ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯ ೧೦ ನೇ ಅಡ್ಡ ರಸ್ತೆಯ ಉದ್ಯಾನವನದ ಬಳಿ ಇರುವ ನೂತನ ವರಮಾರುತೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಲಕ್ಷ್ಮೀ ಭಾವಿಯಲ್ಲಿ ವರಮಾರುತೇಶ್ವರರ ಮೂರ್ತಿಗೆ ಗಂಗಾ ಸ್ನಾನ ನೆರವೇರಿಸಿ, ವಿಶೇಶ ಪೂಜೆ ಸಲ್ಲಿಸಿ ಅಲ್ಲಿಂದ ಸರಾಫ್ ಬಜಾರ, ದ್ಯಾಮವ್ವ ದೇವಿ ದೇವಸ್ಥಾನ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ದೇವಸ್ಥಾನದವರೆಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯ ಉದ್ದಕ್ಕೂ ಕುಂಭ ಹೊತ್ತು ಮಹಿಳೆಯರು ಸಾಗಿದರೆ ಡಿಜೆ ಹಾಡಿಗೆ ಯುವಕರು ಸೇರಿದಂತೆ ಪುರುಷರು ಕುಣಿದು ಕುಪ್ಪಳಿಸುತ್ತ ಸಾಗಿದರು. ಮೆರವಣಿಗೆ ದೇವಸ್ಥಾನಕ್ಕೆ ತಲುಪಿದ ಬಳಿಕ ೨೫೦ ಮುತೈದೆಯರಿಗೆ ಭಾರತಿ ಮಲ್ಲಿಕಾರ್ಜುನ ತೆಗ್ಗಿನಮಠ ಕುಟುಂಬದವರು ಉಡಿ ತುಂಬಿದರು. ನಂತರ ಮೂರ್ತಿಯನ್ನು ಜಲಾಧೀವಾಸ, ಧಾನ್ಯಾಧೀವಾಸ, ಪುಷ್ಪಾಧೀವಾಸ, ಶಯನಾಧೀವಾಸದಲ್ಲಿರಿಸಿಲಾಯಿತು.
ಶನಿವಾರ ಬೆಳಿಗ್ಗೆ ಭ್ರಾಹ್ಮೀ ಮಹೂರ್ತದಲ್ಲಿ ಗಣಹೋಮ, ರುದ್ರಹೋಮ, ವಾಸ್ತುಹೋಮ, ರುದ್ರಾಭಿಷೇಕದ ಜೊತೆಗೆ ವಿಶೇಶ ಪೂಜಾ ಕೈಂಕರ್ಯವನ್ನು ಲೊಟಗೇರಿಯ ಗುರುಮೂರ್ತಿ ದೇವರು, ವಿವೇಕಾನಂದ ಶಾಸ್ತಿç ಮತ್ತು ನಾಗಭೂಷಣ ಶಾಸ್ತಿç ಇವರು ನೆರವೇರಿಸಿದರು. ಬಳಿಕ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಂತರ
ಮಧ್ಯಾಹ್ನ ಧರ್ಮ ಸಭೆಯ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಉದ್ಘಾಟಿಸಿ ಮಾತನಾಡಿ, ಕೆಲವರು ಮಂದಿರಗಳನ್ನು ನಿರ್ಮಿಸುವದಾಗಿ ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಈ ಬಡವಾವಣೆಯ ನಿವಾಸಿಗಳು ಅತೀ ಶೀರ್ಘದಲ್ಲಿ ಈ ದೇವಸ್ಥಾನವನ್ನು ಕಟ್ಟಿ ಉದ್ಘಾಟಿಸಿದ್ದಾರೆ. ಬಡಾವಣೆಯ ಎಲ್ಲ ಜನತೆಗೆ ಶ್ರೀರಾಮನ ಭಂಟ ವರಮಾರುತೇಶ್ವರರ ದರ್ಶನದ ಭಾಗ್ಯ ಕಲ್ಪಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿದೆ ಎಂದರು.
ಬಿಲ್ಕೆರೂರಿನ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಇಟಗಿಯ ಭೂ ಕೈಲಾಸ ಮೇಲುಗದ್ದುಗೆ ಹಿರೇಮಠದ ಡಾ.ಗುರು ಶಾಂತವೀರ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ಶರಣ ಸೋಮನಾಳದ ಮಹಾದೇವ ಶಾಸ್ತ್ರಿಗಳ ಉಪಸ್ಥಿತಿಯಲ್ಲಿ ವಿಶ್ವನಾಥ ನಾಗಠಾಣ ಅಧ್ಯಕ್ಷತೆ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಕೃಷಿ ಅಧಿಕಾರಿ ಅರವಿಂದ ಹೂಗಾರ, ಬಡಾವಣೆಯ ನಿವಾಸಿ ನ್ಯಾಯವಾದಿಗಳಾದ ಎಲ್.ಎಸ್.ಮೇಟಿ, ಎಂ.ಆರ್.ಪಾಟೀಲ, ಎಚ್.ಅರ್.ಪಾಟೀಲ, ಬಿ.ವಾಯ್.ಮೇಟಿ, ಎಸ್.ಜಿ.ಲೊಟಗೇರಿ, ವಿ.ಎಸ್.ಸಾಲಿಮಠ, ನಿವಾಸಿಗಳಾದ ಎಂ.ಎಸ್.ತೆಗ್ಗಿನಮಠ, ಪಿ.ಆರ್.ಕೂಡಗಿ, ಜಿ.ಎಚ್.ಗೌರೋಜಿ, ಸಿ.ಎಸ್.ಗುಬಚಿ, ವಿನಯ ಹಿರೇಮಠ, ಎಸ್.ಬಿ.ಪಾಟೀಲ, ಎಂ.ಜಿ.ಮಡಿವಾಳರ, ಸುನೀಲ ನಾಗಮೋತಿ, ಮಹಾಂತೇಶ ಸಜ್ಜನ, ಬಸವರಾಜ ಅಂಗಡಿ, ಬಿ.ಎಚ್.ನಾಗರಬೆಟ್ಟ, ಜಿ.ಸಿ.ಮಲಗೌಡರ, ಎಸ್.ಎಸ್.ಸುಳಕೋಡ, ರಾಮಚಂದ್ರ ಜಾಧವ, ಡಾ.ಸಂಗಮ ಶೆಟ್ಟರ, ಜಿ.ಎಂ.ಹುಲಗಣ್ಣಿ, ಕಸಾಪ ನಿಕಟಪೂರ್ವ ಅರ್ಧಯಕ್ಷ ಎಂ.ಬಿ.ನಾವದಗಿ, ರಾಜು ಬಳ್ಳೊಳ್ಳಿ, ಪು.ಸದಸ್ಯೆ ಸಂಗಮ್ಮ ದೇವರಳ್ಳಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ವರಮಾರುತೇಶ್ವರ ದೇಗುಲ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ
Related Posts
Add A Comment

