ವಿಜಯಪುರ: ಜಿಲ್ಲಾ ಕಾರ್ಮಿಕ ನೂತನ ಅಧಿಕಾರಿಯಾಗಿ ಆಗಮಿಸಿದ ಶ್ರೀಮತಿ ಉಮಾಶ್ರೀ ಕೋಳಿ ಅವರಿಗೆ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ಬಾಗಲಕೋಟ ಬೆಳಗಾವಿ ಘಟಕಗಳ ವತಿಯಿಂದ ಉಸ್ತುವಾರಿ ಅಧ್ಯಕ್ಷ ಪ್ರಕಾಶ ರಜಪೂತ ಅವರ ನೇತೃತ್ವದಲ್ಲಿ ಕಾರ್ಯದರ್ಶಿ ಸುಲೇಮಾನ್ ಓತಗೇರಿ (ಯೋಗಾಪುರ) ಕಾನೂನು ಸಲಹೆಗಾರ ದಾನೇಶ ಅವಟಿ, ಮಹಿಳಾ ಘಟಕದ ಉಸ್ತುವಾರಿ ನಿರ್ಮಲಾ.ಡಿ.ಎ ಅವರ ಉಪಸ್ಥಿತಿಯಲ್ಲಿ ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಜಿಲ್ಲೆಯ ಸಮಸ್ತ ಕಾರ್ಮಿಕರ ಅದರಲ್ಲೂ ಅಸಂಘಟಿತ ಕಾರ್ಮಿಕರ ಸಬಲೀಕರಣಕ್ಕೆ ಸರಕಾರದ ಸೌಲಭ್ಯ ಒದಗಿಸಲು ಸಿಬ್ಬಂದಿ ವರ್ಗದ ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯದರ್ಶಿ ಸುಲೇಮಾನ್ ಓತಗೇರಿ ಸ್ವಾಗತಿಸಿದರು. ಶ್ರೀಮತಿ ನಿರ್ಮಲಾ ಡಿ.ಎ ನಿರೂಪಿಸಿ, ವಂದಿಸಿದರು
Subscribe to Updates
Get the latest creative news from FooBar about art, design and business.
Related Posts
Add A Comment

