ದೇವರಹಿಪ್ಪರಗಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ಹಾಗೂ ಯುನಿವರ್ಸಿಟಿ ಬ್ಲೂö್ಯ ತಂಡದ ಆಯ್ಕೆ ಇದೇ ಪ್ರಥಮ ಬಾರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಜರುಗುತ್ತಿದ್ದು, ಯಾವುದೇ ಕುಂದುಕೊರತೆಗಳಿಲ್ಲದೇ ಯಶಸ್ವಿಯಾಗಿ ಜರುಗಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೨೦೨೩-೨೪ನೇ ಸಾಲಿನಲ್ಲಿ ಪಂದ್ಯಾವಳಿ ಆಯೋಜನೆಗೆ ಅನುಮತಿ ದೊರೆತಿದೆ. ಪಂದ್ಯಾವಳಿ ಇದೇ ದಿ:೧೬ ಗುರುವಾರದಂದು ಆರಂಭಗೊಳ್ಳಲಿದೆ. ಇದರ ಆಯೋಜನೆಗೆ ಅಗತ್ಯವಾದ ನೆರವನ್ನು ಸ್ಥಳೀಯ ಆಡಳಿತ, ವಿವಿಧ ಸಂಘ, ಸಂಸ್ಥೆಗಳು ಹಾಗೂ ಗಣ್ಯವ್ಯಕ್ತಿಗಳಿಂದ ಪಡೆದು ಯಶಸ್ವಿಗೊಳಿಸೋಣ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಅಶೋಕಕುಮಾರ ಜಾಧವ ಮಾತನಾಡಿ, ಕ್ರೀಡಾಳುಗಳ ವಸತಿ ಸೌಕರ್ಯ, ಸಾರಿಗೆ, ಕ್ರೀಡಾಂಗಣ ಸೇರಿದಂತೆ ಪಂದ್ಯಾವಳಿಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಅಧೀಕ್ಷಕ ಜಗನ್ನಾಥ ಸಜ್ಜನ ಉಪನ್ಯಾಸಕರುಗಳಾದ ಶಿವಪುತ್ರ ಜಾಲವಾದಿ, ಅಕ್ರಮ ಪಾಷಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಸದಸ್ಯ ರಮೇಶ ಮಸಬಿನಾಳ, ಈರಣ್ಣ ವಸ್ತçದ, ಗಂಗಾಧರ ಬಬಲೇಶ್ವರ, ಮಲ್ಲನಗೌಡ ಪಾಟೀಲ, ಮುನ್ನಾ ಮಳಖೇಡ, ಮಹೇಶ ದೊಡಮನಿ, ಮಲ್ಲು ಜಮಾದಾರ, ಕಾಶೀನಾಥ ತಳಕೇರಿ, ರಮೇಶ ಮ್ಯಾಗೇರಿ, ಪಿ.ಸಿ.ತಳಕೇರಿ, ಪ್ರಕಾಶ ಮಲ್ಲಾರಿ, ರಾಜು ಕಾಖಂಡಕಿ, ಶ್ರೀಕಾಂತ ಕಾಖಂಡಕಿ, ಎಸ್.ಡಿ.ರಜಪೂತ ಹಾಗೂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
ನ.೧೬ರ ರಾಣಿ ಚೆನ್ನಮ್ಮ ವಿವಿ ಮಹಿಳಾ ಕಬಡ್ಡಿ ಪಂದ್ಯಾವಳಿ ಯಶಸ್ಸಿಗೆ ಕರೆ
Related Posts
Add A Comment

