬಾವಿಯೊಳಗೆ ಬಿದ್ದು ಭಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದನು. ಆ ತರುಣನ ದಯನೀಯ ಸ್ಥಿತಿಯನ್ನು ಗಮನಿಸಿದ ಆ ಕೆಲಸದಾಳು ತಕ್ಷಣ ಅಲ್ಲೇ ಸಮೀಪದ ಜಮೀನಿನ ಬಾವಿಯಲ್ಲಿದ್ದ ಹಗ್ಗವನ್ನು ತೆಗೆದುಕೊಂಡು ಬಂದು ಅದನ್ನು ತರುಣ ಬಿದ್ದಿದ್ದ ಪಾಳು ಬಾವಿಯ ಒಳಗೆ ಇಳಿಯಬಿಟ್ಟು ಅದರ ಮೂಲಕ ಆ ತರುಣನ್ನು ಮೇಲಕ್ಕೆ ಎತ್ತಿದನು. ನಂತರ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಿಸಿ ನೀರಿನಿಂದ ಸ್ನಾನ ಮಾಡಿಸಿ, ಹೊಟ್ಟೆ ತುಂಬಾ ಊಟವನ್ನು ಕೊಟ್ಟು ಆತನ…

Read More

ಮೋರಟಗಿ: ಗ್ರಾಮದ ಪತ್ರಕರ್ತ ಸಿದ್ದು ಕೆರಿಗೊಂಡ ಅವರ ಪುತ್ರಿ ಮೀನಾಕ್ಷಿ ಕೆರಿಗೊಂಡ ೨೦೨೪ ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ೫೭೧ ಅಂಕಗಳನ್ನು ಗಳಿಸಿ ಶೇ ೯೫.೧೭% ಫಲಿತಾಂಶ ಮಾಡಿ ಸಾಧನೆ ಮಾಡಿದ್ದಾಳೆ.ಗ್ರಾಮದ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ರಾಸಾಯನ ಜೀವಶಾಸ್ತ್ರಕ್ಕೆ ೯೯, ಗಣಿತ ವಿಷಯಕ್ಕೆ ೯೯, ರಾಸಾಯನಶಾಸ್ತ್ರಕ್ಕೆ ೯೬, ಬೌತಶಾಸ್ತ್ರಕ್ಕೆ ೯೪, ಹಿಂದಿ ವಿಷಯಕ್ಕೆ ೯೫, ಇಂಗ್ಲಿಷ್ ವಿಷಯಕ್ಕೆ ೮೮ ಅಂಕಗಳನ್ನು ಪಡೆಡಿದ್ದಾಳೆ.ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸಿಂದಗಿ ಹಾಗೂ ಆಲ್ಮೆಲ್ ತಾಲೂಕು ಕಾರ್ಯನಿರತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ವಿಜಯಪುರ : ಬಿ.ಡಿ.ಪಿ.ಹೆಚ್. ಡಬ್ಲೂö್ಯ. ಶಿಕ್ಷಣ ಸಂಸ್ಥೆಯ ಎಸ್.ಕೆ.ವ್ಹಿ.ಎಮ್.ಎಸ್. (ಖೇಡ) ಪದವಿ ಪೂರ್ವ ಕಾಲೇಜು, ವಿಜಯಪುರ ಇದರ ೨೦೨೪ರ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಂದೀಪ ಲಮಾಣಿ ಶೇ.೯೪ ರಷ್ಟು, ದ್ವಿತೀಯ ಸ್ಥಾನವನ್ನು ಸಚೀನ ದೊಡಮನಿ ಶೇ.೯೧.೩೩% ರಷ್ಟು ಹಾಗೂ ತೃತೀಯ ಸ್ಥಾನವನ್ನು ಕಾರ್ತಿಕ ಜಾಧವ ಶೇ.೮೪% ರಷ್ಟು ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಇದರೊಂದಿಗೆ ಮನೀಶ ರಾಠೋಡ ಶೇ.೮೨.೫%, ಸಚೀನ ಮಾದರ ಶೇ.೮೨%, ಅಕ್ಷತಾ ನಾಯಕ ಶೇ.೮೦%, ಸಿದ್ರಾಮ ಕುಂಬಾರ ಶೇ.೮೧.೧೬%, ಕಿರಣ ಲಮಾಣಿ ಶೇ.೭೮%, ರಾಹುಲ ರಾಠೋಡ ಶೇ.೭೮%, ವಿಶಾಲ ದೊಡಮನಿ ಶೇ.೭೮% ರಷ್ಟು ಫಲಿತಾಂಶವನ್ನು ಮಾಡಿರುತ್ತಾರೆ.ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪ್ರತಿಭಾ ರಾಠೋಡ ಶೇ.೮೯.೫%,ದ್ವಿತೀಯ ಸ್ಥಾನವನ್ನು ಮಹೇಶ ರಾಠೋಡ ಶೇ.೮೫.೩೩%, ತೃತೀಯ ಸ್ಥಾನವನ್ನು ರಾಜಕುಮಾರ ತೊರವಿ ಶೇ.೮೪.೬೬%, ಪಡೆದುಕೊಂಡಿರುತ್ತಾರೆ. ಇದರೊಂದಿಗೆ ವಿಜಯ ಇಂಗಳೇಶ್ವರ ಶೇ.೮೩.೩೩%, ವಿನಾಯಕ ರಾಠೋಡ ಶೇ.೮೧.೫%, ಮೇಘಾ ಮಂಜಳಕರ ಶೇ.೮೧%, ಪ್ರೀಯಾ ಪೂಜಾರಿ ಶೇ.೮೧%, ಅರ್ಚನಾ ದೋತ್ರೆ ಶೇ.೮೦.೪%, ಸುದೀಪ…

Read More

ವಿಜಯಪುರ: ಮೊನ್ನೆ ನಡೆದ ದ್ವಿತೀಯ ಪಿಯುಸಿಪರೀಕ್ಷೆಯಲ್ಲಿ ಸರಕಾರಿ ಪದವಿಪೂರ್ವ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದು ಕೂಡಗಿ ಗ್ರಾಮ ಪಂಚಾಯತಿ, ಎಸ್. ಡಿ. ಎಮ್. ಸಿ, ಗ್ರಾಮದ ಗುರು, ಹಿರಿಯರು ಹಾಗೂ ಕಾಲೇಜಿನ ಸಿಬ್ಬಂದಿವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.ರುಕ್ಮಿಣಿ ತಳೇವಾಡ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುವುದರ ಮೂಲಕ ಶೇಕಡಾ ೯೬% ಕಾಲೇಜಿಗೆ ಪ್ರಥಮ ಸ್ಥಾನ ಸೌಮ್ಯ ಬಡಿಗೇರ ಸಮಾಜ ಶಾಸ್ತ್ರದಲ್ಲಿ ನೂರಕ್ಕೆ ೯೬ ಅಂಕಗಳ ಮೂಲಕ ಶೇಕಡಾ ೯೪% ಗಳಿಸಿ ದ್ವಿತೀಯ ಸ್ಥಾನ ಹಾಗೂ ಉಮೇಶ ನಾಯಕ ಶೇಕಡಾ ೯೨% ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಒಟ್ಟು ೬೫ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದು ನಾಲ್ಕು ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಕೂಡದೇ ಗೈರು ಹಾಜರಾಗಿದ್ದಾರೆ. ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಆಂಗ್ಲ ವಿಷಯದಲ್ಲಿ ಅನುತ್ತೀರ್ಣಗೊಂಗಡಿದ್ದು ಕಾಲೇಜಿನ ಫಲಿತಾಂಶ ಶೇಕಡಾ ೯೭’% ರಷ್ಟಾಗಿದ್ದು. ಪ್ರಾಚಾರ್ಯ ಕೆ. ಜಿ. ಲಮಾಣಿ ಹಾಗೂ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

Read More

ವಿಜಯಪುರ: ಆನಂದಗೌಡರ ಗೆಳೆಯರ ಬಳಗ ಮತ್ತು ವಿಜಯಪುರ ಜಿಲ್ಲಾ ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಮಂಡಳಿ ವತಿಯಿಂದ ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಎಸ್.ಎಲ್. ಖಜಾಪೂರ ಅವಿರೋಧವಾಗಿ ಆಯ್ಕೆಗೊಂಡ ಹಿನ್ನೆಲೆ ಹೃದಯಸ್ಪರ್ಶಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರುಗಳಾದ ಅರ್ಜುನ.ಜಿ.ಲಮಾಣಿ, ಹಣಮಂತ.ಬಿ.ಕೊಣದಿ, ಆನಂದಗೌಡ. ಎನ್. ಬಿರಾದಾರ, ಅಶೋಕ.ವಿ.ಚನಬಸಗೋಳ, ಜಯಶ್ರೀ.ಎಸ್.ಬೆಣ್ಣೆ, ಶ್ರೀಮತಿ ನೀಲಾ.ಎಲ್.ಇಂಗಳೆ ಮುಂತಾದವರು ಇದ್ದರು.

Read More

ವಿಜಯಪುರ: ಬಿಸಿಲ ತಾಪಕ್ಕೆ ಬಳಲುವ ಪಕ್ಷಿಗಳಿಗೆ ವಿಜಯಪುರ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆಂದು ಓದಲು ಬಂದ ವಿದ್ಯಾರ್ಥಿ ಯಾಸಿನ್ ನಿತ್ಯ ಪಕ್ಷಿಗಳಿಗೆ ನೀರು ಧಾನ್ಯಗಳನ್ನಿಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ಮಿಷನ್ ಕಂಪೌಂಡ್ ಹತ್ತಿರ ರೂಮ್ ಮಾಡಿಕೊಂಡು ಓದುತ್ತಿರುವ ಈ ವಿದ್ಯಾರ್ಥಿ, ಹತ್ತಿರದ ಮರಗಳಲ್ಲಿ ಕುಳಿತ ಹಕ್ಕಿಗಳು ಬಿಸಿಲ ಬೇಗೆಗೆ ಬಸವಳಿಯುತ್ತಿರುವುದನ್ನು ಕಂಡು ಹಕ್ಕಿಗಳಿಗೆ ಆಹಾರ ಮತ್ತು ನೀರನ್ನು ಇಡಲು ಏನಾದರೂ ಮಾಡಲೇಬೇಕೆಂದು ಯೋಚಿಸಿ, ಅಡಿಗೆ ಎಣ್ಣೆಯ ಕ್ಯಾನನ್ನು ಯೋಜಿತವಾಗಿ ಕತ್ತರಿಸಿ ನಾಲ್ಕು ಕಡೆಗೆ ಕಾಳುಗಳನ್ನು ಹಾಗೂ ಮಧ್ಯ ನೀರನ್ನು ಹಾಕಲು ಅನುಕೂಲವಾಗುವಂತೆ ಮಾಡಿ ರಮಝಾನ್ ಪ್ರಯುಕ್ತ ನಿತ್ಯವೂ ನಸುಕಿನ ಜಾವ ಎಳುವಾಗಲೇ, ಅವುಗಳಿಗೆ ನೀರು ಕಾಳುಗಳನ್ನು ಹಾಕಿ, ನಂತರ ನಮಾಜ್ ಮಾಡಲು ಹೊರಡುತ್ತಾನೆ.”ನಾವು ಉಳಿಯಬೇಕು, ಮತ್ತು ವನ್ಯ ಸಮುದಾಯವು ಉಳಿಯಬೇಕು. ಇಲ್ಲದಿದ್ದರೆ ಪರಿಸರದ ಅಸಮತೋಲನದಿಂದ ಮಾನವ ಸಮುದಾಯವೇ ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಯಾಸೀನ್.ನಗರದ ಇತರ ವಿದ್ಯಾರ್ಥಿಗಳು ಇವರಂತೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ.

Read More