Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೈತರ ಸಮಸ್ಯೆ, ಹಸಿವಿನ ಸಮಸ್ಯೆಯನ್ನು ಬಿಂಬಿಸುವ ಮನೋಜ್ಞ ಚಿತ್ರ “ರಂಜಾನ್” :ಉಪಾಸೆ
(ರಾಜ್ಯ ) ಜಿಲ್ಲೆ

ರೈತರ ಸಮಸ್ಯೆ, ಹಸಿವಿನ ಸಮಸ್ಯೆಯನ್ನು ಬಿಂಬಿಸುವ ಮನೋಜ್ಞ ಚಿತ್ರ “ರಂಜಾನ್” :ಉಪಾಸೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಎಲ್ಲ ಧರ್ಮದವರಲ್ಲಿ ಸಾಮರಸ್ಯ ಬೆಸೆಯುವ, ಮನಸ್ಸುಗಳನ್ನು ಹೆಣೆಯುವ ಬೆಸುಗೆಯ ಕಥೆ

ವಿಜಯಪುರ: ಧರ್ಮದಂಗಲ್ ಕಾಣುತ್ತಿರುವ ಈ ದಿನಗಳಲ್ಲಿ ಕೋಮು ಸಾಮರಸ್ಯವನ್ನು ಬೆಸೆಯುವ, ರೈತರ ಸಮಸ್ಯೆ ಮತ್ತು ಹಸಿವಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಮನೋಜ್ಞ ಚಿತ್ರವಾಗಿ “ರಂಜಾನ್” ಸಿನಿಮಾ ಮೂಡಿಬಂದಿದ್ದು, ಏ.21ರಂದು ರಾಜ್ಯದಾದ್ಯಂತ ತೆರೆಕಾಣಲಿದೆ ಎಂದು ರಂಜಾನ್ ಚಿತ್ರದ ನಾಯಕ, (ಸಿಲ್ಲಿಲಲ್ಲಿ ಧಾರವಾಹಿಯ ಗೋವಿಂದ ಖ್ಯಾತಿಯ ನಟ) ಹಾಗೂ ಕೆಎಎಸ್ ಅಧಿಕಾರಿ ಸಂಗಮೇಶ ಉಪಾಸೆ ಹೇಳಿದರು.
ನಗರದ ಮಧುವನ ಹೊಟೇಲ್ ಸಭಾಂಗಣದಲ್ಲಿ ಶನಿವಾರ “ರಂಜಾನ್” ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ರಂಜಾನ್” ಸಿನಿಮಾ ಹಿರಿಯ ಸಾಹಿತಿ ಫಕೀರ ಮಹ್ಮದ ಕಟ್ಟಾಡಿ ಅವರ “ನೊಂಬು” ಕಥೆ ಆಧಾರಿತ ಚಿತ್ರ. ನೊಂಬು ಎಂದರೆ ಹಸಿವು, ಉಪವಾಸ ಎಂದರ್ಥ, ಹಸಿವಿಗೆ ಯಾವುದೇ ಜಾತಿ ಇಲ್ಲ. ಇದು ಎಲ್ಲ ಜಾತಿ, ಧರ್ಮದವರನ್ನೂ ಕಾಡುತ್ತದೆ. ಈ ಚಿತ್ರ ಮುಖ್ಯವಾಗಿ ಮನುಷ್ಯತ್ವದ ಹಸಿವನ್ನು ತೆರೆದಿಡುತ್ತದೆ. ಹಸಿವಿಗೆ ಮೂಲ ಕಾರಣ ರೈತರ ಸ್ಥಿತಿ-ಗತಿ. ರೈತರು ಸುಭೀಕ್ಷರಾಗಿದ್ದರೆ ಬಡತನ, ಹಸಿವು ಇರೋಲ್ಲ. ಈ ನಾಡಿನ ರೈತರ ಸಮಸ್ಯೆಗಳೆಲ್ಲ ಅಂತ್ಯ ಕಂಡರೆ ಎಲ್ಲ ಹಸಿವು ನೀಗುತ್ತದೆ ಎಂಬುದೇ ಈ ಸಿನಿಮಾದ ಮುಖ್ಯ ತಿರುಳಾಗಿದೆ ಎಂದರು.
ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ಕಳಕಳಿ ಅಗತ್ಯವೆಂದು ಈ ‘ನೊಂಬು’ ಕಥೆಯನ್ನು ಆಯ್ಕೆ ಮಾಡಿದೆ. ‘ರಂಜಾನ್’ ಸಿನಿಮಾದಲ್ಲಿ ಎಲ್ಲ ಧರ್ಮದ ಜನರಲ್ಲಿ ಸಾಮರಸ್ಯ ಬೆಸೆಯುವ ಹಾಗೂ ಮನಸ್ಸುಗಳನ್ನು ಹೆಣೆಯುವ ಬೆಸುಗೆಯ ಕಥೆ ಇದೆ. ಭಾವೈಕ್ಯತೆಯ ಸಂದೇಶವನ್ನು ಸಾರುವ, ಎಲ್ಲ ಜಾತಿ-ಧರ್ಮ, ಪಕ್ಷ-ಪಂಗಡವನ್ನೂ ಮೀರಿಸುವ ಸಿನಿಮಾ ಆಗಿ ‘ರಂಜಾನ್’ ಮೂಡಿಬಂದಿದೆ. ಎಂದರು.
ಸಿನಿಮಾದ ಕಥೆಗೆ ತಕ್ಕಂತೆ ದಕ್ಷಿಣ ಕನ್ನಡದ ಹಲವೆಡೆ ಮಸೀದಿ, ದರ್ಗಾ, ಕಬರಸ್ತಾನ ಮತ್ತು ಮದರಸಾಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಆ ಭಾಗದ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಮಸೀದಿ, ದರ್ಗಾದಲ್ಲಿ ಚಿತ್ರೀಕರಣ ಮಾಡಲು ಮೌಲ್ವಿಗಳು ಅವಕಾಶ ಮಾಡಿಕೊಟ್ಟರಲ್ಲದೇ ನೈಜ ಮೌಲ್ವಿಗಳೇ ಚಿತ್ರದಲ್ಲಿ, ನಟಿಸಿರುವುದು ವಿಶೇಷವಾಗಿದೆ. ಇತ್ತ ಕಮರ್ಷಿಯಲ್, ಅತ್ತ ಕಲಾತ್ಮಕವಲ್ಲದ ‘ರಂಜಾನ್’ ಚಿತ್ರ ಕುಟುಂಬ ಪರಿವಾರದೊಂದಿಗೆ ನೋಡುವಂತಹ ಸದಭಿರುಚಿಯ ಸಂಗೀತಮಯ ಚಿತ್ರವಾಗಿ ಮೂಡಿ ಬಂದಿದ್ದು ಕನ್ನಡಿಗರು ಈ ಚಿತ್ರವನ್ನು ನೋಡಿ ಬೆಂಬಲಿಸುತ್ತಾರೆAಬ ಆತ್ಮ ವಿಶ್ವಾಸ ತಮಗಿದೆ ಎಂದು ನಾಯಕ ನಟ ಸಂಗಮೇಶ ಉಪಾಸೆ ವಿಶ್ವಾಸ ವ್ಯಕ್ತಪಡಿಸಿದರು.

‘ಸಿಲ್ಲಿ-ಲಲ್ಲಿ” ಧಾರಾವಾಹಿಯಲ್ಲಿ ನನ್ನ ಕಂಪೌ0ಡರ ಗೋವಿಂದ ನ ಪಾತ್ರ ನಾಡಿನ 6ಕೋಟಿ ಜನರ ಗಮನ ಸೆಳೆದಿತ್ತು. ಆದರೆ ‘ರಂಜಾನ್’ ಚಿತ್ರದಲ್ಲಿ ಹಾಸ್ಯ ಬಿಟ್ಟು ಗಂಭೀರವಾದ ಪಾತ್ರಕ್ಕೆ ಹೊರಳಿದ್ದೇನೆ. ತುಂಬ ಜವಾಬ್ದಾರಿಯುತ ಪಾತ್ರ ಇದಾಗಿದ್ದು ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ ತೃಪ್ತಿ ನನಗಿದೆ.
‘ರಂಜಾನ್’ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ ರಂಜಾನ ಆಗಿ ನಾನು ನಟಿಸಿದ್ದು, ನನ್ನ ಅಮಾಯಕ ಮಡದಿಯ ಪಾತ್ರಕ್ಕಾಗಿ ಹುಡುಕಾಟ ನಡೆಸಿದಾಗ ನನ್ನ ಧರ್ಮಪತ್ನಿ, ಪ್ರೇಮಾವತಿಯೇ ಅದಕ್ಕೆ ಸೂಕ್ತ ಎನಿಸಿ ಆ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ಇನ್ನು ಚಿತ್ರದಲ್ಲಿ ನನ್ನ ಮಗಳ ಪಾತ್ರದಲ್ಲಿ ನನ್ನ ಪುತ್ರಿ ಇಶಾನ್ಯ ಸಹ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.


ಧರ್ಮಾತೀತವಾಗಿ ಮತ್ತು ಕಾಲಾತೀತವಾಗಿ ಮೂಡಿ ಬಂದ ‘ರಂಜಾನ್’ ಚಿತ್ರದ ಸಾಹಿತ್ಯ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಾನೇ ಬರೆದಿದ್ದು, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಪಂಚಾಕ್ಷರಿ ಸಿ.ಇ. ನಿರ್ದೇಶಿಸಿದ್ದಾರೆ. ಕೆ.ಎಂ. ಇಂದ್ರ ಅವರು ಸಂಗೀತ ನೀಡಿದ್ದು, ಸ್ಥಳಿಯ ಮಡಿವಾಳಪ್ಪ ಗೋಗಿ ನಿರ್ಮಾಪಕರಾಗಿದ್ದಾರೆ.
-ಸಂಗಮೇಶ ಉಪಾಸೆ, ಚಿತ್ರನಟ, ಬರಹಗಾರ

‘ರಂಜಾನ್’ ಎಂದರೆ ಕೇವಲ ಊಟ, ಉಪವಾಸ ಬಿಡುವುದಲ್ಲ, ಇಂದ್ರೀಯಗಳನ್ನು ನಿಗ್ರಹಿಸಿಕೊಳ್ಳುವುದು. ನಮ್ಮೆಲ್ಲರ ಮಾಲೀಕ ಒಬ್ಬನೇ ಇದ್ದು ಹಿಂದು-ಮುಸ್ಲಿರು ಸಹೋದರರಂತೆ ಬಾಳಿದರೆ ಈ ದೇಶದಲ್ಲಿ ಶಾಂತಿ ನೆಮ್ಮದಿ ಸಾಧ್ಯ. ‘ರಂಜಾನ್’ ಸಿನಿಮಾ ಇದು ಎಲ್ಲರಿಗೋಸ್ಕರ ಇರುವ ಚಿತ್ರ. ಮನುಷ್ಯತ್ವ ಬಹಿರಂಗಗೊಳಿಸಲು, ವಿಶ್ವ ಬಂಧುತ್ವ ಸಾರಲು, ಭಾವೈಕ್ಯತೆ ಮೂಡಲು ಸಹಕಾರಿಯಾಗಬಲ್ಲ “ರಂಜಾನ್” ನಂತಹ ಅರ್ಥಪೂರ್ಣ ಸಿನಿಮಾ ಬರಲು ಕಾರಣರಾದ ಕೆಎಎಸ್ ಅಧಿಕಾರಿ ಸಂಗಮೇಶ ಉಪಾಸೆ ಅಭಿನಂದನಾರ್ಹರು. ‘ರಂಜಾನ’ ಇದೊಂದು ಜೀವನ ಪರಿಶುದ್ಧಗೊಳಿಸುವ ಚಲನಚಿತ್ರವೆಂದರೆ ತಪ್ಪಾಗಲಿಕ್ಕಿಲ್ಲ.

-ಡಾ. ಸೈಯ್ಯದ ಎಫ್.ಎಚ್.ಇನಾಮದಾರ ಗುರೂಜಿ( ಬಾಬಾ), ಪೀಠಾಧಿಪತಿ, ಹಜರತ ಸೈಯ್ಯದ ಶಾಹ ಹುಸೇನಪೀರ ಖಾದ್ರಿ-ಚಿಪ್ತಿ (ರ.ಅ)


ಎಲ್ಲ ಧರ್ಮಗಳ ಸಾರವೂ ಒಂದೇ. ಮಾನವೀಯತೆ ಸಾರುವ, ಸಾಮಾಜಿಕ ಕಳಕಳಿಯ ಚಿತ್ರ ‘ರಂಜಾನ’ ಆಗಿದ್ದು ಇಂತಹ ಚಿತ್ರವನ್ನು ಕನ್ನಡಿಗರು ನೋಡಿ ಪ್ರೋತ್ಸಾಹಿಸಬೇಕಿದೆ. ಚಿತ್ರದ ಎಲ್ಲ ಹಾಡುಗಳು ಅರ್ಥಗರ್ಭಿತವಾಗಿದ್ದು ಈ ಚಿತ್ರ ಅಭೂತಪೂರ್ವ ಯಶಸ್ಸು ಕಂಡು, ಈ ಚಿತ್ರತಂಡದಿAದ ಇನ್ನೂ ಇಂತಹ ಸಾಮಾಜಿಕ ಸಂದೇಶ ನೀಡುವ ಉತ್ತಮ ಚಿತ್ರಗಳ ನಿರ್ಮಾಣಕ್ಕೆ ಉತ್ತೇಜನ ಸಿಗಲಿ.

-ಚಂದ್ರಯ್ಯ ಮಹಾಸ್ವಾಮಿಗಳು
ಮೂಲ ಮಹಾಸಂಸ್ಥಾನ ಮಠ, ಬಬಲಾದಿ-ಝಂಜರವಾಡ

public ramjan film sangamesh upase udaya rashmi
Share. Facebook Twitter Pinterest Email Telegram WhatsApp
  • Website

Related Posts

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ
    In (ರಾಜ್ಯ ) ಜಿಲ್ಲೆ
  • ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ
    In ವಿಶೇಷ ಲೇಖನ
  • ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಕ್ರೀಡೆಯಲ್ಲಿ ಮಕ್ಕಳ ಆರೋಗ್ಯ ಅಡಗಿದೆ :ಎಸ್.ಕೆ.ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ: ಡಿ.೧ ರಂದು ಬೃಹತ್ ಹೋರಾಟಕ್ಕೆ ಕರೆ
    In (ರಾಜ್ಯ ) ಜಿಲ್ಲೆ
  • ಹಿರಿಯರನ್ನು ಗೌರವಿಸುವುದು ಯುವಪೀಳಿಗೆ ಜವಾಬ್ದಾರಿ :ಪ್ರೊ.ಹಿರೇಮಠ
    In (ರಾಜ್ಯ ) ಜಿಲ್ಲೆ
  • ಡಾ.ಸರೋಜನಿ ಮಹಿಷಿ ವರದಿ ಜಾರಿಗೆ ಕದಂಬ ಸೈನ್ಯ ಆಗ್ರಹ
    In (ರಾಜ್ಯ ) ಜಿಲ್ಲೆ
  • ವಿದೇಶಕ್ಕೆ ಹೊರಟ ಗ್ರಾಮೀಣ ಪ್ರತಿಭೆ ಪ್ರೀತಿ ಆನೆಗುಂದಿ
    In (ರಾಜ್ಯ ) ಜಿಲ್ಲೆ
  • ನಬಿರೋಶನ್ ಪ್ರಕಾಶನದಿಂದ ಮಹಾಂತೇಶ ಅವರಿಗೆ ನುಡಿ ನಮನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.