ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರನ್ನು ಬೆಂಗಳೂರಿನಲ್ಲಿ ಪ್ರಜಾಪ್ರಗತಿ ಪತ್ರಕರ್ತರ ಬಳಗದಿಂದ ಗೌರವಿಸಿ ಸನ್ಮಾನಿಸಲಾಯಿತು.
ಬುಧವಾರ ಮುಖ್ಯಮಂತ್ರಿ ಅವರ ಗೃಹ ಕಛೇರಿ ಕೃಷ್ಣಾದಲ್ಲಿ ಮುಖ್ಯ ಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರನ್ನು ಅವಳಿ ಜಿಲ್ಲೆಯ ಪ್ರಜಾಪ್ರಗತಿ ಪತ್ರಕರ್ತರು ಬೇಟಿ ನೀಡಿ ಪ್ರಜಾ ಪ್ರಗತಿ ದಿನ ಪತ್ರಿಕೆ ಉತ್ತರ ಕರ್ನಾಟಕದಲ್ಲಿ ಹೊಸ ಸಂಚಲನ ಮೂಡಿಸಿದ್ದರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ರವಿ ಕುಮಾರ್, ವಿಜಯಪುರ ಜಿಲ್ಲಾ ವರದಿಗಾರ ಗೋಪಾಲ ಕನಿಮಣಿ , ಸಿಂದಗಿ ತಾಲೂಕು ವರದಿಗಾರ ಮಲ್ಲಿಕಾರ್ಜುನ ಅಲ್ಲಾಪೂರ, ಮುದ್ದೇಬಿಹಾಳ ತಾಲೂಕು ವರದಿಗಾರ ಬಸವರಾಜ ಈ ಕುಂಬಾರ, ಇಂಡಿ ತಾಲೂಕು ವರದಿಗಾರ ಶಂಕರಲಿಂಗ ಜಮಾದಾರ, ಬಾಗಲಕೋಟೆಯ ಜಿಲ್ಲಾ ವರದಿಗಾರ ಹುಚ್ಚೇಶ ಜಗಾಪುರ, ಜಮಖಂಡಿ ತಾಲುಕು ವರದಿಗಾರ ಕೇದಾರ ರವಳೋಜಿ ಉಪಸ್ಥಿತರಿದ್ದರು.

” ಇತ್ತೀಚಿಗೆ ಪ್ರಜಾಪ್ರಗತಿ ಬೆಳವಣಿಗೆ ಮತ್ತು ಸುದ್ದಿಗಳ ಬಗ್ಗೆ ಗಮನಿಸುತ್ತಿದ್ದೇನೆ. ಅತ್ಯಂತ ಗಮನಾರ್ಹ ಮತ್ತು ಸಾಮಾಜಿಕ ಕಳಕಳಿಯ ಕಾಳಜಿವುಳ್ಳ ಸುದ್ದಿಗಳು ಬಿತ್ತರಿಸುತ್ತಿರುವುದು ಹೆಮ್ಮೆಯ ವಿಷಯ. ಈ ಪತ್ರಿಕೆ ನಾಡುಕಟ್ಟುವಲ್ಲಿ ಹಾಗೂ ನಾಡಿನ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಲಿ.”
– ಕೆ.ವಿ ಪ್ರಭಾಕರ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು

