ಚಡಚಣ: ವ್ಯಸನಗಳು ವ್ಯಕ್ತಿಯ ವ್ಯಕ್ತಿತ್ವನ್ನು ಹಾಳು ಮಾಡುತ್ತವೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ವ್ಯಸನಗಳಿಂದ ದೂರವಿರಬೇಕು ಎಂದು ಪ್ರಾಚಾರ್ಯ ಮನೋಜ ಕಟಗೇರಿ ಹೇಳಿದರು
ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಲಕಲ್ಲದ ಮಹಾಂತ ಶ್ರೀಗಳ ಜನ್ಮದಿನದ ಅಂಗವಾಗಿ ನಡೆದ ವ್ಯಸನ ಮುಕ್ತ ದಿನ ಆಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಅವರು ಮಾತನಾಡಿದರು
ಮಹಾಂತ ಅಪ್ಪಗಳು ಮಹಾಂತ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡುವದರ ಮುಖಾಂತರ ಭಕ್ತರ ಮನೆಗಳಿಗೆ ತೆರಳಿ ಯುವಜನರು ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕುವಂತೆ ಮನವೊಲಿಸಿ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಇಂದು ವಿಶ್ವದಲ್ಲಿ ೭ ಮೀಲಿಯನ್ ಜನ ದುಶ್ಚಟಗಳಿಂದ ಸಾವನ್ನಪ್ಪುತ್ತಿದ್ದು ಯುವ ಪೀಳಿಗೆ ಇದರಿಂದ ದೂರವಿರಬೇಕೆಂದು ಸಲಹೆ ನೀಡಿದರು.
ಎಲ್ಲರೂ ಶ್ರೀಗಳ ಜನ್ಮದಿನದ ಸುಸಂದರ್ಭದಲ್ಲಿ ದುಶ್ಚಟಗಳಿಗೆ ದಾಸರಾಗುವದಿಲ್ಲ ಎಂಬ ಪ್ರತಿಜ್ಞೆ ಮಾಡುವದರ ಮುಖಾಂತರ ಶ್ರೀಗಳ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕ ಬಿ.ಎಸ್.ಅಂಡಗಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶ್ರೀಶೈಲ ಕಾಮಗೊಂಡ, ಎನ್.ಎಸ್.ಎಸ್. ಅಧಿಕಾರಿ ಎಚ್.ಎಸ್ ಮಕಾಂದಾರ, ಬಾಷಾ ಭಾವಿಪಟೇಲ, ಬಾಲವರ್ಧನ ರೆಡ್ಡಿ, ಶಶಿಧರ ಕುಸೂರ, ರಾಜಶೇಖರ ರೆಡ್ಡಿ, ಸುಮಂಗಲಾ ಟೆಂಗಿನಕಾಯಿ, ಸವಿತಾ ಬಿರಾದಾರ, ಎನ್ ಮಹೇಶ ಸೇರಿದಂತೆ ಉಪನ್ಯಾಸಕರು ಮತ್ತು ಸಿಬ್ಬಂದಿ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

