ವಿಜಯಪುರ: ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯ ವ್ಯಾಪ್ತಿಯ ಜಿಲ್ಲೆಗಳ ರೈತರ ಬದುಕು ಹಸನಾಗಲು ವಳಿ ಜಲಾಶಯಗಳ ನೀರು ಮರು ಹಂಚಿಕೆ ಮಾಡುವಂತೆ ವಿಜಯಪುರ- ಬಾಗಲಕೋಟ ಜಿಲ್ಲೆಯ ಎಲ್ಲಾ ರೈತರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಇಂದು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ಮಾಡಿ ನಂತರ ಅಪರ್ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆಣ್ಣೂರ ಅವರ ಮೂಲಕ ಕರ್ನಾಟಕ ಸರ್ಕಾರಕ್ಕೆ ಒತ್ತಡ ಹೆರುವಂತೆ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಅರವಿಂದ ಕುಲಕರ್ಣಿ ಮಾತನಾಡುತ್ತಾ, ಆಲಿಮಟ್ಟಿ ಹಾಗೂ ಬಸವ ಸಾಗರ ಜಲಾಶಯಕ್ಕೆ ಅಂದಾಜು ೨೦೧ ಗ್ರಾಮಗಳು ಭಾದಿತಗೊಂಡು, ೧೩೬ ಗ್ರಾಮಗಳು ಸಂಪೂರ್ಣ ಮುಳುಗಡೆ ಹೊಂದಿದ್ದರು ಕೂಡಾ ಜಿಲ್ಲೆಯ ಕೊನೆಯ ಹಳ್ಳಿಗಳಲ್ಲಿ ಜಲಾಶಯದ ನೀರು ತಲುಪುತಿಲ್ಲ, ಅಧಿಕಾರಿಗಳಿಗೆ ಕೇಳಿದರೆ ಇದು ಮೊದಲೇ ನೀರು ಹಂಚಿಕೆ ಮಾಡಲಾಗಿದೆ ನಾವೇನು ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ, ಆದ್ದರಿಂದ ಜಲಾಶಯದ ನೀರು ಮರು ಹಂಚಿಕೆ ಮಾಡಿ ಎರಡು ಜಲಾಶಯದ ವ್ಯಾಪ್ತಿಯಲ್ಲಿ ಸಮನಾಗಿ ನೀರು ಹಂಚಿಕೆ ಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧಕ್ಷರಾದ ಸಂಗಮೇಶ ಅವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಈ ನೀರಿನ ಅಭಾವ ಉಂಟಾಗಿ ಪ್ರತಿ ಬೇಸಿಗೆಯಲ್ಲಿ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮುಲಕ ನೀರು ಹಾಕಿಕೊಳ್ಳುವುದು ಅನಿವಾರ್ಯವಾಗಲಿದೆ, ಆದ್ದರಿಂದ ಆಲಿಮಟ್ಟಿ ಜಲಾಶಯಕ್ಕೆ ನಮ್ಮ ಹಿರಿಯರ ಹಾಗೂ ಪೂರ್ವಜರ ಫಲವತ್ತಾದ ಲಕ್ಷಾಂತರ ಭೂಮಿ ಕಳೆದುಕೊಂಡು ನಮ್ಮ ಮುಂದಿನ ಪೀಳಿಗೆಗೆ ನೀರು ಸಿಕ್ಕು ನೀರಾವರಿ ಯೋಜನೆಯಿಂದ ಬದುಕು ಉಜ್ವಲಿಸಲಿದೇ ಎಂಭ ಕಾರಣಕ್ಕಾಗಿ ತ್ಯಾಗ ಮಾಡಿದ್ದರು, ಆದರೆ ಅದು ನಮ್ಮ ಜನಪ್ರತಿನಿಧಿಗಳ ಇಚ್ಚಾ ಸಕ್ತಿಯ ಕೊರತೆಯಿಂದ ಇದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ, ಕೂಡಲೇ ಈ ನೀರಿನ ಮರು ಹಂಚಿಕೆ ಆಗಬೇಕು ಎಂದರು,
ಆಲಮಟ್ಟಿಯಲ್ಲಿ ೧೨೩.೦೮೧ ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗುತ್ತದೆ, ಆದರೆ ವಿಜಯಪುರ ಜಿಲ್ಲೆಯ ರೈತರಿಗೆ ೬ ಟಿ.ಎಂ.ಸಿ ಮುಂಗಾರಿಗೆ ಹಾಗೂ ೯ ಟಿ.ಎಂ.ಸಿ ನೀರು ಹಿಂಗಾರಿಗೆ ಕಿರುಕುಳಕ್ಕಾಗಿ ಕೊಡುತ್ತಿದ್ದಾರೆ, ಉಳಿದ ಎಲ್ಲಾ ನೀರು ಬಸವ ಸಾಗರದ ಮೂಲಕ ನೆರೆಯ ಆಂದ್ರ ಪ್ರದೇಶಕ್ಕೆ ಸುಮ್ಮನೆ ಹರಿದುನಹೋಗುತ್ತಿದೆ, ಆದ್ದರಿಂದ ಈ ನೀರಿನ ಹಂಚಿಕೆಯ ವಿಷಯವನ್ನ ಬಹಳ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸೇರಿಕೊಂಡು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ನೀರಾವರಿ ಸಚಿವರಿಗೆ ಮನವರಿಕೆ ಮಾಡಿ, ಒತ್ತಡ ತಂದು ನೀರಿನ ಮರು ಹಂಚಿಕೆ ಆಗಬೇಕು ಎಂದು ಪ್ರೋ ಯಂಕಂಚಿ ಮಾತನಾಡಿದರು
ಈ ವೇಳೆ ತಾ ಅಧ್ಯಕ್ಷರಾದ ಮಹದೇವಪ್ಪ ತೇಲಿ, ಜಿಲ್ಲಾ ಸಂಚಾಲಕರಾದ ರಾಮಗೌಡ ಪಾಟೀಲ(ಬ್ಯಾಲ್ಯಾಳ), ಚನ್ನಬಸಯ್ಯ ಹಿರೇಮಠ, ಸಂಗಪ್ಪ ಟಕ್ಕೆ, ಶಾನೂರ ನಂದರಗಿ, ನಜೀರ ನಂದರಗಿ , ಖಾದರಸಾಬ ವಾಲಿಕಾರ, ರಾಜೇಸಾ ನದಾಫ, ಈರಣ್ಣ ದೇವರಗುಡಿ, ಹೊನಕೊರೆಪ್ಪ ತೇಲಗಿ, ಚನ್ನಬಸಪ್ಪ ಸಿಂದನೂರ, ಶಿವಪ್ಪ ಸುಂಘಟಾನ, ಸಂಗಪ್ಪ ಪಡಸಲಗಿ, ದಾವಲಸಾಬ ನದಾಫ, ಗುರುಲಿಂಗಪ್ಪ ಪಡಸಲಗಿ, ಬಾಗಪ್ಪ ದಿನ್ನಿ, ಮಹೇಶ ನಾಟಿಕಾರ, ರಾಜು ನಾಟಿಕಾರ, ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

