ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ತಹಶಿಲ್ದಾರರ ಕಚೇರಿ ಯಲ್ಲಿ 12 ನೇ ಶತಮಾನದ ಪ್ರಮುಖ ವಚನಕಾರರು ಹಾಗೂ ಸಮಾಜ ಸುಧಾಕರರು ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಪ್ರಮುಖ ಅತಿಥಿಗಳಾಗಿ ಮಾತನಾಡಿದ ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ, 12 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು , ಮೌಢ್ಯತೆಯನ್ನು ಜನರಿಂದ ದೂರ ಮಾಡುವ ಕೆಲಸ ಹಡಪದ ಅಪ್ಪಣನವರು ಮಾಡಿದರು.ಸಮಾಜವನ್ನು ಕೀಳರಿಮೆಯಿಂದ ನೋಡುವ ಆ ಕಾಲದಲ್ಲಿ ಅದೇ ಸಮಾಜದ ಶ್ರೇಷ್ಠ ವಚನಕಾರರಾದ ಅಪ್ಪಣ್ಣನವರನ್ನು ಬಸವಣ್ಣನವರ ಅನುಭವ ಮಂಟಪದಲ್ಲಿ ಅವರ ಆಪ್ತ ಕಾರ್ಯದರ್ಶಿಗಳಾಗಿ ನೇಮಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ಇಂದು ಸಮಾಜದ ಮುಖಂಡರು ಸಹ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ವಿಜ್ರಂಭಣೆಯಿಂದ ಆಚರಿಸಿ ಸಮಾಜದ ಸಾಧಕರನ್ನು ಗುರುತಿಸಿ ಗೌರವವಿಸುವ ಕೆಲಸ ಮಾಡಬೇಕು ಎಂದು ಹೇಳಿದರು .
ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ನಿರೂಪಿಸಿದರು .
ಈ ವೇಳೆ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಶಂಕರ ಹಡಪದ, ಪಟ್ಟಣ ಪಂಚಾಯತ ಸದಸ್ಯರಾದ ಚಂದ್ರಶೇಖರ ಹಳೇಮನಿ, ಮಲ್ಲಿಕಾರ್ಜುನ ಅಚಲೇರಿ, ಗುರು ಹಡಪದ, ಉಪತಹಶಿಲ್ದಾರ ಪುಲಕೇಶಿ ಮೂಕಿಹಾಳ, ಗ್ರಾಮಲೆಕ್ಕಾಧಿಕಾರಿಗಳು ವ್ಹಿ.ಎಮ್.ಬಿಸ್ಸೆ, ಸಮಾಜದ ಪ್ರಮುಖರಾದ ಶಾಂತಪ್ಪ ಹಡಪದ, ಸಿದ್ರಾಮ ಹಡಪದ, ರಮೇಶ ಹಡಪದ, ಗಾಲೀಬ ಹಡಪದ, ಶರಣಬಸು ಹಡಪದ , ಸಿದ್ದು ಹಡಪದ, ರಮೇಶ ಹಡಪದ, ಸತೀಶ ಹಡಪದ, ಶಿವಾನಂದ ಹಡಪದ,ಶ್ರೀಶೈಲ ಕುಂಬಾರ ಮುಂತಾದವರು ಇದ್ದರು

