ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಂಟಿಯಾಗಿ ವಿಜಯಪುರ ತಾಲೂಕ ಅಂಕಲಗಿ ಗ್ರಾಮದ ದೇವರ ಹಿಪ್ಪರಗಿ ಸರಕಾರಿ ಸಾರ್ವಜನಿಕ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಆನಂದ ಕೆ. ಅವರಿಗೆ ಹಾಗೂ ವಿಜಯಪುರ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷರಾದ ಮಹಾದೇವಪ್ಪ ಎಸ್. ತೇಲಿ ಮಾತನಾಡಿ, ಅಂಕಲಗಿಯಿಂದ ದೇವರ ಹಿಪ್ಪರಗಿ ಸರಕಾರಿ ಸಾರ್ವಜನಿಕ ರಸ್ತೆ, ಈ ರಸ್ತೆಯು ಗ್ರಾಮ ನಕಾಶೆಯಲ್ಲಿ ನೊಂದಣಿ ಇರುತ್ತದೆ. ಈ ರಸ್ತೆ ಮೇಲೆ ಶಾಲೆ ವಾಹನ ಮತ್ತು ಶಾಲೆ ಮಕ್ಕಳು ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದು ಮತ್ತು ರೈತರು ಕೃಷಿ ಚಟುವಟಿಕೆಗಳಿಗೆ ಹೋಗಿ ಬರುತ್ತಿದ್ದು ಪ್ರತಿ ಸೋಮವಾರ ದೇವರ ಹಿಪ್ಪರಗಿ ಜಾನುವಾರು ಸಂತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾದು ಹೋಗುತ್ತಿದ್ದು ಈಗ ಈ ರಸ್ತೆ ಸಂಪೂರ್ಣ ಒತ್ತುವರಿಯಾಗಿರುತ್ತದೆ. ರಸ್ತೆ ಸಂಪೂರ್ಣ ಬಂದಾಗಿರುತ್ತದೆ. ಶಾಲೆ ಮಕ್ಕಳಿಗೆ ರೈತರಿಗೆ, ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದೆ. ಕೂಡಲೇ ರಸ್ತೆಯ ಸಮಸ್ಯೆಯನ್ನು ಖುದ್ದಾಗಿ ಬಂದು ಪರಿಶೀಲಿಸಿ ರಸ್ತೆಯು ಸಂಪೂರ್ಣ ಚಾಲತಿ ಮಾಡಿಕೊಡಬೇಕು. ರಸ್ತೆ ಮರು ನಿರ್ಮಾಣ ಮಾಡಿಕೊಡಬೇಕು. ಗರ್ಭಿಣಿ ಸ್ತ್ರೀಯರಿಗೆ, ಹಿರಿಯರಿಗೆ ಎಲ್ಲ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ಒತ್ತುವರಿ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ವಿಜಯಪುರ ಜಿಲ್ಲಾಧ್ಯಕ್ಷ ರಾಜೇಸಾಬ ನಧಾಪ ಮಾತನಾಡಿ, ಕೃಷಿ ಚಟುವಟಿಕೆಗಳ ಸಾಮಗ್ರಿಗಳನ್ನು ತರಲು, ಒಯ್ಯಲು ಬಹಳಷ್ಟು ತೊಂದರೆಯಿದೆ ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು. ಶೀಘ್ರದಲ್ಲಿ ಪರಿಹರಿಸದಿದ್ದರೆ ಶಾಲೆಯ ಮಕ್ಕಳು, ಊರಿನ ಗ್ರಾಮಸ್ಥರು ರೈತರು ಒಗ್ಗೂಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷರಾದ ಕಲ್ಲಪ್ಪ ಸಿ. ಇಂಡಿ, ಮುತ್ತಪ್ಪ ಇಂಡಿ, ಬಸವರಾಜ ಮೋಪಗಾರ, ಮಹಾದೇವಪ್ಪ ಪೂಜಾರಿ, ಲಕ್ಷö್ಯಪ್ಪ ಇಂಡಿ, ಹಿರಗಪ್ಪ ಉಡಚಣ, ಅಮೋಘೆಪ್ಪ ಪೂಜಾರಿ, ಸಾತಪ್ಪ ಇಂಡಿ, ಚಂದ್ರಯ್ಯ ಹಿರೇಮಠ, ಯಲ್ಲಪ್ಪ ಇಂಡಿ, ಸಂತೋಷ ದಂಡಿನ, ಹುಸೇನಿ ಮುಲ್ಲಾ, ಸಿದ್ದಪ್ಪ ಉಡಚಣ, ದುಸಂಗಿ ಇಂಡಿ, ಪಂಡಿತ ಹೊಸಮನಿ, ರಮೇಶ ಇಂಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

