ಪೋಲಿಸ ಗ್ರಾಮ ವಾಸ್ತವ್ಯದಲ್ಲಿ ಎಸೈ ರಾಘವೇಂದ್ರ ಖೋತ ಅಭಿಮತ
ಚಿಮ್ಮಡ: ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಪೋಲೀಸ ಇಲಾಖೆಯೊಂದಿಗೆ ಸಹಕರಿಸಬೇಕು, ಪ್ರತಿಯೊಬ್ಬ ಪ್ರಜೆಯೂ ಸಮವಸ್ತ್ರವಿಲ್ಲದ ಪೋಲಿಸ್ ಇದ್ದಂತೆ ಎಂದು ಬನಹಟ್ಟಿ ಠಾಣಾಧಿಕಾರಿ ರಾಘವೇಂದ್ರ ಖೋತ ಹೇಳಿದರು.
ಗ್ರಾಮದ ಬಾಹುಸಾಹೇಬರ ಮಠ, ಜಾಮಿಯಾ ಮಸೀದಿ, ದುರ್ಗಾದೇವಿ ದೇವಸ್ಥಾನದ ಆವರಣ ಹಾಗೂ ಜನತಾ ಪ್ಲಾಟ್ನಲ್ಲಿ ಪೋಲಿಸ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಗಾಂಧೀಜಿಯವರ ಆಶಯ ಪೋಲಿಸ್ ಇಲಾಖೆಯ ಧ್ಯೇಯ. ಸಮಾಜದಲ್ಲಿ ಶಾಂತಿ, ನೆಮ್ಮದಿ ತರಲು ಇಲಾಖೆ ಹಗಲಿರುಳು ಶೃಮಿಸುತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರವೂ ಅಷ್ಟೆ ಅವಶ್ಯಕವಾಗಿದೆ ಎಂದು ಹೇಳಿದರು.
ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಹಲವಾರು ಸೌಲಭ್ಯ, ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಹಾಗೂ ಗ್ರಾಮದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕೃಮಗಳ ಕುರಿತು ಸಲಹೆ ನೀಡಿದರು.
ಪೊಲಿಸ್ ಸಿಬ್ಬಂದಿ ಬಿ.ಐ ಹುನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯ ಮನೋಜ ಹಟ್ಟಿ, ಪತ್ರಕರ್ತ ಇಲಾಹಿ ಜಮಖಂಡಿ ಮಾತನಾಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ ಪಾಟೀಲ, ಸದಸ್ಯರಾದ ಅಶೋಕ ಮೋಟಗಿ, ನಾಗಪ್ಪಾ ಆಲಕನೂರ, ಪೈಗಂಬರ ಮೊಪಗಾರ, ಪಿರಸಾಬ ನದಾಫ, ಪ್ರಭು ಗೋವಿಂದಗೋಳ, ರುಸ್ತುಂ ಮಾಲದಾರ, ಹನೀಫ ಚಿಕ್ಕೋಡಿ, ಶಿವಾನಂದ ದಿನ್ನಿಮನಿ, ಅಮೀರಲಿ ಸರಕಾವಸ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೋಲಿಸ ಸಿಬ್ಬಂದಿಗಳಾದ ಪಿ.ಎಸ್ ಚಿಲ್ಲಾಪೂರ ಸ್ವಾಗತಿಸಿದರು, ಮುತ್ತಣ್ಣ ಅಜ್ಜನ್ನವರ, ಪ್ರಕಾಶ ಹಲಗತ್ತಿ ನಿರೂಪಿಸಿದರು ಭೈರು ಚೌಲಗಿ ವಂದಿಸಿದರು.

