Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಕ್ಕಳ ಪಾಲಕತ್ವ
ವಿಶೇಷ ಲೇಖನ

ಮಕ್ಕಳ ಪಾಲಕತ್ವ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತ ಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಅವಶ್ಯಕತೆಯ ಅರಿವು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದ್ದು, ಇದೀಗ ಪಾಲಕತ್ವದ ಅವಶ್ಯಕತೆಯ ಅರಿವು ಸಾರ್ವತ್ರಿಕವಾಗಿ ಮುನ್ನೆಲೆಗೆ ಬಂದಿದೆ.
ಮಕ್ಕಳ ಕಣ್ಣಿಗೆ ಕಂಡದ್ದನ್ನು, ಕೇಳಿದ್ದನ್ನೆಲ್ಲ ಕೊಡಿಸುವುದು, ಮಕ್ಕಳು ಹೇಳಿದಂತೆಯೇ ನಡೆಯುವುದು, ಮಕ್ಕಳು ಬಯಸಿದ್ದನ್ನೇ ಉಣ ಬಡಿಸುವುದು ಒಳ್ಳೆಯ ಪಾಲಕತ್ವ ಎಂಬ ತಪ್ಪು ಕಲ್ಪನೆ ಬಹುತೇಕ ಜನರಲ್ಲಿ ಇದೆ.
ಪಾಲಕತ್ವ ಅಂದ್ರೆ ನಮ್ಮ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಮಕ್ಕಳ ಹೇಳುವ ಎಲ್ಲ ಮಾತುಗಳಿಗೆ ಶರಣಾಗತರಾಗುವುದು ಅಂತ ಅರ್ಥ ಅಲ್ಲ.
ಪಾಲಕತ್ವ ಪ್ರತಿಯೊಬ್ಬ ತಂದೆ ತಾಯಿಯು ಹೊರಲೇ ಬೇಕಾದ ಒಂದು ಉನ್ನತ ಜವಾಬ್ದಾರಿ. ಮಾನಸಿಕವಾಗಿ ಮಾಗಿದ ಪಾಲಕತ್ವ ಒಳ್ಳೆಯ ನಾಗರಿಕರನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ನೀಡುತ್ತದೆ
ಸುಮಾರು 30- 32ರ ವಯಸ್ಸಿನ ಬಿಸಿ ರಕ್ತದ ಪಾಲಕರಲ್ಲಿ ಮಕ್ಕಳ ಮೇಲೆ ಪ್ರಾಬಲ್ಯ ತುಸು ಹೆಚ್ಚೇ ಇರುತ್ತದೆ. ಅಂತಹ ಪಾಲಕರು ತಮಗೆ ಎಲ್ಲಾ ತಿಳಿದಿದೆ, ತಾವು ಹೇಳಿದಂತೆಯೇ ಮಕ್ಕಳು ಕೇಳಬೇಕು ಎಂಬಂತಹ ಧೋರಣೆಯನ್ನು ಹೊಂದಿದ್ದು, ಮಕ್ಕಳ ಮೇಲೆ ವಿಪರೀತ ಒತ್ತಡ ಹೇರಿ ತಮ್ಮಿಚ್ಛೆಯಂತೆಯೇ ನಡೆಸಿಕೊಳ್ಳುತ್ತಾರೆ. ಆದರೆ ಅವರಿಗೆ ಅರಿವಿಗೆ ಬಾರದ ಇನ್ನೊಂದು ವಿಷಯವಿದೆ.. ಮುಂದಿನ ಹದಿನೈದು ವರ್ಷಗಳಲ್ಲಿ ಅಪ್ಪ ಅಮ್ಮ ಮಧ್ಯ ವಯಸ್ಸನ್ನು ದಾಟಿದರೆ ಮಕ್ಕಳು ಹರೆಯಕ್ಕೆ ಬರುತ್ತಾರೆ. ಇದೀಗ ಪಾಲಕರಿಗೆ ತಾವು ಮಕ್ಕಳ ಮೇಲೆ ಎಸಗಿದ ಕೃತ್ಯಗಳು ತಮಗೆ ಬೂಮರಾಂಗ ಆಗುತ್ತದೆ. ಬೂಮರಾಂಗ್ ಎಂಬ ಇಂಗ್ಲಿಷಿನ ಪದಕ್ಕೆ ಕನ್ನಡದಲ್ಲಿ ತಿರುಗುಬಾಣ ಅಂತ ಹೇಳಬಹುದು.. ಮಕ್ಕಳು ಅಪ್ಪ ಅಮ್ಮನಿಗಿಂತ ಮನೋ ದೈಹಿಕವಾಗಿ ಹೆಚ್ಚು ಪ್ರಬಲರಾಗಿದ್ದು ಮಕ್ಕಳನ್ನು ಒಲಿಸಿಕೊಳ್ಳಲು ಅಪ್ಪ ಅಮ್ಮ ದಮ್ಮಯ್ಯ ಗುಡ್ಡೆ ಹಾಕಬೇಕಾಗುತ್ತದೆ, ಗೋಗರೆಯಬೇಕಾಗುತ್ತದೆ.
ಇದರ ಬದಲಾಗಿ ಪಾಲಕರು ತಮ್ಮ ಸಿಟ್ಟು, ಹಠ, ಅಹಂಕಾರಗಳನ್ನು ಬಿಟ್ಟು ಮಕ್ಕಳನ್ನು ಚಿಕ್ಕಂದಿನಿಂದಲೇ ಪ್ರೀತಿಯಿಂದ, ಸಮತೋಲನದಿಂದ ಬೆಳೆಸಿದರೆ ಅದುವೇ ಪಾಲಕರು ಮತ್ತು ಮಕ್ಕಳ ನಡುವಣ ಸೇತುವೆಯಾಗಿ ಒಳ್ಳೆಯ ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ.


ಈ ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳಿಗೆ ಸಾಮಾಜಿಕವಾಗಿ ಬೆರೆಯುವ ಅವಕಾಶಗಳು ಹೆಚ್ಚಾಗಿದ್ದವು. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಇದೀಗ ವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿಗಳ ಮಹಾಪೂರವೇ ದೊರೆಯುತ್ತಿದ್ದರೂ ಸಾಮಾಜಿಕ ಸಂವಹನ ಸಾಧ್ಯವಾಗುತ್ತಿಲ್ಲ.
ಪಾಲಕತ್ವ ಎನ್ನುವುದು ಕೇವಲ ವಿಜ್ಞಾನವಲ್ಲ, ಅದೊಂದು ಅಭೂತಪೂರ್ವ ಕಲೆ. ಪ್ರಾರಂಭಿಕ ಹಂತದಲ್ಲಿ ಮಕ್ಕಳ ಎರಡು ವಿಷಯಗಳಲ್ಲಿ ನಾವು ಹೆಚ್ಚು ಗಮನ ಹರಿಸಬೇಕು
1 ನಡವಳಿಕೆ 2 ಶಿಕ್ಷಣ
ಪ್ರಸ್ತುತ ದಿನಮಾನಗಳಲ್ಲಿ ಸಮುದಾಯಿಕ ಮತ್ತು ಸಾಮಾಜಿಕ ಒತ್ತಡದಿಂದ ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆಯೇ ಹೊರತು ಮಕ್ಕಳ ನಡುವಳಿಕೆಯ ಕುರಿತು ಗಮನ ಹರಿಸುತ್ತಿಲ್ಲ. ಒಳ್ಳೆಯ ನಡವಳಿಕೆಯನ್ನು ಕಲಿತ ಮಕ್ಕಳು ಒಳ್ಳೆಯ ಶಿಕ್ಷಣವನ್ನು ಕೂಡ ಪಡೆಯಬಲ್ಲರು, ಆದರೆ ಒಳ್ಳೆಯ ಶಿಕ್ಷಣ ಪಡೆದ ಮಕ್ಕಳಲ್ಲಿ ಒಳ್ಳೆಯ ನಡವಳಿಕೆ ಇರುತ್ತದೆ ಎಂಬುದು ಸಂದೇಹಾಸ್ಪದ.
ಮಕ್ಕಳು ಶಿಕ್ಷಣವನ್ನು ಪಾಲಕರಿಂದ, ಶಿಕ್ಷಕರಿಂದ, ಅಂತರ್ಜಾಲದ ನೆರವಿನಿಂದ ಕಲಿಯಬಹುದು ಆದರೆ ನಡವಳಿಕೆಯನ್ನು ಮಕ್ಕಳಿಗೆ ಪಾಲಕರೇ ಕಲಿಸಬೇಕು.
ಪಾಲಕರಲ್ಲಿ ಅತಿಯಾದ ಸಿಟ್ಟು, ಅಸಹನೆ ಒಳ್ಳೆಯದಲ್ಲ. ಮಕ್ಕಳಿಗೆ ಅವರ ತಂದೆಯೇ ಹೀರೋ, ಓರ್ವ ಪರಿಪೂರ್ಣ ವ್ಯಕ್ತಿ ಆಗಬೇಕೆಂದರೆ ತಂದೆ ತಮ್ಮ ಕಚೇರಿಯ ಮನೆಯ ಮತ್ತು ಸಮುದಾಯಿಕ ಕೆಲಸಗಳನ್ನು ಆಯಾ ಸಮಯಕ್ಕೆ ಪೂರೈಸಿ ಅಲ್ಲಿ ತಾನು ಅನುಭವಿಸುವ ಒತ್ತಡಗಳನ್ನು ಅಲ್ಲಿಯೇ ಬಿಟ್ಟು ಬಿಡಬೇಕು. ಮನೆಯಲ್ಲಿ ಯಾವತ್ತೂ ಕಚೇರಿಯ ಕುರಿತ, ಕೆಲಸಗಳ ಕುರಿತ ಒತ್ತಡಗಳ ಪರಿಣಾಮವಾದ ಸಿಟ್ಟು ಮತ್ತು ಅಸಹನೆಗಳನ್ನು ಮನೆಯಲ್ಲಿ ಮಕ್ಕಳ ಮೇಲೆ ಹೇರಬಾರದು. ಮಕ್ಕಳಲ್ಲಿ ಪಾಲಕರ ಕುರಿತು ಪ್ರೀತಿ ಗೌರವ ಇರಬೇಕೇ ಹೊರತು ಭಯ ಅಲ್ಲ.
ಮಕ್ಕಳು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಕಾಣಿಕೆಯಾಗಬೇಕಾದರೆ ಮನೆಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರೆಯಬೇಕು. ಪಾಲಕರಲ್ಲಿ ತಾಳ್ಮೆ ಹೆಚ್ಚಿರಬೇಕು, ಓದುವ ಹವ್ಯಾಸ, ಅಭಿರುಚಿ ಇರಲೇಬೇಕು.
ಪುಸ್ತಕ ಓರ್ವ ಆತ್ಮಸಖ ಇದ್ದಂತೆ. ಒಳ್ಳೆಯ ಪುಸ್ತಕಗಳು ಕಲಿಸಿಕೊಡುವ ಪಾಠಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಪಾಲಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರೂ ಆಗಬಲ್ಲರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!

ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ

ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ

ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ನಗರ ಬಂದ್ ಸಂಪೂರ್ಣ ಯಶಸ್ವಿ!
    In (ರಾಜ್ಯ ) ಜಿಲ್ಲೆ
  • ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷರಾಗಿ ಭೂಸಗೊಂಡ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಪ್ರೇಮಚಂದ್ ಕಾದಂಬರಿಗಳು ಸಾಮಾಜಿಕ ಜೀವನದ ವಾಸ್ತವ ಚಿತ್ರಣ :ಪ್ರೊ.ಪೀರಾ
    In (ರಾಜ್ಯ ) ಜಿಲ್ಲೆ
  • ಕನೇರಿ ಶ್ರೀಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ
    In (ರಾಜ್ಯ ) ಜಿಲ್ಲೆ
  • ತಲ್ಲಣಿಸದಿರು ತಾಳು ಮನವೇ..
    In ಭಾವರಶ್ಮಿ
  • ಮಾನವೀಯತೆ, ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಅಗತ್ಯವಿದೆ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಸರ್ಕಾರದಿಂದ ಶ್ರೀಗಳಿಗೆ ಅಪಮಾನ :ಸಂಸದ ಜಿಗಜಿಣಗಿ
    In (ರಾಜ್ಯ ) ಜಿಲ್ಲೆ
  • ರೋಟರಿ ಸಂಸ್ಥೆಯಿಂದ ಕಣ್ಣು ಉಚಿತ ತಪಾಸಣೆ ಶಿಬಿರ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪು.ಕೆ. ಪಟ್ಟಣಕ್ಕೆ ಸಚಿವ ಶಿವಾನಂದರ ಕೊಡುಗೆ
    In (ರಾಜ್ಯ ) ಜಿಲ್ಲೆ
  • ಚನ್ನಬಸವಣ್ಣನವರು ಯುವಕರ ಹೆಗ್ಗುರುತು :ಡಿ.ಎನ್.ಅಕ್ಕಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.