ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯ ಚಡಚಣ ಗ್ರಂಥಾಲಯ ವಿಭಾಗದ ವತಿಯಿಂದ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎರಡು ಸಾವಿರದ ಮೂವತ್ತರ ಹೊತ್ತಿಗೆ ಗ್ರಂಥಾಲಯದ ಸ್ಥಿತಿ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು
ಬೀದರ್ ವಿಶ್ವವಿದ್ಯಾಲಯ ಕುಲಪತಿ
ಬಿ ಎಸ್ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಕಾಲೇಜಿನ ಫಲಿತಾಂಶ ನಿರ್ಧಾರವಾಗುವುದು ಆ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಪ್ರಾಧ್ಯಾಪಕ ಮಿತ್ರರನ್ನು ಅವಲಂಬಿಸಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಹೇಗೆ ಹೆಮ್ಮರವಾಗಿ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿದೆ ಹಾಗೆ ಶಿಕ್ಷಣ ವ್ಯವಸ್ಥೆಯ ಊದುಗಾರಿಕೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಅಂದಾಗ ಮಾತ್ರ ಓದುಗರಿಗೆ ಪ್ರಚಲಿತ ವಿದ್ಯಮಾನಕ್ಕೆ ತಕ್ಕ ಮಾಹಿತಿ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿಜಿ ತಡಸದ ಮಾತನಾಡಿ, ಇಂದಿನ ದಿನಮಾನದಲ್ಲಿ ವಿಜ್ಞಾನ ತಂತ್ರಜ್ಞಾನ ಯಥೇಚ್ಛವಾಗಿ ಬೆಳೆಯುತ್ತಿದ್ದು ಹಾಗಾಗಿ ಗ್ರಂಥಾಲಯದಲ್ಲಿ ಕೇವಲ ಮುದ್ರತ ಪುಸ್ತಕಕ್ಕಿಂತ ಇಂದಿನ ದಿನಮಾನಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಜೊತೆಗೆ ಓದುಗರಲ್ಲಿ ತಾಂತ್ರಿಕ ಮನೋಭಾವ ವೃದ್ಧಿಯಾಗಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಬಿಟಿ ಸಂಪತ್ ಕುಮಾರ್ ಉಪನ್ಯಾಸಕರು ಮತ್ತು ಅಧ್ಯಕ್ಷರು ಡಿ ಎಲ್ ಐ ಎಸ್ ಕೆ ಎಸ್ ಡಬ್ಲ್ಯೂ ವಿಶ್ವವಿದ್ಯಾಲಯ ತುಮಕೂರು ಮಾತನಾಡಿ, ಪ್ರಾಚೀನ ಕಾಲದಲ್ಲಿ ಸಾಮಾನ್ಯ ವ್ಯವಸ್ಥೆ ಇಂದಿನ ದಿನಮಾನದ ತಾಂತ್ರಿಕ ವ್ಯವಸ್ಥೆ ಜೊತೆಗೆ 2030 ತಂತ್ರಜ್ಞಾನದಲ್ಲಿ ಹೇಗೆ ಬದಲಾವಣೆಯಾಗುತ್ತದೆ ಎಂಬುದರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹಿರಿಯ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಮಾನವನಿಗೆ ಹೃದಯ ಹೇಗೆಯೋ ಹಾಗೆ ಮಹಾವಿದ್ಯಾಲಯಕ್ಕೆ ಗ್ರಂಥಾಲಯ ಎಂಬುದು ಹೃದಯ ವಿದ್ದಂತೆ ಆದ್ದರಿಂದ ಇಂದಿನ ದಿನದಲ್ಲಿ ಸ್ಮಾರ್ಟ್ ಲೈಬ್ರರಿ ವಿದ್ಯಾರ್ಥಿಗಳು ಬೇಡಿಕೆ ಇಟ್ಟಾಗ ಮಾತ್ರ ಅದು ಈಡೇರಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಆಯೋಜಕ ಪ್ರೊ ಎಂ ಕೆ ಬಿರಾದಾರ ಮಾತನಾಡಿ, ನಮ್ಮ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕ ಇವೆ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಹಿಂದಿನ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಂಡು ಅಧ್ಯಯನ ಮಾಡಬೇಕು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಮುತ್ತಿನ ರವರು ಬರುವ ದಿನಗಳಲ್ಲಿ ನಮ್ಮ ಮಹಾವಿದ್ಯಾಲಯದ ಗ್ರಂಥಾಲಯವನ್ನು ಸ್ಮಾರ್ಟ್ ಲೈಬ್ರರಿಯಾಗಿ ಬದಲಾವಣೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಎಸ್.ಬಿ.ರಾಠೋಡ ಅತಿಥಿಗಳನ್ನು ಸ್ವಾಗತಿಸುತ್ತಾ ಗ್ರಂಥಾಲಯವು ಮಹಾವಿದ್ಯಾಲಯಕ್ಕೆ ಕಳಸ ಇದ್ದ ಹಾಗೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಗೌರವ ಕಾರ್ಯದರ್ಶಿ ವಿ ಎಸ್ ಗಿಡವೀರ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ ಎಸ್ ಎಸ್ ಚೋರಗಿ ಐ.ಕ್ಯೂ.ಎ.ಸಿ. ಸಂಯೋಜಕರಾದ
ಡಾ. ಎಸ್ ಎಸ್ ದೇಸಾಯಿ ಮಹಾವಿದ್ಯಾಲಯದ ಉಪನ್ಯಾ ಸಕರು ಉಪಸ್ಥಿತರಿದ್ದರು. ಪ್ರೊ.ಬಸವರಾಜ ಯಳ್ಳೂರ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

