ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಶನಿವಾರ ಸಂಜೆ ೬ ಗಂಟೆಗೆ ಮತ್ತು ರಾತ್ರಿ ಬೀಸಿದ ಗಾಳಿ ಮಳೆಗೆ ಬಾಳೆಗಿಡ ನಾಶವಾಗಿವೆ.
ಸಾಲೋಟಗಿ ಗ್ರಾಮದ ರೈತ ಧರ್ಮರಾಯ ಚನ್ನಪ್ಪ ನರಳೆ ಇವರಿಗೆ ಸೇರಿದ ೨೦೫೫ ಬಾಳೆ ಗಿಡಗಳು ಮತ್ತು ಸಿದ್ದು ದೇವೆಂದ್ರ ನರಳೆ ಇವರಿಗೆ ಸೇರಿದ ೧೯೫೦ ಬಾಳೆ ಗಿಡಗಳು ಸಂಪೂರ್ಣ ನೆಲಸಮವಾಗಿವೆ.
ಬಾಳೆ ಗಿಡಗಳು ಕೇವಲ ೧೫ ದಿನದಲ್ಲಿ ಮಾರಾಟಕ್ಕೆ ಹೋಗುವ ಸ್ಥಿತಿಯಲ್ಲಿ ಇದ್ದವು.
ಘಟನಾ ಸ್ಥಳಕ್ಕೆ ಜೆಡಿ ಎಸ್ ಧುರೀಣರಾದ ಬಿ.ಡಿ.ಪಾಟೀಲ ಭೇಟಿ ನೀಡಿದ್ದು ಪೃಕೃತಿ ವಿಕೋಪ ಪರಿಹಾರದ ಅಡಿಯಲ್ಲಿ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

