ಕಲಕೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅಡಿಗಲ್ಲು ಸಮಾರಂಭದಲ್ಲಿ ಶ್ರೀಗಳ ಅಭಿಮತ
ಕಲಕೇರಿ: ಅಭಿಮಾನದಿಂದ ದಾರ್ಶನಿಕರ ಜಯಂತ್ಯೋತ್ಸವ ಆಚರಿಸುವಂತಾಗಬೇಕು, ಪ್ರತಿಮೆಗಳು ಕೇವಲ ಪ್ರತಿಷ್ಠೆಗಳಾಗದೇ ಪ್ರತಿಮೆಗಳು ಗ್ರಾಮದ ಅಭಿವ್ರದ್ದಿಗೆ ಪ್ರತೀಕವಾಗಬೇಕು ಹಾಗೂ ಯುವ ಜನಾಂಗಕ್ಕೆ ಸ್ಪೂರ್ತಿಯಾಗುವಂತಾಗಬೇಕು. ಈ ದಿಸೆಯಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕೆ ರಾಣಿ ಚೆನ್ನಮ್ಮಳ ಪುತ್ತಳಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನಿಯವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗ್ರಾಮದ ವಿದ್ಯಾಗಿರಿ ಲೇಔಟ್ನಲ್ಲಿ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅಡಿಗಲ್ಲು ಸಮಾರಂಭದಲ್ಲಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಮೀಸಲಾತಿ ಹೋರಾಟ ನಿರಂತರವಾಗಿರಲಿದ್ದು, ನಮ್ಮ ಪಾಲಿನ ಮೀಸಲಾತಿ ಪಡೆಯುವವರೆಗೂ ಹೋರಾಟ ನಿಲ್ಲದು, ಡಿ.೪ ರ ಒಳಗೆ ಸಭೆ ಕರೆದು ಸಮಸ್ಯೆ ಬಗೆಹರಿಸಲು ಸರಕಾರ ಮುಂದಾಗಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು,
ಅಲ್ಲದೇ ಈ ಭಾಗದ ದೇವರಹಿಪ್ಪರಗಿ, ಸಿಂದಗಿ ಕ್ಷೇತ್ರದ ಶಾಸಕರು ಮೀಸಲಾತಿಗಾಗಿ ಅಧೀವೇಶನದಲ್ಲಿ ದ್ವನಿ ಎತ್ತಲಿ ಎಂದು ಸೂಚನೆ ನೀಡಿದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಮಾತನಾಡಿದರು.
ಐದು ಗ್ಯಾರಂಟಿಗೆ ಸರಕಾರದ ಹಣ ಹೆಚ್ಚು ವ್ಯಯವಾಗುತ್ತಿದ್ದು ಇತರೆ ಅಭಿವ್ರದ್ದಿಗೆ ಸ್ವಲ್ಪ ತೊಡಕಾಗಿದೆ. ಜನರ ಸಹಕಾರ ಅವಶ್ಯವಿದೆ. ಈ ವೇಳೆ ರೈತಾಪಿ ಜನರಿಗೂ ಬರ ಬಿದ್ದಿದೆ ಶಾಸಕರ ಅನುದಾನಕ್ಕೂ ಬರ ಬಡಿದಂತಾಗಿದೆ. ಕಲಕೇರಿಯ ಹೋಬಳಿ ವಿಚಾರ, ವಿವಿಧ ಕಾಮಗಾರಿ ಸೇರಿದಂತೆ ಗ್ರಾಮದ ರಸ್ತೆಗಳ ಅಭಿವ್ರದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಹಿರಿಯರಾದ ಶಾಂತಗೌಡ ಪಾಟೀಲ, ಮುಖಂಡ ಸಂತೋಷ ಪಾಟೀಲ ಡಂಬಳ, ಶಿಕ್ಷಕರಾದ ಬಿ.ಡಿ.ಗುಮಶೆಟ್ಟಿ ಮಾತನಾಡಿದರು.
ಪಂಚರಂಗ ಸಂಸ್ಥಾನ ಗದ್ದಗಿಮಠದ ಮಡಿವಾಳೇಶ್ವರ ಶಿವಾಚಾರ್ಯರು, ಗ್ರಾಪಂ ಅಧ್ಯಕ್ಷರಾದ ರಾಜಹಮ್ಮದ ಸಿರಸಗಿ, ಮುಖಂಡ ಸಿದ್ದು ಬುಳ್ಳಾ, ಮಡುಸಾವಕಾರ ಬಿರಾದಾರ, ಈರಘಂಟಿ ಗುಮಶೆಟ್ಟಿ, ಮುಕ್ಕಣ್ಣ ಗುಮಶೆಟ್ಟಿ, ಶಾಂತಗೌಡ ಪಾಟೀಲ, ವೀರಪ್ಪ ಝಳಕಿ, ಯಮನೂರಿ ಕುಲಕರ್ಣಿ, ದೊಡ್ಡಪ್ಪ ಗುಮಶೆಟ್ಟಿ, ಬಿ.ಜಿ.ಚನಗೊಂಡ, ಡಾ.ಈರಣ್ಣ ಗುಮಶೆಟ್ಟಿ, ಮಲಕಾಜಪ್ಪಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.

