Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ
ವಿಶೇಷ ಲೇಖನ

ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ಶರಣಮಾಸದ 15 ನೆಯ ದಿವಸದ ಉಪನ್ಯಾಸ ಮಾಲಿಕೆಯಲ್ಲಿ ಶರಣ ಕೆ. ಬಿ. ಮಹದೇವಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಎನ್ನುವ ವಿಷಯದ ಬಗೆಗೆ ಅತ್ಯಂತ ಪ್ರಬುದ್ಧವಾಗಿ ನಮ್ಮೊಡನೆ ಹಂಚಿಕೊಂಡರು.
ಕನ್ನಡ ಸಾಹಿತ್ಯ ಪ್ರಕಾರಗಳಾದ ಚಂಪೂ ಕಾವ್ಯ, ವಚನ ಸಾಹಿತ್ಯ, ಷಟ್ಪದಿಗಳ ಜೊತೆಗೆ ಜೈನ ಯುಗ, ಲಿಂಗಾಯತ ಯುಗ,ಶೈವ ಯುಗ,ಆಧುನಿಕ ಯುಗದಲ್ಲಿ ಕನ್ನಡದಲ್ಲಿ ಆಗಿ ಹೋದ ವಿಶಿಷ್ಟ ಬದಲಾವಣೆ ಗಳ ಬಗೆಗೆ ಬೆಳಕು ಚೆಲ್ಲಿದರು.
ಇದರಲ್ಲಿ ವಚನ ಯುಗ ಮಹತ್ವವಾದದ್ದು, ವಚನ ಸಾಹಿತ್ಯದಲ್ಲಿ ವಚನಕಾರರು ಹೇಗೆ ವಸ್ತು ರಚನೆ ಆಯ್ಕೆ, ಬರವಣಿಗೆಯ ವಿಧಾನ,
ಆಲೋಚನೆ, ಭಾವನೆ, ಚಿಂತನೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಿದರು. ಕನ್ನಡ ಭಾಷೆ ದುಡಿಸಿಕೊಂಡರು, ಅದರ ಔನ್ನತ್ಯ, ತೀವ್ರತೆ, ಭಾಷಾ ಜ್ಞಾನ ವನ್ನು ಹೇಳುತ್ತಾ, ವಚನ ಪರಂಪರೆಯ ಧೋರಣೆಯ ಮಹತ್ವವನ್ನು ಹಂಚಿಕೊಂಡರು.
ಆಗಿನ 346 ವಚನಕಾರರು ಮತ್ತು 42 ವಚನಕಾರ್ತಿಯರು ತಮ್ಮವಚನಗಳ ಮೂಲಕ ಜನರನ್ನು ತಲುಪಿದ್ದು, ಇದು ಜನಸಾಮಾನ್ಯರ ಭಾಷೆ ಕಾಯಕಯೋಗಿಗಳ ಭಾಷೆ,ಎಲ್ಲ ಅಪ ನಂಬಿಕೆಗಳನ್ನು ಹೋಗಲಾಡಿಸಿದ ಭಾಷೆ, ಜನವಾಣಿಯನ್ನೇ ದೇವವಾಣಿ ಯನ್ನಾಗಿ ಪರಿವರ್ತನೆ ಮಾಡಿದ ಭಾಷೆ, ಹೊಸ ಧಾರ್ಮಿಕ ಪಾಲನೆಗೆ ಸಾಮಾಜಿಕ ಕ್ರಾಂತಿಯ ಪ್ರಾರಂಭ, ದೇವರನ್ನು ವೈಯಕ್ತೀಕರಣ ಗೊಳಿಸಿದ್ದು, ದುಡಿಮೆಯನ್ನು ದಾಸೋಹದ ಮೂಲಕ ಸಾರ್ವತ್ರಿಕರಣಗೊಳಿಸಿದ್ದು,ವಚನಗಳ ಆಧ್ಯಾತ್ಮಿಕ ಮತ್ತು ತಾತ್ವಿಕ ವಿಚಾರಗಳು, ಮಹಿಳಾ ಸಮಾನತೆ, ಅರಿವೇ ಗುರು, ದೇಹವೇ ದೇವಾಲಯ, ಸ್ಥಾವ ರಕ್ಕಳಿವುಂಟು, ಜಂಗಮಕ್ಕಳಿ ವಿಲ್ಲ, ಬಯಲು ಬಯಲನೇ ಬಿತ್ತಿ, ಎನ್ನುವ ಹಲವಾರು ಅರ್ಥವತ್ತಾದ ವಚನಗಳ ಸಾಲುಗಳ ಜೊತೆಗೆ ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಹೇಗೆ
ಶರಣರ ಚಿಂತನೆ ಒಡಮೂಡಿದೆ ಎನ್ನುವುದನ್ನು ವಿವರಿಸಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು, ಶರಣರು ವಚನಗಳ ಮೂಲಕ ಜಾಗತಿಕ ದಾಖಲೆಯನ್ನು ಮಾಡಿದ್ದಾರೆ. ಅವರು ದೇವರಿಗೆ ಕನ್ನಡ ಕಲಿಸಿದವರು, ಅಚ್ಚ ಬೇಸಾಯಗಾರರು, ಶರಣರು ವಚನಗಳ ಮೂಲಕ ಸಾರ್ವತ್ರಿಕವಾದ ಮತ್ತು ಸಾರ್ವಕಾಲಿಕವಾದ ಕುರುಹುಗಳನ್ನು 900 ವರ್ಷಗಳ ನಂತರವೂ ಎಂದಿಗೂ ಅಳಿಯದ ರೀತಿಯಲ್ಲಿ ನಮಗೆಲ್ಲರಿಗೂ ಬಿಟ್ಟು ಹೋಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದರು.
ದತ್ತಿ ದಾಸೋಹಿ ಗಳಾದ ಶರಣ ಶಿವಾನಂದ ಕಲಕೇರಿ ಅವರು ಉಪನ್ಯಾಸಕರು ಮಾತನಾಡಿದ ಎಲ್ಲ ಸಾರಾಂಶಗಳನ್ನು ಒಟ್ಟುಗೂಡಿಸಿ ಪ್ರಶಂಸೆ ಮಾಡಿದರು.
ಸೋನಾಲಿ ನೀಲಕಂಠ ಅವರ ವಚನ ಪ್ರಾರ್ಥನೆ, ಶಾಂತಾ ಧುಲಂಗೆ ಅವರ ಸ್ವಾಗತ, ಅಕ್ಕಮಹಾದೇವಿ ತೆಗ್ಗಿ ಅವರ ಶರಣು ಸಮರ್ಪಣೆ, ಸರಸ್ವತಿ ಬಿರಾದಾರ ಅವರ ವಚನ ಮಂಗಳ ಮತ್ತು ಬಸಮ್ಮ ಗಂಗನಳ್ಳಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು.

ವಿಶೇಷ ಉಪನ್ಯಾಸ – 313

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ಲಿಂ.ಗಿರಿಜಾದೇವಿ ಕಲಕೇರಿ ಅವರ ಸ್ಮರಣಾರ್ಥ ವಿಶೇಷ ಉಪನ್ಯಾಸ – 313

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ

ಬಾಲಕಿ ನೇಣಿಗೆ ಶರಣು

ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ

ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮತ್ಸ್ಯ ಸಂಜೀವಿನಿ ಸಹಕಾರಿ :ವಡ್ಡರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಅಂತಿಮ ಪಟ್ಟಿ ಪ್ರಕಟ
    In (ರಾಜ್ಯ ) ಜಿಲ್ಲೆ
  • ಜಂಟಿ ಕೃಷಿ ನಿರ್ದೇಶಕರ ಕಚೇರಿ ಸ್ಥಳಾಂತರ
    In (ರಾಜ್ಯ ) ಜಿಲ್ಲೆ
  • ಟಿಲಿಸ್ಕೋಪ‌ ತಯಾರಿಕೆ: ಹೊನವಾಡ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಲಾಂಛನಗಳ ಪಾರುಪತ್ಯದಲ್ಲಿ ಬಳಲುವುದು ಬೇಡ
    In ಚಿಂತನ
  • ಈ ಚೆಂದದ ಹೃದಯದಲಿ ನಿನ್ನದೇನೆ ಚಟುವಟಿಕೆ
    In ವಿಶೇಷ ಲೇಖನ
  • ಎಡಿಸಿ ಭರವಸೆ: ಆಹೋರಾತ್ರಿ ಧರಣಿ ಸತ್ಯಾಗ್ರಹ ಹಿಂಪಡೆದ ಬಿಜೆಪಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.