ತಿಕೋಟಾ: ಕರ್ನಾಟಕ ಹೈಕೊರ್ಟಿನ ರೀಟ್ ಆದೇಶದನ್ವಯ ಅನುದಾನಿತ ಪ್ರೌಢ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ ಪರಿಶೀಲನೆ ಮಾಡಲು ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಉಪಪ್ರಧಾನ ಕಾನೂನು ಅಭಿರಕ್ಷಕ ರೂಪಚಂದ ಧನವಂತ ಅವರ ತಂಡ ಅನುದಾನಿತ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಪಡೆದುಕೊಂಡಿತು.
ತಾಲ್ಲೂಕಿನ ಹೊನವಾಡ, ತಾಜಪುರ(ಎಚ್) ಗ್ರಾಮದ ಹಾಗೂ ತಿಕೋಟಾ ಪಟ್ಟಣದಲ್ಲಿರುವ ಎ.ಬಿ.ಜತ್ತಿ ಹಾಗೂ ಮಲ್ಲಿಕಸಂದಲ್ ಅನುದಾನಿತ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ಶಾಲಾ ವಿದ್ಯಾರ್ಥಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವುದು ಭೇಟಿಯ ಮಹತ್ವವಾಗಿದೆ. ಏಕೆಂದರೆ ಅವರು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವವರಾಗಿದ್ದಾರೆ. ಮುಖ್ಯವಾಗಿ ಸ್ವಚ್ಛತೆಗೆ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಮತ್ತು ಮೋಜಿನ ಕಲಿಕೆಯ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಇರುವ ಸ್ಥಿತಿಗತಿ ಅವಲೋಕನ ಮಾಡಿ ವರದಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಾಲಗೇರಿ ಸಿಆರ್ಪಿ ಶರಣಬಸಪ್ಪ ರೆಡ್ಡಿ ತಿಕೋಟಾ ವಲಯ ಬಿಆರ್ಪಿ ಪಿ. ಡಿ. ಕಾಂಬಳೆ, ಶಿಕ್ಷಣ ಸಂಯೋಜಕ ಜಿ.ಟಿ. ಕಾಗವಾಡ, ಎಂ. ಎ.ಹಿರೇಮಠ, ಎಂ.ಜಿ. ಕುಲಕರ್ಣಿ, ಆರ್. ಬಿ. ಶೇಡ್ಯಾಳ, ಎಸ್. ಎ.ವಾಲಿಕಾರ, ಐ. ಕೆ. ನದಾಫ, ನಿವೇದಿತಾ ಹಿರೇಮಠ, ನವೀನ ಹಿರೇಮಠ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

