ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಗ್ರಾಮೀಣ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ನೇಮಕ ಹಾಗೂ ಸನ್ಮಾನ ಸಮಾರಂಭವು ಆ.22ರಂದು ನಗರದ ಹೋಟೆಲ್ ಮಧುವನ್ ಫಂಕ್ಷನ್ ಹಾಲ್ನಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಶ್ರೀಮತಿ ಸುಮತಿ ಜೆ, ಕಾರ್ಯಾಧ್ಯಕ್ಷ ನಾಗನಗೌಡ, ಗೌರವಾಧ್ಯಕ್ಷ ಸುರೇಶ ಶೇಡಶ್ಯಾಳ, ಪ್ರಧಾನ ಕಾರ್ಯದರ್ಶಿ ಸಂತೋಷ ಸಲಗರ ಹಾಗೂ ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಸನ್ಮಾನಿಸಿದರು.
ವಿಜಯಪುರ ಗ್ರಾಮೀಣ ಘಟಕದ ನೂತನ ಪದಾಧಿಕಾರಿಗಳಾಗಿ ಆರ್.ಎನ್. ಅಂಗಡಿ ಗೌರವಾಧ್ಯಕ್ಷರು, ಎನ್.ಎಂ. ಮೇಲಿನಕೇರಿ ಅಧ್ಯಕ್ಷರು, ಆನಂದ ಮೂಲಿಮನಿ ಹಾಗೂ ರೇಣುಕಾ ಪೂಜಾರಿ ಉಪಾಧ್ಯಕ್ಷರು, ರವಿ ರಾಠೋಡ ಕೋಶಾಧ್ಯಕ್ಷರು, ವಸೀಮ ಚಟ್ಟರಕಿ ಪ್ರಧಾನ ಕಾರ್ಯದರ್ಶಿ, ನಾರಾಯಣ ತಲಗಡೆ ಹಾಗೂ ಕೆ.ಎಂ. ಹೂಗಾರ ಸಂಘಟನಾ ಕಾರ್ಯದರ್ಶಿಗಳು, ಶರಣಗೌಡ ಬಿರಾದಾರ ಸಹ ಕಾರ್ಯದರ್ಶಿ ಹಾಗೂ ಜಿ.ಎಂ. ಪಾಟೀಲ, ಎಂ.ಬಿ. ನಾರಾಯಣಪೂರ, ವೈ.ಡಿ. ಕೋರಿ, ಶ್ರೀನಿವಾಸ ಬೊಮ್ಮನಹಳ್ಳಿ ಮತ್ತು ಶಂಕುತಲಾ ಹಿರೇಮಠ ನಿರ್ದೇಶಕರಾಗಿ ನೇಮಕಗೊಂಡರು.
ನೂತನ ಪದಾಧಿಕಾರಿಗಳು ಶಿಕ್ಷಕರ ಹಿತಾಸಕ್ತಿ, ಶೈಕ್ಷಣಿಕ ಗುಣಮಟ್ಟ ಹಾಗೂ ಸಂಘಟನೆಯ ಬಲವರ್ಧನೆಗೆ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಮುಖಂಡರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
